| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
FIRST PREV ( Page 1 of 116 ) NEXT LAST
| Panchajanya, kuwait | 2010-09-03 | ವಾರ್ತೆ:ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್ಪಿ ಸವಾಲು Mr.Plain life,ದಲಿತರ ಕೇರಿಗಳೇನು ಪಾಕಿಸ್ತಾನದಲ್ಲಿದೆಯೇ? ಅಲ್ಲಿಗೆ ಹೋಗಲು ನಿಮ್ಮ ಅಪ್ಪಣೆ ಪಡೆಯಬೇಕೆನು...?ಸ್ವಾಮೀಜಿಗಳು ಎಲ್ಲಿಗೆ ಬೇಕಾದರೂ ಹೋಗಲಿ,ನಿಮಗೇನು ಕಷ್ಟ...?ಅವರು ಅಲ್ಲಿಗೆ ಹೋದರೆ ನೀವು ಕಳೆದುಕೊಳ್ಳುವುದಾದರೂ ಏನು? ನಿಜವಾಗಿಯೂ ಇದೊಂದು ಸೋಜಿಗ....!ಈ ಜನ ಸ್ವಾಮಿಜಿ ಬಗ್ಗೆ ಏಕೆ ಈ ರೀತಿಯಲ್ಲಿ ಮಾತನಾಡುತ್ತಾರೆ?ಕೋಮುಗಲಭೆ ಸಂಭವಿಸಿದರೆ ಏನು ಮುಲ್ಲಾಗಳು ಫೀಲ್ದಿಗಿಳಿಯುತ್ತಾರೆಯೇ...? .ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಹೋಗಿ ಅದನ್ನು ಮೊದಲು ಸರಿ ಮಾಡಿ.ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ತೋರಿಸಲು ಬರುತ್ತಿದ್ದಾರೆ....ಭಾಷೆ ಇಲ್ಲದ .......! |
| Panchajanya, Kuwait | 2010-09-03 | ವಾರ್ತೆ:ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ ಸಿದ್ದರಾಮಯ್ಯನಂತಹ ರಾಜಕಾರಣಿಗೆ ಇಂತಹ ಮಾತುಗಳು ಶೋಭೆ ತರುವಂತದ್ದಲ್ಲ. ದಲಿತ ನಾಯಕನಿರಬಹುದು. ಆದರೆ ತಾನು ತಿನ್ನುವುದನ್ನು ಸಮರ್ಥಿಸಿಕೊಳ್ಳುವವನು ನಾಳೆ ಮುಖ್ಯಮಂತ್ರಿಯಾದರೆ ಬಹುಸಂಖ್ಯಾತರ ಭಾವನೆಗಳಿಗೆ ಹೇಗೆ ಬೆಲೆ ಕೊಡಬಲ್ಲ?. ಸಿದ್ದರಾಮಯ್ಯ ಒಬ್ಬ ನಾಸ್ತಿಕ. ಅಂದ ಮಾತ್ರಕ್ಕೆ ಬೇರೊಬ್ಬರ ಧಾರ್ಮಿಕ ಮನೋಭಾವನೆಗೆ ಘಾಸಿ ತರುವಂತಹ ಹೇಳಿಕೆ ನೀಡುವುದು ಸರಿಯಲ್ಲ.ಇದೇ ನಾಸ್ತಿಕ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ತನ್ನ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಮಾಡು ಇಲ್ಲವೇ ಮಡಿ ಹೋರಾಟವಿದ್ದಾಗ, ದೇವೇಗೌಡರ ಕುಟುಂಬ ಸಿದ್ದರಾಮಯ್ಯ ನನ್ನು ಮಕ್ಕಡೆ ಮಲಗಿಸಲು ಇಲ್ಲದ ಭಗೀರಥ ಪ್ರಯತ್ನ ಮಾಡಿತ್ತು. ಜೊತೆಗೆ ಬಿಜೆಪಿ ತನ್ನ ಸ್ಪರ್ಧಿಯನ್ನು ಕಣಕ್ಕಿರಿಸಿರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಸಿದ್ದರಾಮಯ್ಯ ಶರಣಾದದ್ದು ಮಠಮಂದಿರಗಳಿಗೆ. ಮಠಾಧಿಪತಿಗಳ ಕೈಕಾಲು ಹಿಡಿದು ಹೇಗೋ ಚುಣಾವಣೆ ಗೆದ್ದುಬಂದರು. ಆದರೆ ಈಗ ಗೋಮಾಂಸ ತಿನ್ನುತ್ತೇನೆ ಏನುತಪ್ಪು ಎನ್ನುತ್ತಿದ್ದಾರೆ. ಈ ಹೇಳಿಕೆ ಕೇವಲ ಮಾಧ್ಯಮದವರ ಎದುರು ಮಾತ್ರ ಏಕೆ ಹೇಳುವುದು..? ಸಾರ್ವಜನಿಕವಾಗಿ ಹೇಳಲಿ. ಎಷ್ಟು ಓಟು ಬೀಳುತ್ತದೆ ನೋಡೋಣ. ಕಡೂರಿನಲ್ಲಿ ವೀರಶೈವ, ಒಕ್ಕಲಿಗ ಮತ್ತು ಕುರುಬರ ಮತಗಳು ಹೆಚ್ಚಿರುವುದರಿಂದ, ಒಂದು ವೇಳೆ ಅಂತಹ ಹೇಳಿಕೆ ಬಹಿರಂಗವಾಗಿ ಕೊಟ್ಟಲ್ಲಿ ಒಕ್ಕಲಿಗರು ಮತ್ತು ವೀರಶೈವರು ಒಂದಾಗಿ ಕಾಂಗ್ರೆಸ್ಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ. ಇಲ್ಲದಿದ್ದರೆ ಬಿಜೆಪಿ ಗೋಹತ್ಯೆ ನಿಷೇಧ ಜಾರಿಗೆ ತಂದರೆ ,ಕಾಂಗ್ರೆಸ್ಸ್ ಗೆ ಅಧಿಕಾರ ಸಿಕ್ಕಾಗ ಆ ನಿಷೇಧವನ್ನು ವಾಪಾಸ್ಸು ತೆಗೆಯುತ್ತೇವೆ ಎಂದು ಹೇಳಲಿ ನೋಡೋಣ. ಅವರಿಗೂ ಗೊತ್ತಿದೆ. ಒಂದು ವೇಳೆ ಗೋಹತ್ಯೆ ನಿಷೇಧ ಜಾರಿಗೆ ಬಂದದ್ದೆ ಆದಲ್ಲಿ ಈ ಜನ್ಮದಲ್ಲಿ ಅದನ್ನು ಹಿಂತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು. ಏಕೆಂದರೆ ಈ ಹಿಂದೆ ಯಡಿಯೂರಪ್ಪ ಲಾಟರಿ ನಿಷೇಧ, ವೀಡಿಯೊ ಗೇಮ್ ನಿಷೇಧ, ಸೂಪರ್ ಲೊಟ್ಟೋ ನಿಷೇಧ, ಲೈವ್ ಬ್ಯಾಂಡ್ ನಿಷೇಧ, ಅಷ್ಟೇ ಏಕೆ ಸಾರಾಯಿ ನಿಷೇಧ ಮಾಡಿದಾಗಲೂ ಕಾಂಗ್ರೆಸ್ಸ್ ಒಂದಲ್ಲ ಒಂದು ರೀತಿಯಲ್ಲಿ ತಗಾದೆ ತೆಗೆದೇ ಇತ್ತು. ಈ ಎಲ್ಲಾ ನಿಷೇಧಗಳು ಕಾಂಗ್ರೆಸ್ಸ್ ಸರಕಾರ ಇದ್ದಾಗ ಏಕೆ ಸಾಧ್ಯವಾಗಲಿಲ್ಲ?ಇದು ಯಾವುದೂ ಸಮಾಜವಿರೋಧಿಯಾಗಿರಲಿಲ್ಲವೇ......? ಯಾಕೆಂದರೆ ಆಗ ಕಾಂಗ್ರೆಸ್ಸ್ ನ "ನಾವು ದುಡ್ಡು ಮಾಡುತ್ತೇವೆ.ನೀವು ದುಡ್ಡು ಮಾಡಿಕೊಳ್ಳಿ."ಪದ್ಧತಿ ಜಾರಿಯಲ್ಲಿತ್ತು. ಒಂದಂಕಿ ಲಾಟರಿ, ವೀಡಿಯೊ ಗೇಮ್, ಸಾರಾಯಿ, ಲೈವ್ ಬ್ಯಾಂಡ್ ಗಳಿಂದ ಮಕ್ಕಳಿಂದ ಹಿಡಿದು ಯವಕರು, ಮುದುಕರು ಎಲ್ಲರೂ ವ್ಯಸನಿಗಳಾಗಿದ್ದರು. ಕರ್ನಾಟಕದ ಹೆಣ್ಣುಮಕ್ಕಳ ಕಣ್ಣೀರ ಶಾಪವೇ ಕಾಂಗ್ರೆಸ್ಸ್ ಗೆ ಈ ದುಸ್ಥಿತಿ ಬರಲು ಕಾರಣ. ಅಷ್ಟೇ ಅಲ್ಲದೇ, ಕಾಂಗ್ರೆಸ್ಸ್ ನ ಕೋಡಂಗಿ ರಾಜಕಾರಣಿ ಜನಾರ್ಧನ ಪೂಜಾರಿ ಇನ್ನು ಒಂದು ಹೆಜ್ಜೆ ಮುಂದು ಹೋಗಿ ಕಾಂಗ್ರೆಸ್ಸ್ ಗೆ ಅಧಿಕಾರ ಬಂದರೆ ಸಾರಾಯಿ ನಿಷೇಧ ಹಿಂತೆಗೆಯುವುವುದಾಗಿ ಹೇಳಿಕೆ ಭಟ್ಕಳದಲ್ಲಿ ಹೇಳಿಕೆ ನೀಡಿ, ಅಲ್ಲಿಯ ಹೆಣ್ಣು ಮಕ್ಕಳಿಂದ ಮಹಾಮಂಗಳಾರತಿ ಮಾಡಿಸಿ ಕೊಂಡದ್ದಲ್ಲದೆ, ಭಟ್ಕಳದ ಕಾಂಗ್ರೆಸ್ಸ್ ಅಭ್ಯರ್ಥಿ ಸೋಲುವ ಹಾಗೆ ಮಾಡಿದರು. ಈಗ ಯಡಿಯೂರಪ್ಪ ನಿಷೇಧ ಮಾಡಲು ಹೊರಟಿರುವುದು ನಾಡಿನ ಲಕ್ಷಾಂತರ ಅನಾಥ ಮಕ್ಕಳ ಪಾಲಿಗೆ ತಾಯಿ ಎದೆಹಾಲಿಗೆ ಪರ್ಯಾಯವಾಗಿ ದೇವರು ಸೃಷ್ಟಿಸಿದ,ಸಮುದ್ರಮಥನದಲ್ಲಿ ಕಲ್ಪವೃಕ್ಷದೊಂದಿಗೆ ಸೃಷ್ಟಿಯಾದ ಕಾಮಧೇನುವಿನ ಹತ್ಯೆಯನ್ನು ವೈಜ್ಞಾನಿಕವಾಗಿ ನೋಡಿದರೂ, ಅಥವಾ ಧಾರ್ಮಿಕತೆಯಿಂದ ನೋಡಿದರೂ ಗೋಹತ್ಯೆ ನಿಷೇಧ ಸಮರ್ಪಕವಾಗೆ ಇದೆ. ಮನುಷ್ಯತ್ವ ಇಲ್ಲದ ಕಾಡು ಪ್ರಾಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲ. |
| hassanmukha, mangalore/ksa | 2010-09-03 | ವಾರ್ತೆ:ಟೊರೆ೦ಟೊ : ಅಲ್ಖಾಯಿದಾದಲ್ಲಿ ಭಾರತೀಯ ನಾವು ಯಾರನ್ನೂ ಇದುವರೆಗಿನ ಪ್ರತಿಕ್ರಿಯೆಯಲ್ಲಿ ಯಾರನ್ನೂ justify ಮಾಡಲಿಲ್ಲ. ತಪ್ಪು ಯಾರೇ ಮಾಡಲಿ ಅದು ತಪ್ಪೇ. ಆದರೆ ನಮ್ಮ ದೇಶದ ಹೆಚ್ಹಿನ ಮಾಧ್ಯಮಗಳು ಬಡವರ ,ದಮನಿತರ ಪಕ್ಷದಲ್ಲಿ ಬರೆಯುವುದಿಲ್ಲ. ಪೂರ್ವಗ್ರಹ ಪೀಡಿತ ದ್ರಷ್ಟಿಯಲ್ಲಿ ನೋಡದೆ ನಮ್ಮ ದೇಶದ ಆಗುಹೋಗುಗಳನ್ನು ನೋಡಿದಲ್ಲಿ ಸತ್ಯ ಗೋಚರಿಸುತ್ತದೆ. ಎಲ್ಲ ಕಡೆಯಲ್ಲಿ ಲಂಚದ ಹಾವಳಿಯಿರುವಾಗ, ಎಲ್ಲಿತಾನೆ ಯಾರಿಗೆ ನ್ಯಾಯ ಸಿಗಲು ಸಾಧ್ಯ?. ವ್ಯಕ್ತಿಗೆ ಯಾವುದೇ ಹೆಸರಿರಲಿ ಅವನು/ಅವಳು, ಮಾಡಿದ ಕುಕೃತ್ಯಕ್ಕೆ ಆ ಧರ್ಮವನ್ನು ದೂರುವುದು ಸರಿಯೆನಿಸುವುದಿಲ್ಲ. ನಮ್ಮ ಮಾಧ್ಯಮ ಮತ್ತು ರಾಜಕಾರಣಿಗಳಿಗೆ ಒಂದು ಚಾಳಿ ಇದೆ . ಅದೇನೆಂದರೆ ಎಲ್ಲಿಯಾದರೂ ಏನಾದರೂ ಸಂಭವಿಸಿದರೆ ಅದನ್ನು ಇಸ್ಲಾಮಿಕ ಸಂಘಟನೆಗಳ ಮೇಲೆ ಗೂಬೆ ಕೂರಿಸುವುದು. ಇದು ಪ್ರಪಂಚದಾದ್ಯಂತ ನಡೆಯುವ ಪ್ರಕ್ರಿಯೆ.ಇದಕ್ಕೆ ಇಸ್ರೇಲಿಗಳ ಕುಮ್ಮಕ್ಕು ಇದೆ. black sheep ಗಳು ಎಲ್ಲ ಧರ್ಮದ ಅನುಯಾಯಿಗಳಲ್ಲಿ ಇವೆ. ತಪ್ಪನ್ನು ಯಾರೂ,ಯಾವ ಧರ್ಮದ ಅನುಯಾಯಿಗಳೂ ಒಪ್ಪುವುದಿಲ್ಲ. ಏನಂತೀರಿ ಭರತ್ ರವರೆ? |
| Pradeep Kumar, Basrur | 2010-09-03 | ವಾರ್ತೆ:ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್ಪಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ದಯಾ ನಂದ ಪಾಂಡೆ ಮುಂತಾದವರು ನಡೆಸಿದ ಭಯೋತ್ಪಾದಕ ಕೃತ್ಯಗಳು ಬೆಳಕಿಗೆ ಬರುತ್ತಿ ದ್ದಂತೆಯೇ, ‘ ಹಿಂದೂ ಭಯೋತ್ಪಾದನೆ’ ಎಂಬ ಪದವು ಹೆಡೆಯೆತ್ತಿತು. ಹಿಂದೂರಾಷ್ಟ್ರ, ಹಿಂದುತ್ವ ಹಾಗೂ ಸಂಘಪರಿವಾರದ ವಿಚಾರಧಾರೆ ಗಳಿಂದ ಪ್ರೇರಿತವಾದ ಗುಂಪುಗಳು ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್, ಮಡ್ಗಾಂವ್ ಮತ್ತು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣ ದಲ್ಲಿ ಶಾಮೀಲಾಗಿರುವುದು ತನಿಖೆಯಿಂದ ಬಯಲಾಗಿದೆ.
ವಿಪರ್ಯಾಸವೆಂದರೆ, ಈ ಸ್ಫೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸತ್ತವರು ಮುಸ್ಲಿಮರೇ ಆಗಿದ್ದರೂ ಸಹ, ಪೊಲೀಸರು ಘಟನೆಗಳ ಬಳಿಕ ತಕ್ಷಣವೇ ಬಂಧಿಸಿದ್ದುದು ಅಮಾಯಕ ಮುಸ್ಲಿಂ ಯುವಕರನ್ನು. ನಮಾಝ್ನಂತಹ ಸಂದರ್ಭಗಳಲ್ಲಿ ಜನರು ಗರಿಷ್ಠ ಸಂಖ್ಯೆಯಲ್ಲಿ ಒಂದೆಡೆ ಸೇರುವ ಸಮಯ ವನ್ನು ಲೆಕ್ಕಹಾಕಿಕೊಂಡೇ ಹೆಚ್ಚಿನ ಸ್ಫೋಟಗಳನ್ನು ಆಯೋಜಿಸಲಾಗಿತ್ತು. ನಿರಪರಾಧಿ ಮುಸ್ಲಿಂ ಯುವಕರನ್ನು ಬಂಧಿಸುವುದನ್ನು ನಿಲ್ಲಿಸ ಬೇಕು ಹಾಗೂ ನೈಜ ಅಪರಾಧಿಗಳನ್ನು ಸೆರೆಹಿಡಿಯಬೇಕೆಂಬ ಮಾನವಹಕ್ಕು ಚಳವಳಿ ಕಾರ್ಯಕರ್ತರ ಧ್ವನಿಯು ತನಿಖಾಧಿಕಾರಿಗಳ ಕಿವಿಗೆ ಬೀಳಲು ತುಂಬಾ ಸಮಯ ತಗಲಿತು.
ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಆಕೆಯ ದುಷ್ಟಕೂಟವು ಶಾಮೀಲಾಗಿದೆಯೆಂಬ ಸತ್ಯವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳದ ವರಿಷ್ಠ ಹೇಮಂತ್ ಕರ್ಕರೆ, ಬಲವಾದ ಪುರಾವೆಗಳೊಂದಿಗೆ ಬಯಲಿ ಗೆಳೆದಾಗ, ಒಟ್ಟಾರೆ ಪರಿಸ್ಥಿತಿ ಬೇರೆಯೇ ತಿರುವನ್ನು ಪಡೆದುಕೊಂಡಿತು. ಹೇಮಂತ ಕರ್ಕರೆ ಓರ್ವ ದೇಶದ್ರೋಹಿ ಮತ್ತು ರಾಷ್ಟ್ರೀಯವಾದಿ ವಿರೋಧಿ ಎಂದು ಮೊದಮೊದಲು ಹಿಂದುತ್ವವಾದಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದರು. ದುರದೃಷ್ಟವಶಾತ್ 2008ರ ನವೆಂಬರ್ 26ರ ಮಧ್ಯರಾತ್ರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹೇಮಂತ್ ಕರ್ಕರೆ ಮಡಿದರು.
ಬಜರಂಗದಳ, ಅಭಿನವ್ ಭಾರತ್ ಹಾಗೂ ಸನಾತನ ಸಂಸ್ಥೆಯಂತಹ ಸಂಘ ಟನೆಗಳ ಜೊತೆ ಸಂಪರ್ಕವಿದ್ದ ಗುಂಪು ಗಳು ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್, ಮಡ್ಗಾಂವ್ ಸ್ಫೋಟಗಳಲ್ಲಿ ಶಾಮೀಲಾಗಿರುವುದನ್ನು ಮಹಾರಾಷ್ಟ್ರ ಎಟಿಎಸ್ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಸಾಕ್ಷಾಧಾರಗಳ ಸಮೇತ ಬಹಿರಂಗ ಪಡಿಸಿವೆ. ಆದರೆ ಹಿಂದುತ್ವವಾದಿ ರಾಜಕಾರಣಿ ಗಳು ಮಾತ್ರ ‘‘ಈ ಭಯೋತ್ಪಾದಕ ಕೃತ್ಯಗಳಿಗೆ ಹಿಂದುತ್ವದ ಜೊತೆ ನಂಟು ಕಲ್ಪಿಸಕೂಡದು.
ಯಾಕೆಂದರೆ ಭಯೋತ್ಪಾದನೆಯಲ್ಲಿ ಯೆಹೂದ್ಯ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಗಳದೇ ಏಕಸ್ವಾಮ್ಯ’ವೆಂಬ ಬುಡಮೇಲು ರಹಿತವಾದವನ್ನು ಮುಂದಿಟ್ಟಿದ್ದರು. ಇನ್ನೂ ಕೆಲವು ಪತ್ರಕರ್ತರಂತೂ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಹಿಂದು ಭಯೋತ್ಪಾದನೆಯೆಂಬುದು ಇಲ್ಲ. ಏನಿದ್ದರೂ ಇಬ್ರಾಹೀಂ ಅನುಯಾಯಿಗಳ ಧರ್ಮಗಳೇ (ಯೆಹೂದ್ಯ, ಕ್ರೈಸ್ತ, ಇಸ್ಲಾಂ) ಭಯೋ ತ್ಪಾದನೆಯ ಜೊತೆ ನಂಟು ಹೊಂದಿವೆ’ ಯೆಂದು ವಾದಿಸಿದ್ದರು |
| hassanmukha, mangalore/ksa | 2010-09-03 | ವಾರ್ತೆ:ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ? ಅಂದರೆ ಜಾತಿ ವ್ಯವಸ್ತೆಯನ್ನು ಮಾಡಿದ ಮನು ಮತ್ತು ಅವನ ಕೂಟವನ್ನು ತಲೆ ಕೆಟ್ಟವರು ಅಂತ ಹೇಳುತಿರೋ ಮಿ.ರೋಶನ್? ಪಾನ್ಚಜನ್ಯರಿಗೆ ಬೇಸರವಾದೀತು. |
| ಕಂದಾವರ ಮೋಹನ್ ಸಾಲ್ಯಾನ್, Bahrain | 2010-09-02 | ವಾರ್ತೆ:ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ ಒಂದು ಕಡೆ ಜಾತಿ ಇಲ್ಲ ಅನ್ನುತ್ತೇವೆ. ಇನ್ನೊಂದೆಡೆ ಜಾತಿಯತೆ ಇಲ್ಲದಿದ್ದರೆ ಮಧ್ಯಮ ವರ್ಗದ ಜಾತಿಗಳು ಮೂಲೆ ಗುಂಪಾಗುವ ಪರಿಸ್ಥಿತಿ ಇದೆ. ಜಾತಿಯ ಮೇಲೆ ಅಭಿಮಾನ ಬೇಕು , ಇದರಿಂದ ಮನುಷ್ಯನನ್ನು ಸಮಾಜದಲ್ಲಿ ಗುರುತಿಸಲು ಅವಕಾಶ ಸಿಗುತ್ತದೆ ಅದಕ್ಕಾಗಿ ವಿದೇಶದಲ್ಲಿ ವಾಸಿಸುವ ಭಾರತೀಯರು ತಮ್ಮ ತಮ್ಮ ಜಾತಿ - ಪಂಗಡಗಳನ್ನು ಒಗ್ಗೂಡಿಸಿ ವರ್ಷಕ್ಕೊಂದೆರಡು ಭಾರಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮ, ಮುಂದಿನ ಅಕ್ಟೋಬರ್ ತಿಂಗಳ 08 ಶುಕ್ರವಾರದಂದು ಬಹರೈನ್ ದೇಶದಲ್ಲಿರುವ ಶ್ರೀ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ವಿಶ್ವಕರ್ಮ ಪೂಜಾಮಹಹೋತ್ಸವವು ಪ್ರಖ್ಯಾತ ಜೋತಿಷ್ಯ ವಾಸ್ತುಶಾಸ್ತ್ರ ತಜ್ಣ ಶ್ರೀಯುತ ಅಶೋಕ್ ಪುರೋಹಿತ್ ಇವರ ದಕ್ಷ ನೇತೃತ್ವದಲ್ಲಿ ನೆರವೇರಲಿದೆ...ಬಹರೈನ ನಲ್ಲಿ ವಾಸಿಸುವ ಸಧ್ಬಕ್ತ ಮಹಾಶಯರು ಈ ಕಾರ್ಯಕ್ರಮಕ್ಕೆ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಿ ಎಂದು ವಿನಂತಿ.....ಜೈ ಹೋ.... |
| Ashok, Mumbai | 2010-09-02 | ವಾರ್ತೆ:'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ ಗ್ರಹ ಸಚಿವ ಪಿ ಚಿದಂಬರ ರವರ ಮಾತು ಕಾಂಗ್ರೆಸ್ ಪಕ್ಷದ ಇತರ ಲೀಡರ್ ಗಳು ಆಡುವಂತೆಯೇ ಇದೆಯಲ್ಲದೆ ಭಿನ್ನವಾಗಿ ಏನೂ ಇಲ್ಲ. ಸ್ವಾತಂತ್ರ್ಯ (?) ಸಿಕ್ಕಿ 63 ವರ್ಷಗಳಿಂದ ಈ ಪಕ್ಷ ಮಾಡುತ್ತಾ ಬಂದದ್ದು ಇದನ್ನೇ... ಬಾಯಿ ತೆರೆದರೆ ಅಲ್ಪಸಂಖ್ಯಾಕರು, ದಲಿತರು , ಹಿಂದುಳಿದವರು...ಇವರ ಬಗ್ಗೆ ಮಾತು ಆಶ್ವಾಸನೆಗಳು ಭರವಸೆಗಳು. ಕೇವಲ ಓಟಿಗಾಗಿ ಮಾತು. ಮಾಡಿದ್ದು ಬೇರೇನೂ ಇಲ್ಲ. ಅಲ್ಪ ಸಂಖ್ಯಾತರೆನಿಸಿಕೊಂಡವರಿಗೆ ಇದು ಅರ್ಥವಾಗುತ್ತಿಲ್ಲ. ಯಾರೇ ಆಗಲಿ ಹಿಂದುಧರ್ಮಕ್ಕೆ ಬಾಯಿಗೆ ಬಂದಂತೆ ಬೈದರೆ ಇವರು ಖುಷ್! ಈ ಮಂದಿ ಸ್ವಲ್ಪವಾದರೂ ಅವಲೋಕಿಸಿಕೊಳ್ಳಬೇಕು. ಈ ತನಕ ಇಷ್ಟೊಂದು ದೀರ್ಘ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಅಭ್ಯುದಯಕ್ಕಾಗಿ ಏನು ಮಾಡಿದೆ? ಮಾತುಮಾತಿನಲ್ಲಿಯೂ ಹಿಂದೂ ಧರ್ಮ ಅಥವಾ ಬಿಜೆಪಿಗೆ ಸಹಸ್ರನಾಮ ಮಾಡಿದ್ದು ಮತ್ತು ನಿಮ್ಮ ಉದ್ದಾರಕ್ಕಾಗಿ ಮುಗಿಲೆತ್ತರದ ಆಶ್ವಾಸನೆಗಳ ಭರವಸೆ ಯಲ್ಲದೇ ಏನಾದರೂ ಕಾರ್ಯರೂಪಕ್ಕಿಳಿಸಿ ತೋರಿಸಿದ್ದಿದೆಯಾ? ಜಾತಿ, ಧರ್ಮದ ನಡುವೆ ವೈರತ್ವದ ಅಮಾನುಷ ಕಂದಕವನ್ನು ನಿರ್ಮಿಸಿ ಅಲ್ಪ ಸಂಖ್ಯಾತರ ಓಟು ಪಡೆದು ದೇಶದ ಆಡಳಿತವನ್ನು ಗಳಿಸಿ ರಾಜಕಾರಣಿಗಳು ಅವರವರ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ. ನಂಬಿಕೆಯಿಂದ ಓಟು ಕೊಟ್ಟ ಅಲ್ಪಸಂಖ್ಯಾತರೆನಿಸಿಕೊಂಡವರು ಇದ್ದಲ್ಲೇ ಇದ್ದಾರೆ. ಪ್ರತೀ ಚುನಾವಣೆ ಬಂದಾಗಲೂ ಇದೆ ಕಥೆ. ವರ್ಷಗಳು ಕಳೆದರೂ ಕಥೆ ಬದಲಾಗಲಿಲ್ಲ. ಈಗ ಈ ಚಿದಂಬರಂ ಸಾಹೇಬರು ಮಾಡಿದ್ದೂ ಇದನ್ನೇ. ಕೇಸರೀ ಉಗ್ರವಾದ ಹೆಸರು ಕೊಟ್ಟರು... ಅಲ್ಪಸಂಖ್ಯಾತರು ಖುಷ್. ಮುಂದಿನ ಚುನಾವಣೆಯಲ್ಲಿ ಅವರ ಓಟು ಇವರಿಗೇ ಗ್ಯಾರೆಂಟಿ!! ಆ ಪಕ್ಷ ಮಾಡುವುದು ಇದು ಮಾತ್ರಾ. |
| ರೋಶನ್, ಮಂಗಳೂರು | 2010-09-01 | ವಾರ್ತೆ:ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ? ಹಸನ್ ಮುಕ್ಕ ರವರೆ ಪಾಂಚಜನ್ಯ ಏನು ಪ್ರತಿಕ್ರಿಯೆ ಮಾಡುತ್ತಾರೊ ಅದೇ ಪ್ರತಿಕ್ರಿಯೆಯನ್ನು ನಿಜವಾದ ಭಾರತೀಯ ಮಾಡುತ್ತಾನೆ. ಇಸ್ಲಾಂ, ಕ್ರೈಸ್ತರಲ್ಲಿ ಇರದ ಹಿಂದುಳಿದವರು, ದಲಿತರು, ಹಿಂದುಗಳಲ್ಲಿ ಯಾಕೆ? ಯಾರೋ ತಲೆಕೆಟ್ಟವರು ಮಾಡಿದ ಈ ವ್ಯವಸ್ಥೆಯನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿ ಕೊಂಡಿದ್ದು ರಾಜಕಾರಣಿಗಳು ಮಾತ್ರ ಸ್ವಾತಂತ್ರ್ಯದ ನಂತರ ಇಲ್ಲಿವರೆಗೆ ಎಷ್ಟು ಕೋಟಿ ಕೋಟಿ ಯೋಜನೆ ಹಾಕಿದ್ದಾರೆ? ಏಷ್ಟು ಖರ್ಚು ಮಾಡಿದ್ದಾರೆ? ಎಷ್ಟು ಹಿಂದುಳಿದವರು ಮುಂದೆ ಬಂದಿದ್ದಾರೆ. ಯಾರಾದರೂ ಹೇಳಬಲ್ಲಿರಾ? ಬಿಟ್ಟಿ ಸಿಕ್ಕಿದರೆ, ಸಿಗುವವರೆಗೆ ಹಿಂದುಳಿದ ಸ್ಥಿತಿಯಲ್ಲಿರುತ್ತಾರೆ. ಹುಚ್ಚಿಮುಂಡೆ ಮದುವೇಲಿ ಉಂಡವನೇ ಜಾಣ. |
| ರೋಶನ್ , ಮಂಗಳೂರು | 2010-09-01 | ವಾರ್ತೆ:ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ ಜಾತಿ ರಾಜಕೀಯದಲ್ಲಿ ಸಿಗುವಷ್ಟು ಲಾಭ ಇನ್ನ್ಯಾವ ರಾಜಕಾರಣದಲ್ಲಿ ಸಿಗಲಿದೆ? ಜಾತಿಯನ್ನು ಚಲಾವಣೆಯಲ್ಲಿ ಇಟ್ಟುಕೊಂಡೆ ಇಷ್ಟು ವರ್ಷ ತಮ್ಮ ತಮ್ಮ ಖಜಾನೆ ಗಟ್ಟಿಮಾಡಿ ಕೊಂಡ ರಾಜಕೀಯ ಪಕ್ಷಗಳು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಂದಾದರೂ ಭಾರತದ ಜನತೆಯನ್ನು ಕೇಳಿದೆಯೇ? ಜಾತಿ ತಾರತಮ್ಯದಲ್ಲಿ ಅವಕಾಶಗಳಿಂದ ವಂಚಿತರಾದ ಭಾರತದ ಎಲ್ಲಾರೂ ಸಿಡಿದೆದ್ದರೆ ಈ ರಾಜಕಾರಣಿಗಳ ರಾಜಕೀಯದ ಅವಸ್ಥೆ ಏನಾಗ ಬಹುದೆಂದು ಯೋಚಿಸಿದ್ದಾರೆಯೆ? ಈ ಕುತಂತ್ರಿಗಳು. |
| Panchajanya, Kuwait | 2010-09-01 | ವಾರ್ತೆ:ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ? ಇದಕ್ಕೆ ನನ್ನ ಮೊದಲ ಪ್ರತಿಕ್ರಿಯೆ ಇದು ಯಾವ ಪತ್ರಿಕೆಯಲ್ಲಿ ಬಂದ ವರದಿ ಎಂಬುದನ್ನು ಮೊದಲು ನೋಡಿ. ಆ ಪತ್ರಿಕೆ ನಿಮಗೆ ಮಾತ್ರ ಮೀಸಲು ಮತ್ತು ಮೂಸಲು. ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?
ಸರಿ ನಿಮಗೇಕೆ ಬೇಸರ ಮಾಡಿಸಲಿ ?ಕೇಳಿ ಇಲ್ಲಿ , ಪೇಜಾವರ ಶ್ರೀ ಹೇಳಿದಂತೆ ದಲಿತರು ಹಿಂದುಗಳಾದರೆ ಅವರನ್ನು ವೈಷ್ಣವಧರ್ಮಕ್ಕೆ ಸೇರಿಸುವ ಅಗತ್ಯ ಏನಿದೆ ಎಂಬುದೇ ತಾನೇ ನಿಮ್ಮ ಪ್ರಶ್ನೆ?....!ಅನಾದಿ ಕಾಲದಿಂದಲೂ ಹಿಂದುಗಳಲ್ಲಿ ವೈಷ್ಣವ ಮತ್ತು ಶೈವ ಧರ್ಮಗಳೆಂಬ ಎರಡು ಪಂಗಡಗಳಿದ್ದವು. ಕ್ರಿಶ್ಚಿಯನ್ನರಲ್ಲಿ ರೋಮನ್ ಕೆಥೋಲಿಕ್, ಬ್ಯಾಪ್ಟಿಸ್ಟ್, ಒರ್ತೋಡಾಕ್ಸ್, ಮೊದಲಾದ ಪಂಗಡಗಳಿರುವಂತೆ, ಜೈನರಲ್ಲಿ ಶ್ವೆತಂಬರ ಮತ್ತು ದಿಗಂಬರ ಎಂಬ ಪಂಗಡಗಳಿಲ್ಲವೇ ಹಾಗೆ. ಅಷ್ಟೇ ಏಕೆ ನಿಮ್ಮ ಧರ್ಮದಲ್ಲಿಯೂ ಶಾಫಿ,ಸಲಫಿ,ಸುನ್ನಿ ..ಇನ್ನಿತರ ಪಂಗಡಗಳಿಲ್ಲವೇ ಹಾಗೆಯೇ! ಆಯಾ ಪಂಗಡದ ಪ್ರತಿಪಾದಕರು ಅನುಸರಿಸಿದಂತೆ ಮಾರ್ಗದರ್ಶನ ನೀಡಿದಂತೆ ಅವರ ಅನುಯಾಯಿಗಳು, ಹಿಂಬಾಲಕರು ಮುಂದುವರೆಯುತ್ತಾರೆ....ದ್ವೈತ ಸಿದ್ದಾಂತ ,ಅದ್ವೈತ ಸಿದ್ದಾಂತ, ವಿಶಿಷ್ಟಾದ್ವೈತ ಸಿದ್ದಾಂತ ವನ್ನು ಪ್ರತಿಪಾದಿಸಿದ ಅಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ರು ತಮ್ಮದೇ ಆದ ಮಾರ್ಗಸೂತ್ರದಲ್ಲೇ ತಮ್ಮ ಶಿಷ್ಯವೃಂದ ವನ್ನು, ಅನುಯಾಯಿಗಳನ್ನು, ಭಕ್ತವೃಂದವನ್ನು ಮುನ್ನಡೆಸಿಕೊಂಡು ಬಂದರು. ಹಾಗೆಯೇ ಪೇಜಾವರ ಶ್ರೀ ವೈಷ್ಣವ ಧರ್ಮ ಎಂದು ಹೇಳಿದ್ದಾರೋ ಅಂದರೆ ಆ ಪಂಗಡದ , ಸಿದ್ದಾಂತದ ಅನುಯಾಯಿಗಳಾದ ಅವರು,ಅಹಿಂಸೆಯನ್ನು ನಾಶಮಾಡಿ ಬರುವುದಾದರೆ, ಅಂದರೆ ಮಾಂಸಹಾರವನ್ನು ತ್ಯಜಿಸಿ ಬರುವುದಾದರೆ, ಜೊತೆಗೆ ಸಮಾಜಕಂಟಕ ಮದ್ಯಸೇವನೆಯನ್ನು ಬಿಟ್ಟು ಬರುವುದಾದರೆ ವೈಷ್ಣವ ಪಂಗಡ(ಧರ್ಮ)ದ ದೀಕ್ಷೆಯನ್ನು ನೀಡುವುದಾಗಿ ಹೇಳಿದ್ದರು. ಅಹಾರಪದ್ಧತಿಯಲ್ಲಿ ಮತ್ತು ಉಡುಗೆತೊದುಗೆಗಳಲ್ಲಿ ಇರುವ ಭಿನ್ನತೆಯೇ ಅಲ್ಲವೇ ಧರ್ಮಧರ್ಮಗಳಲ್ಲಿ ಮತ್ತು ಪಂಗಡಗಳಲ್ಲಿ ತನ್ನದು ಮಾತ್ರ ಮಿಗಿಲು ಎಂಬ ಭಾವನೆ ಮೂಡಿಸುವುದು? ಶೈವ ಪಂಗಡದ ಜನ ಶಿವನನ್ನು ಆರಾಧಿಸುತ್ತಾರೆ,ವೈಷ್ಣವ ಪಂಗಡದವರು ವಿಷ್ಣುವನ್ನು ಆರಾಧಿಸುತ್ತಾರೆ.ನಮ್ಮ ದೋಸೆಯಲ್ಲಿ ತೂತು ಹುಡುಕಲು ಹೊರಡಬೇಡಿ. ನಿಮ್ಮ ಕಾವಲಿಯಲ್ಲೇ ತೂತು ಇರುವಾಗ......!ನಿಮ್ಮ ಎಲ್ಲ ಪದ್ಧತಿಗಳು ನಮಗೆ ಉಲ್ಟಾ ಎಂದುಕೊಂಡರೆ, ನಿಮ್ಮಲ್ಲೇ ಇರುವ ಕೆಲವು ಪಂಗಡಗಳು ನಿಮಗೆ ಉಲ್ಟಾ ಇದೆಯಲ್ಲ...?ಅಥವಾ ನಿಮ್ಮ ಆಚರಣೆಗಳೇ ಅವರಿಗೆ ಉಲ್ಟಾವೆ?. ನಿಮ್ಮ ಉಪವಾಸ ವ್ರತ ಶುರುವಾದ ಮರುದಿನ ಕೆಲ ಪಂಗಡದ ಜನ ಶುರು ಮಾಡುತ್ತಾರೆ ಅಲ್ಲವೇ?. ನೀವು ರಂಜಾನ್ ಹಬ್ಬ ಆಚರಣೆ ಮಾಡುವ ಮರುದಿನ ಕೆಲವು ಪಂಗಡ ಜನರು ಹಬ್ಬ ಆಚರಿಸುತ್ತಾರೆ ಅಲ್ಲವೇ? ಕೆಲವು ಪಂಗಡದ ಜನರು ಪ್ರತ್ಯೇಕ ಮಸೀದಿಗಳಿಗೆ ಹೋಗುತ್ತಾರೆ ಏಕೆ?ಅವರನ್ನೇಕೆ ನಿಮ್ಮ ಮಸೀದಿಗೆ ಸೇರಿಸುವುದಿಲ್ಲ ?. ನಿಮ್ಮ ಪತ್ರಿಕೆಗೆ ಹೇಳಿ ಮೊದಲು ಆ ಕಾವಲಿಯ ತೂತನ್ನು ಮುಚ್ಚಲು.!ಮತ್ತೆ ಹಿಂದೂಗಳ ವಿಷಯಕ್ಕೆ ಬರಲಿ.!
ಇಂದು ಶ್ರೀಕೃಷ್ಣ ಜಯಂತಿ. ಪೇಜಾವರ ಶ್ರೀ ಯವರು ಅವರದೇ ಆದ ವ್ರತಾಚರಣೆಯಲ್ಲಿ ತೊಡಗಿರಬಹುದು...ಅಥವಾ ಉಪವಾಸದಲ್ಲಿಯೇ ಇರಬಹುದು.ನೀವೀಗ ಆಚರಿಸುತ್ತಿಲ್ಲವೇ...?ನಿಮಗೀಗ ಊಟಮಾಡಿ ಎಂದರೆ ನೀವು ತಯಾರಿದ್ದೀರಾ?ಅಂತಹದರಲ್ಲಿ ಅವರು ಊಟ ಮಾಡಲಿಲ್ಲ ಎಂದು ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿರುವುದು ಯಾಕೆ?
ನಿಮ್ಮ ಪತ್ರಿಕೆಯ ಸಂಪಾದಕರು ಹೇಳಿರುವ ಪ್ರಕಾರ ಮತಾಂತರ ಎನ್ನುವುದು ದಲಿತರಿಗೆ ಬಿಡುಗಡೆಯ ದಾರಿ. ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ದಲಿತರಾಗಿದ್ದರು ಎಂದು ಹೇಳಿದ ಹಾಗಾಯ್ತು. ಈಗ ಏನಂತೀರಿ ಅದಕ್ಕೆ?. ಸ್ವತಂತ್ರ ಭಾರತದಲ್ಲಿ 63 ವರ್ಷಗಳಿಂದಲೂ ದಲಿತರನ್ನು ಮೇಲೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ಇಷ್ಟು ವರ್ಷಗಳಾದರೂ ಅವರಿಗೆ ಮೇಲೆ ಬರಲಾಗಲಿಲ್ಲ ಎಂದರೆ ಅದು ರಾಜಕೀಯ ಪಕ್ಷಗಳ ಕಸರತ್ತಿನ ಪ್ರಭಾವ. ಇಷ್ಟೆಲ್ಲಾ ಮಾಡುವುದರ ಬದಲು ಅವರಿಗೆ ಶಿಕ್ಷಣವನ್ನು ಕಡ್ಡಾಯ ಮಾಡಿದ್ದರೆ ಸಾಕಿತ್ತು. ಸುಶಿಕ್ಷಿತ ದಲಿತರಿಗೆ ಮಾತ್ರ ಮೀಸಲಾತಿ ಎಂದು ಮಾಡಿದ್ದರೆ ಅವರು ಯಾವಾಗಲೋ ಪ್ರಗತಿ ಹೊಂದುತ್ತಿದ್ದರು. ರಾಜಕೀಯದಾಟದಲ್ಲಿ ದಲಿತರು ಸೊರಗಿದರು ಮಾತ್ರವಲ್ಲ, ಇತರ ಧರ್ಮಗಳ ಪುಸಲಾಯಿಸುವಿಕೆಗೆ ಮರುಳಾಗಿ ತಮ್ಮ ನೆಮ್ಮದಿಯನ್ನೇ ಕಳೆದುಕೊಂಡರು. ಅದಕ್ಕಾಗಿ ನೀವು ಕೂಡ ಮನೆಬಿಟ್ಟು ಹೋಗಬೇಡಿ ಉಳಿದವರಂತೆ ಎಂದು ದಲಿತರಿಗೆ ಪೇಜಾವರಶ್ರೀಯವರು ಜಾಗೃತಿಯನ್ನು ಉಂಟುಮಾಡುತ್ತಿರುವುದು ಬಹುಷಃ ಆ ಸಂಪಾದಕರಿಗೆ ಏಕೆ ತಡೆದು ಕೊಳ್ಳಲಾಗುತಿಲ್ಲ ಎಂಬುದು ಇಡೀ ಮಂಗಳೂರಿಗೆ ಗೊತ್ತಿದೆ.
ಇಂತಹ ವರದಿಗೆ ತಲೆಕೆಡಿಸಿಕೊಳ್ಳದೆ ವಿಶಾಲವಾಗಿ ಯೋಚಿಸುವುದನ್ನು ಆರಂಬಿಸಿ ಹಸನ್ಮುಖ ಅವರೇ.......ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?think my friend....! |
| Bharath Kumar, Manipal | 2010-08-31 | ವಾರ್ತೆ:ಮೆಕ್ಸಿಕನ್ ಚೆಲುವೆ..2010 ರ ವಿಶ್ವ ಸುಂದರಿ ರೋನಾಲ್ಡ್ ರವರೆ, ನೀವೇ ಬರೆಯುವಂತೆ there's huge difference between Kumbhamela and Miss universe... OK. ಅದಕ್ಕೆ ಇನ್ನೊಮ್ಮೆ ನಿಮ್ಮದೇ ಗಾದೆ ಮಾತು, ಅವರವರ ಭಾವಕ್ಕೆ ಅವರವರ ಭಕುತಿಗೆ.... ಈ ನಿಮ್ಮ ಗಾದೆ ಮಿಸ್ ಯುನಿವರ್ಸ್ ಗೆ ಮಾತ್ರ ಸೀಮಿತವೇ ಅದು ಕುಂಭ ಮೇಳಕ್ಕೆ ಅವಲಂಬಿಸುವುದಿಲ್ಲವೇ? ಅಥವಾ ಹಿಂದೆ ಬರೆದಿದ್ದ ಪ್ರತಿಕ್ರಿಯೆ ಮರೆತುಹೋಗಿದೆಯೇ? ನೀವೇ ಬರೆಯುವಂತೆ , you have many hindu friends and family members. ಹಾಗಿರುವಾಗ ನೀವು ಇಂತಹಾ ವಿಷಯಗಳಿಗೆ ಪ್ರತಿಕ್ರಿಯೆ ನೀಡಲು ಹೋಗಲೇ ಬಾರದು. don't give any comments... let them live their own life how they wish .... you only mentioned, when you don't like such programmes switch of the TV... and forget it. ರೋನಾಲ್ಡ್ ರವರೇ, ನಿಮ್ಮ ಪ್ರತಿಕ್ರಿಯೆ ನೋಡುವಾಗ ಅರ್ಥವಾಗುವುದೊಂದೇ. ಕುಂಭಮೇಳದ ಸಾಧುಗಳ ವರ್ತನೆ ತಪ್ಪು, ಮಿಸ್ ಯುನಿವರ್ಸಿನ ಲಲನಾಮಣಿಗಳ ವರ್ತನೆ ಸರಿ!!! ಆದರೆ ನನ್ನ ಅಂದಾಜಿನಲ್ಲಿ ನಿಮಗೆ ಅರ್ಥವಾಗದಿದ್ದ ಅಂಶ ಎಂದರೆ ಈ ಕುಂಭಮೇಳದ ಸಾಧುಗಳು ಸರ್ವಸಂಗ ಪರಿತ್ಯಾಗಿಗಳು. ತಮ್ಮ ಜೀವನದಲ್ಲಿ ಯಾವುದೇ ಆಶೆ ಆಕಾಂಕ್ಷೆಗಳಿಗೆ ಬಲಿಬೀಳದೆ ಸರ್ವವನ್ನೂ ತ್ಯಾಗಮಾಡಿದವರು. ಒಬ್ಬ ಸಾಮಾನ್ಯ ಮನುಷ್ಯನಿಂದ ಸುಲಭದಲ್ಲಿ ಸಾಧ್ಯವಾಗದ ಕಾರ್ಯವಿದು. ಆದರೆ ಮಿಸ್ ಯುನಿವರ್ಸಿನ ಮಹಿಳಾಮಣಿಗಳು ಹಣಕ್ಕಾಗಿ, ಬರೇ ಹಣಕ್ಕಾಗಿ (ಖ್ಯಾತಿಗಾಗಿಯೂ ಅಲ್ಲ) ಎಲ್ಲೆಂದರಲ್ಲಿ ಬಟ್ಟೆಬಿಚ್ಚುವವರು. ಸೆನ್ಸಾರ್ ನಂತಹಾ ಕಡಿವಾಣಗಳಿಲ್ಲದಿದ್ದರೆ ಇದ್ದರೆ ಆ ಮೇಲೆ ಕೆಳಗೆ ಇರುವ ಎರಡು ಚೂರುಗಳನ್ನೂ ಕಿತ್ತೆಗೆಯಲು ಹಿಂಜರಿಯುವವರಲ್ಲ ಅವರು. ಅಲ್ಲೇ ಇರುವುದು... huge difference between Saadhu's of Kumbha Mela and candidates of Miss Universe!!! |
| ಭಜರಂಗಿ, ಮಂಗಳೂರು | 2010-08-31 | ವಾರ್ತೆ:ಉಡುಪಿ : ಕರಾವಳಿ ರಕ್ಷಣೆಗಾಗಿ ಹೋಮ್ ಗಾರ್ಡ್ ಗಳ ಆಯ್ಕೆ ಪ್ರಕ್ರಿಯೆಗೆ ಇ೦ದು ಚಾಲನೆ ಅಸ್ಲಾಂ ಬಾರಿ ತಾವು ಹೇಳಿದಂತೆ ಭಜರಂಗ ದಳದವರನ್ನೇ ಆಯ್ಕೇ ಮಾಡಿದರೆ ಒಳ್ಳೆಯದು ’ಕರಾವಳಿ ರಕ್ಷಕರಾಗಿ’ ಕಡಲ ಮೂಲಕ ಬರುವ ಕಳ್ಳಕಾಕರ ಮೇಲೆ ಕಣ್ಣಿಟ್ಟು ಕಾಯುದರೊಂದಿಗೆ, ದುಷ್ಕೃತ್ಯ ಎಸಗುವ ಮತಾಂಧರು, ಮತಪ್ರಾಚಾರಕರು ಪ್ರಚೋದನೆ ಮಡುವವರ ಮೇಲೆ ಕಣ್ಣಿಡ ಬಹುದಲ್ಲವೇ ಕರಾವಳಿಯ ಶಾಂತಿಯನ್ನು ಹಾಳು ಮಾಡುತ್ತಿರುವರನ್ನು ಮಟ್ಟ ಹಾಕಲು ಭಜರಂಗ ದಳದವರಿಗೆ ಮಾತ್ರ ಸಾದ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದಕ್ಕೆ ಥ್ಯಾಂಕ್ಸ್.
|
|