ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು. |
ಪ್ರಕಟಿಸಿದ ದಿನಾಂಕ : 2010-02-08
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಫೆ.08 : ರಾಜ್ಯ ಬಿ.ಜೆ.ಪಿ.ಯ ನೂತನ ಅಧ್ಯಕ್ಷ ಕೆ.ಎಸ್ ಈಶ್ವರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ಭಾರಿಗೆ ಇಂದು ದ.ಕ ಜಿಲ್ಲೆಗೆ ಬೇಟಿ ನೀಡಿದರು. ಜಿಲ್ಲೆಗೆ ನೂತನ ಅಧ್ಯಕ್ಷರಾಗಿ ಅಗಮಿಸಿದ ಅವರನ್ನು ಪಕ್ಷದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬಿಜೆಪಿ ಕಚೇರಿಯಿಂದ ವಾಹನ ರಯಾಲಿ ಮೂಲಕ ಪುರಭವನಕ್ಕೆ ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ ಅವರು ಬಳಿಕ ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಲಾದ ಪಕ್ಷದ ಜಿಲ್ಲೆಯ ಎಲ್ಲಾ ಸ್ಥಾನೀಯ ಸಮಿತಿಗಳ ಕಾರ್ಯಕರ್ತರ, ಜನಪ್ರತಿನಿಧಿಗಳ ಬ್ರಹತ್ ಸಮಾವೇಶವದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಈಶ್ವರಪ್ಪ ಅವರನ್ನು ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಿ, ಶಾಲು ಹೊದಿಸಿ,ಪೇಟಾ ತೊಡಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಬಳಿಕ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಗ್ರಹ ಸಚಿವ ವಿ.ಎಸ್.ಆಚಾರ್, ಬಿಜೆಪಿಯ ನಿಕಟ ಪೂರ್ವ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕ್ರಷ್ಣ.ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗಿಶ್ ಭಟ್, ಸುಳ್ಯ ಶಾಸಕ ಅಂಗರ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮನಾಪ ಮೇಯರ್ ಶಂಕರ್ ಭಟ್, ಉಪ ಮೇಯರ್ ರಜನಿ ದುಗ್ಗಣ್ಣ, ಮಾಜಿ ಜಿಲ್ಲಾಧ್ಯಾಕ್ಷ ಮೋನಪ್ಪ ಭಂಡಾರಿ, ಬಿ.ಜೆ.ಪಿ ನಗರಾಧ್ಶಕ್ಷ ಶ್ರೀಕರ್ ಪ್ರಭು, ಗಂಗಾಧರ ಗೌಡ, ಅನ್ವರ್ ಮಾಣಿಪ್ಪಾಡಿ, ಹಾಗೂ ಇನ್ನಿತರ ಬಿ.ಜೆ.ಪಿಯ ಅನೇಕ ಮುಖಂಡರು ಹಾಜರಿದ್ದರು.
ಬಿ.ಜೆ.ಪಿಯ ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಹಾಗೂ ಜಿಲ್ಲಾ ಕಾರ್ಯದರ್ಶಿ ಬಿ.ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಯನಾ ಜಯಾನಂದ ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-08
|
|
|