ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ... |
ಪ್ರಕಟಿಸಿದ ದಿನಾಂಕ : 2010-02-01
ಕೊಲ್ಲಿ ರಾಷ್ಟ್ರದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕರ್ನಾಟಕದ ಪಂಚ ಭಾಷಿಗರ ಸಂಘಟನೆಗಳ ವೈವಿಧ್ಯಮಯ ಕಾರ್ಯಕ್ರಮಗಳ ದೃಶ್ಯವನ್ನು ಸೆರೆಹಿಡಿದು ಮಾಧ್ಯಮಗಳಾದ ಗಲ್ಫ್ ಕನ್ನಡಿಗ, ದಾಯಿಜಿವರ್ಲ್ಡ್, ಊರಿನ ಉದಯವಾಣಿ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ವರ್ಣರಂಜಿತವಾಗಿ ಛಾಯ ಚಿತ್ರಗಳ ಮೂಲಕ ವರದಿಯನ್ನು ಮುಟ್ಟಿಸಿದ ಶ್ರೀಯುತ ಸುಜಯ್ ಕುಮಾರ್ ಬೆಂದೂರ್ ಗಲ್ಫಿನಲ್ಲಿ ತಮ್ಮ ಸೇವೆಯಲ್ಲಿ ನಿವೃತಿಯನ್ನು ಪಡೆದು ತಮ್ಮ ತಾಯಿ ನಾಡಿಗೆ ಹಿಂತಿರುಗಿದ್ದಾರೆ.

ಮಂಗಳೂರಿನಿಂದ 1985 ರಲ್ಲಿ ದುಬಾಯಿಗೆ ಬಂದು ಪ್ರಸ್ತುತ ಅಲ್ ದಾನ ಪೆಸಿಲಿಟಿ ಮ್ಯಾನೆಜ್ ಮೆಂಟಿನಲ್ಲಿ ವೃತ್ತಿ. ಪ್ರವೃತ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು, ಜೊತೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೆಬ್ ಸೈಟ್ ಮೂಲಕ ಸುದ್ದಿಚಿತ್ರ ಪ್ರಕಟಿಸುತ್ತಾ ಛಾಯಚಿತ್ರಗ್ರಾಹಕರಾಗಿ ಪರಿಚಿತರು.
ಯು. ಎ. ಇ. ಯಲ್ಲಿ ಕರ್ನಾಟಕ ಪರ ಸಂಘಟನೆಗಳಾದ ಯು. ಎ. ಇ. ತುಳುಕೂಟ, ಅಬುಧಾಬಿ, ದುಬಾಯಿ, ಶಾರ್ಜಾ, ಅಲ್ ಐನ್ ಅಲ್ ಬುರೈಮಿ ಕರ್ನಾಟಕ ಸಂಘಗಳು, ಯು. ಎ. ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ಮೊಗವೀರ್ಸ್ ಯು. ಎ. ಇ., ವಿಶ್ವಕರ್ಮ ಸೇವಾ ಸಮಾಜ ಯು. ಎ. ಇ. , ಮಂಗ್ಳುರ್ ಕೊಂಕಣ್ಸ್, ಎಸ್. ಎಂ. ಕೆ. ಸಿ. , ದಾಯಿಜಿ ರಂಗ್ ಮಂದಿರ್, ದಾಯಿಜಿ ದುಬಾಯಿ, ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ., ಕೆ. ಸಿ. ಒ. ಅಬುಧಾಬಿ, ಜಿ. ಎಸ್. ಬಿ., ಯಕ್ಷಮಿತ್ರರು, ಅಂಬಲತೆರೆವಿಷನ್, ಧ್ವನಿ ಪ್ರತಿಷ್ಠಾನ ಇತ್ಯಾದಿ..... ಸುಮಾರು ನಲವತ್ತರಿಂದ ಐವತ್ತು ವಿವಿಧ ಕರ್ನಾಟಕಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಸ್ನೇಹಮಿಲನ, ವಿಹಾರ ಕೂಟ, ಕ್ರೀಡಾಕೂಟ, ನಾಟಕ ಯಕ್ಷಗಾನ, ಅರೋಗ್ಯಶಿಬಿರ, ರಕ್ತದಾನ ಶಿಬಿರ, ವಾರ್ಷಿಕೋತ್ಸವ, ಪೂಜಾ ಕಾರ್ಯಕ್ರಮಗಳು ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳ ದೃಶ್ಯ ಸುಜಯ ಬೆಂದೂರ್ ರವರ ಕ್ಯಾಮೆರಾದಲ್ಲಿ ಸೆರೆಹಿಡಿದು ವೆಬ್ ಸೈಟ್ ನ ಮೂಲಕ ಸುದ್ದಿ ಪ್ರಸಾರವಾಗಿದೆ.



ದಿನಪೂರ್ತಿ ನಡೆಯುವ ಕಾರ್ಯಕ್ರಮಗಳು, ಬಿಸಿಲು ಚಳಿ ಎನ್ನದೆ, ರಾತ್ರಿಯ ಕಾರ್ಯಕ್ರಮ ಮುಗಿದ ನಂತರ ನಿದ್ದೆಗೆಟ್ಟು ಸೆರೆಹಿಡಿದ ಚಿತ್ರಗಳನ್ನು ಅಕರ್ಷಕವಾಗಿ ಸಂಯೋಜಿಸಿ ಬೆಳಗ್ಗೆ, ವೀಕ್ಷಕರು ನೋಡುವಾಗ ಸುದ್ದಿ ಚಿತ್ರಸಹಿತ ಪ್ರಕಟವಾಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ತಮ್ಮ ತಮ್ಮ ಚಿತ್ರಗಳು ಪ್ರಕಟವಾಗಿದ್ದರೆ, ನೋಡಿ ಸಂತಸ ಪಡುವ ವೀಕ್ಷಕರು ತಮ್ಮ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿ ವೆಬ್ ಸೈಟ್ ನೋಡುವಂತೆ ಹೇಳಿ ಸಂಭ್ರಮಿಸುತ್ತಾರೆ. ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿದ ತೃಪ್ತಿ ಸುಜಯ್ ಬೆಂದೂರ್ ರವರ ಒಂದು ನಗುವಿನಲ್ಲಿ ವ್ಯಕ್ತವಾಗುತ್ತದೆ.






ಮಾಧ್ಯಮ ಕ್ಷೇತ್ರದಲ್ಲಿ ಸುಜಯ್ ಬೆಂದೂರ್ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿ, ಶ್ರೀ ಬಿ. ಕೆ. ಗಣೇಶ್ ರೈಯವರು ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2004 ರಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ನೇತ್ರತ್ವದಲ್ಲಿ ನಡೆದ 2009ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪದ್ಮಶ್ರೀ ಡಾ. ಬಿ. ಆರ್. ಶೆಟ್ಟಿಯವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ದುಬಾಯಿ ಕರ್ನಾಟಕ ಸಂಘದ ಆಧ್ಯಕ್ಷರಾದ ಶ್ರೀ ಸಿ. ಆರ್. ಶೆಟ್ಟಿಯವರ ಅವಧಿಯಲ್ಲಿ ನವೆಂಬರ್ 2009 ರಲ್ಲಿ ದುಬಾಯಿಯಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾರ್ಲಿಮೆಂಟ್ ಸಂಸದರಾದ, ಹಾಗೂ ಕರ್ನಾಟಕ ಬಿ.ಜೆ.ಪಿ. ರಾಜ್ಯ ಅಧ್ಯಕ್ಷರಾದ ಶ್ರೀ ಸದಾನಂದ ಗೌಡರಿಂದ ಪ್ರಶಸ್ತಿ ಫಲಕ ಸ್ವೀಕಾರ, ಬಿಲ್ಲವಾಸ್ ದುಬಾಯಿ ಮತ್ತು ಎನ್.ಇ. ಸಂಘಟನೆಯ ಅಧ್ಯಕ್ಷರಾದ ಶ್ರೀ ಮೋಹನ್ ಅತ್ತಾವರ್ ರವರ ನೇತ್ರತ್ವದಲ್ಲಿ 12ನೇ ವಾರ್ಷಿಕೋತ್ಸವದ ಅದ್ದೂರಿ ಸಮಾರಂಭದಲ್ಲಿ ಮತ್ತು ಮಂಗ್ಳುರ್ ಕೊಂಕಣ್ಸ್ ಸಂಘಟನೆಯಲ್ಲಿ, ದಾಯಿಜಿವರ್ಲ್ಡ್, ರೇಡಿಯೋ ಸ್ಪೈಸ್ 105.4FMನ ಹೆರ್ಮನ್ ಲೂಯಿಸ್, ಗಲ್ಫ್ ಕನ್ನಡಿಗ, ಶ್ರೀ ವಿಶ್ವಕರ್ಮ ಸೇವಾಸಮಿತಿ ಯು.ಎ.ಇ. ಮತ್ತು ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲ್ಪಟ್ಟಿದ್ದಾರೆ.



ಶ್ರೀಮತಿ ಸ್ಮಿತಾ ಮತ್ತು ಪುತ್ರಿ ಸಂಜನಾ ರೊಂದಿಗೆ ತಾಯಿ ನಾಡಿನಲ್ಲಿ ನೆಲೆಸಲು ಗಲ್ಫ್ ನಿಂದ ನಿರ್ಗಮಿಸುತ್ತಿರುವ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶ್ರೀ ಸುಜಯ ಬೆಂದೂರ್ ರವರಿಗೆ ಯು. ಎ. ಇ. ಯಲ್ಲಿ ನೆಲೆಸಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ಮತ್ತು ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ತಮ್ಮ ಹಸ್ತಕೌಶಲ್ಯದ ಛಾಯಚಿತ್ರ ಕಲೆ ನಿರಂತರ ವಾಗಿ ಮಾನವಕೋಟಿಗೆ ಲಭ್ಯವಗಲಿ, ವಿಶ್ವದ ವಿಸ್ಮಯ ಕ್ಷಣಗಳು ತಮ್ಮ ಕ್ಯಾಮೆರಾದ ಕಣ್ಣಿಗೆ ಬಿದ್ದು ಸೆರೆಯಾಗಿ ಚಿತ್ರರೂಪ ಪಡೆಯಲಿ ಎಂದು ಶುಭವನ್ನು ಹಾರೈಸುತ್ತೇವೆ.
"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಬಿ. ಕೆ. ಗಣೇಶ್ ರೈ ಪೂರ್ವ ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ ಅರಬ್ ಸಂಯುಕ್ತ ಸಂಸ್ಥಾನ
ವರದಿಯ ವಿವರಗಳು |
 |
ಕೃಪೆ : ಬಿ. ಕೆ. ಗಣೇಶ್ ರೈ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-01
|
|
| surathkal Ansari, SURATHKAL | 2010-03-11 | | Congratulation & Welcome to home place. Well wishes for your gulfkannadiga media services at dubai. |
| Aruna, Davangere | 2010-02-04 | | ಗಲ್ಫ್ ನಾಡಿನಿಂದ ತಾಯಿನಾಡಿಗೆ ತೆರಳುತ್ತಿರುವ ಪ್ರೀತಿಯ ಸುಜಯ್, ತಮ್ಮ ಆಸೆ ಆಕಾಂಶೆಗಳನ್ನು ತಾಯಿ ನಾಡಲ್ಲಿ ಆ ದೇವರು ಪೂರೈಸಲಿ ಎಂದು ಕನ್ನಡ ಕೂಟ ಯು.ಎ.ಯಿ.ಯ ಎಲ್ಲಾ ನಿರ್ಧೇಶಕರು ಹಾಗೂ ಸದಸ್ಯರ ಪರವಾಗಿ ಪ್ರಾರ್ಥಿಸುವೆ.GOOD LUCK, WE ALL WISH YOU ALL GRAND SUCCESS, HAPPY JOURNEY |
| Herman Lewis, RADIO APICE 105.4 FM, DUBAI | 2010-02-02 | | Radio Spice 105.4 FM Team bids farewell to Mr. and Mrs. Sujay Bendoor, who are returning to home land Mangalore to continue their day to day life with their only daughter and with their family members back home. We all at RADIO SPICE wish Sujay and Smitha a wonderful and successful life ahead in India with good health, happiness, and long life, peace of mind, good luck and prosperity. No doubt we are all going to miss both of them as both of them were very strong supporters of Radio Spice 105.4 FM.
Sujay do not need any introduction. He has been a very dedicated media warrior for the community and contributed enormously with his hard work, even sacrificing most of his family life, comforts, valuable time just for the love of his community. His selfless services have been acknowledged by one and all which is evident from the send offs and messages he received.
We are going to miss him, his wonderful photographs, his encouraging reports and also specially miss his evergreen smile during any functions of the community.
“Our best wishes to him and his family”
Herman Lewis, Radio Spice 105.4 FM Team
|
| Kamal Amin, Bahrain | 2010-02-01 | | ಆತ್ಮೀಯ ಸುಜಯ್ ಗಲ್ಫ್ ಮಾದ್ಯಮ ರಂಗ ನೀವಿಲ್ಲದೆ ಬಡವಾಗಿದೆ. ನಿಮ್ಮಿಂದ ಮಾದ್ಯಮ ರಂಗಕ್ಕೆ ಇನ್ನಷ್ಟು ಸೇವೆ ಒದಗಿ ಬರಲಿ. ಬಹ್ರೈನ್ ಕನ್ನಡಿಗರ ಪರವಾಗಿ ನನ್ನ ತುಂಬು ಹೃದಯದ ಶುಭ ಹಾರೈಕೆಗಳು..All the best ಗೆಳೆಯ; ಹೃದಯದಿಂದ: - ಕಮಲ್ |
| Sudhakara alva, Mangalore/Dubai | 2010-02-01 | | Any association or group conducting any programme in U.A.E one person with camera will be present there.That is none other than Mr Sujay. We all will be missing you Sujay & Smitha.You are leaving for better prospectus. Everybody has to leave this country one day. God bless you & your family in all your future endeavours. |
| ASHOK BELMAN, BELMAN | 2010-02-01 | | ನಿಮ್ಮ ಮುಂದಿನ ಜೀವನ ಸುಖಕರವಾಗಿ ಸಾಗಲಿ. GOD BLESS FOR YOUR GOOD HELTH SUJAY & FAMILY.SPECIAL THANKS GANESH RAI. |
| K.B.Jagdish, Kinnigoli/Bahrain | 2010-02-01 | | ಅರಬ್ ಸಂಯುಕ್ತ ಸಂಸ್ಥಾನ (ಯು.ಎ.ಇ.)ದಲ್ಲಿ ಕಳೆದ ಹತ್ತು ಹಲವು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀ ಸುಜಯ್ ಬೆಂದೂರ್ ರವರು ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ವೆಬ್ ಸೈಟ್ ಮಾಧ್ಯಮದ ಮೂಲಕ ಛಾಯಾಚಿತ್ರಗ್ರಾಹಕರಾಗಿ ಕನ್ನಡ-ಕೊಂಕಣೆ-ತುಳು ಸಮಾಜ ಬಾಂಧವರ ಜನಮಾನಸದಲ್ಲಿ ಅಲ್ಲದೆ ಸಂಘ-ಸಂಸ್ಥೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ಈ ಕರ್ಮಭೂಮಿ ದುಬೈಯ ಸುದೀರ್ಘಪಯಣವನ್ನು ಮುಗಿಸಿ ತನ್ನ ಜನ್ಮಭೂಮಿ ಮಂಗಳೂರಿಗೆ ಪತ್ನೀ-ಪುತ್ರಿಯ ಜತೆಗೆ ತೆರಳುತ್ತಿರುವ ಶ್ರೀ ಸುಜಯ್ ರವರ ಮುಂದಿನ ಬದುಕು ಸಂತಸಮಯವಾಗಲೆಂದು ಭಗವಂತನಲ್ಲಿ ಮನಸಾ ಪ್ರಾರ್ಥಿಸುತ್ತೇನೆ.
ಶ್ರೀಯುತ ಬಿ.ಕೆ.ಗಣೇಶ್ ರೈ ಯವರ ಸಮಯೋಚಿತ ಸಚಿತ್ರ ವರದಿ ಸ್ವಾಗತಾರ್ಹ. ವಂದನೆಗಳು. |
| Sarvotham Shetty, Pareeka - Abu Dhabi | 2010-02-01 | | On behalf of UAE Kannadiga\'s my best wishes to Sujay & Family. I know parting is sad but one has to accept it. Sujay has done a good job for the community irrespective of card, creed and religion. Sujay and Family are leaving us for their better prospects and GOD bless them in all their future endeavours. |
|