ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ. |
ಪ್ರಕಟಿಸಿದ ದಿನಾಂಕ : 2010-02-08
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ. - ನಗರದಲ್ಲಿ ಕೆ.ಎಸ್. ಈಶ್ವರಪ್ಪ
ಮಂಗಳೂರು, ಫೆ.08: ಹಲವು ವರ್ಷಗಳಿಂದ ಹಿರಿಯರು ಮಾಡಿದ ತಪಸ್ಸಿನಿಂದಾಗಿ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ ಗೆ ಸರಕಾರ ನಡೆಸುವ ಭಾಗ್ಯ ದೊರೆಕಿದೆ. ಹಿರಿಯರ ಕನಸುಗಳನ್ನು ಸಾಧನೆ ರೂಪದಲ್ಲಿ ಮಾಡುತ್ತಾ, ರಾಜ್ಯದ ಸರ್ವೊತೋಮುಖ ಅಭಿವ್ರದ್ಧಿ ನಿಟ್ಟಿನಲ್ಲಿ ಬಿ.ಜೆ.ಪಿ ಕಾರ್ಯ ನಿರ್ವಾಹಿಸಲಿದೆ ಎಂದು ರಾಜ್ಯ ಬಿ.ಜೆ.ಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ನುಡಿದರು. ಅವರು ರಾಜ್ಯಧ್ಯಕ್ಷರಾದ ಬಳಿಕ ಮಂಗಳೂರಿಗೆ ಪ್ರಥಮ ಬೇಟಿ ನೀಡಿದ ಸಂಧರ್ಭದಲ್ಲಿ ಬಿ.ಜೆ.ಪಿ ಕಚೇರಿಯಲ್ಲಿ ಎರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಿ.ಜೆ.ಪಿ ಯ ಕಾರ್ಯಕರ್ತರ ಸಂಖ್ಯೆ ಗಣನೀಯವಾಗಿ ಎರಿಕೆ ಆಗಿದೆ. ಹಿಂದಿನ ರಾಜ್ಯಧ್ಯಕ್ಷ ಸದಾನಂದ ಗೌಡರ ನಾಯಕತ್ವದಲ್ಲಿ ಬಿ.ಜೆ.ಪಿ ಉತ್ತಮ ಬೆಳವಣಿಗೆ ಕಂಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಬಳಸಿಕೊಂಡು ಬೂತ್ ಮಟ್ಟದಿಂದ ಕಾರ್ಯಕರ್ತರ ತಂಡಕಟ್ಟಿ ಮುಂದಿನ ಎಲ್ಲಾ ಚುನಾವಣಿಗಳಲ್ಲಿ ಗೆಲ್ಲುವ ದಿಕ್ಕಿನಲ್ಲಿ ಯಶಸ್ಸು ಪಡೆಯಲಿದ್ದೇವೆ. ರಾಜ್ಯದಲ್ಲಿ ಮುಂದಿನ ಅವದಿಯಲ್ಲಿ ಬಿ.ಜೆ.ಪಿಯು 150 ಕ್ಕೂ ಹೆಚ್ಚಿನ ಸ್ಥಾನ ಗಳಿಸುವುದರರೊಂದಿಗೆ ಯಾವುದೇ ಬೆಂಬಲವಿಲ್ಲದೇ ಸ್ವಂತ ಬಲದಲ್ಲಿ ಸರಕಾರ ರಚಿಸಲಿದೆ ಎಂದು ಹೇಳಿದರು.
ಇಡೀ ರಾಜ್ಯದ ಜನರ ಅನೂಕೂಲತೆ ಹಾಗೂ ಹಿತದ್ರಷ್ಟಿಯಿಂದ ಲಕ್ಷ ಲಕ್ಷ ಕಾರ್ಯಕರ್ತರ ತಂಡ ರಾಜ್ಯದಲ್ಲಿ ಕಾರ್ಯಕೈಗೊಳ್ಳಲಿದೆ ಎಂದು ತಿಳಿಸಿದ ಅವರು ಕ್ರಷಿಗೆ ಮೊದಲ ಅದ್ಯತೆ ನೀಡಲಾಗುವುದು ಹಾಗೂ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿ ಅಭಿವ್ರದ್ಧಿ ಕಾರ್ಯಗಳನ್ನು ಕೈಗೊಂಡು ಪೂರ್ಣಗೊಳಿಸಲಿದ್ದೇವೆ ಎಂದರು.
ಸುದ್ಧಿಗಾರರೊಂದಿಗೆ ಪ್ರತಿಕ್ರಿಯೆ:
ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಹಿಂದಿನ ಸರಕಾರ ವಿದ್ಯುತ್ ಉತ್ಪಾದನೆ ಬಗ್ಗೆ ಗಮನ ಕೊಡಲಿಲ್ಲ ಎಂದು ಆರೋಪಿಸಿದರು. ಇದೀಗ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮೂಲ ಸೌಕರ್ಯಗಳ ಸಮಸ್ಯೆ ಇದೆ. ಇದಕ್ಕಾಗಿ ಸರಕಾರ ಬಲವಂತವಾಗಿ ಯಾರ ಭೂಮಿಯನ್ನು ವಶಪಡಿಸುವುದಿಲ್ಲ ಅವರನ್ನು ಒಪ್ಪಿಸಿ ಅಭಿವ್ರದ್ಧಿ ಕಾರ್ಯ ಕೈಗೊಳ್ಳುವುದು ನಮ್ಮ ನಿಲುವು ಎಂದು ಈಶ್ವರಪ್ಪ ತಿಳಿಸಿದರು.
॒ ನ್ಯಾ| ಸೋಮಶೇಖರ್ ಅಯೋಗ ಮದ್ಯಂತರ ವರದಿಯನ್ನು ಮಾದ್ಯಮದ ಮುಂದೆ ಬಹಿರಂಗ ಘೋಷಣೆ ಮಾಡಿರುವುದು, ಸರಿಯಲ್ಲ ಅವರು ಅದನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ನೀಡಬೇಕಿತ್ತು ಇದರ ಹಿಂದೆ ಯಾವುದೋ ಒಂದು ಸಂಚು ಇದೆ - ಈಶ್ವರಪ್ಪ.
॒ ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ. - ಈಶ್ವರಪ್ಪ
॒ ಸರಕಾರದ ಹೊಸ ಯೋಜನೆಗಳನ್ನು ಜಾರಿ ಗೊಳಿಸುವ ನಿಟ್ಟಿನಲ್ಲಿ ನಿಗಮ ಮಂಡಳಿಗಳನ್ನು ವಾಪಸ್ಸು ಪಡೆಯಲಾಗುವುದು. ಎಲ್ಲಾ ಜಾತಿ ಹಾಗೂ ಹಳಬರು, ಹೊಸಬರಿಗೆ ಅವಕಾಶಕೊಡಲಾಗುವುದು ಬಜೆಟ್ ಮುಗಿದ ತಕ್ಷಣ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. - ಈಶ್ವರಪ್ಪ.
ರಾಜ್ಯ ಗ್ರಹ ಸಚಿವ ವಿ.ಎಸ್.ಆಚಾರ್, ಬಿಜೆಪಿಯ ನಿಕಟ ಪೂರ್ವ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕ್ರಷ್ಣ.ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗಿಶ್ ಭಟ್, ಸುಳ್ಯ ಶಾಸಕ ಅಂಗರ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, , ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮನಾಪ ಮೇಯರ್ ಶಂಕರ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು (CLCK)
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-08
|
|
| ಅಬ್ದುಲ್ ಲತೀಫ್ ಮುಳೂರು, ಉಡುಪಿ | 2010-02-11 | | ಎಲಾ ಈಶ್ವರಪ್ಪ!ಎಲ್ಲಾ ಹಿ೦ದೂಗಳು ದೇಶ ದ್ರೋಹಿಗಳಲ್ಲ. ಎ೦ದು ನೀನು ಪರೋಕ್ಷವಾಗಿ ಯಾಕೆ ಹೇಳುತ್ತೀದ್ದೀಯ? ಅದನ್ನು ನಾವು ಪ್ರತ್ಯಕ್ಷವಾಗಿ ಒಪ್ಪುತ್ತೇವಲ್ಲಾ! ಕೆಲವೊ೦ದು ಸ೦ಘಪರಿವಾರದ ಸ್ಥಾಪಿತ ಹಿತಾಸಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ.
|
| Ronald, Udupi | 2010-02-10 | | What a nut you are Eshwarappa!! Whay you can not see Deshadrohi in other religion? You do not know what to talk!! Pity the position you hold!! |
| Ibrahim Hussain, Udipi, Karnataka | 2010-02-09 | | ಈಶ್ವರಪ್ಪನವರೆ, ಸಮಾಜದ ಸ್ವಾಸ್ತವನ್ನು ಕೆಡಿಸುವ ಕೇಸರಿಧಾರಿಗಳನ್ನು ನೀವು ದೇಶ ಪ್ರೇಮಿಗಳೆಂದು ಕರೆಯುತ್ತಿರೋ ಅಥವಾ ಬೇರೇನು ಹೆಸರಿದೆಯೇ?150 ಸ್ತಾನಗಳಿಗೆ ಅಭ್ಯರ್ತಿಗಳು ಸಿಗುತ್ತಾರೋ ಎಂದು ಮೊದಲು ಹುಡುಕಾಡಬೇಕಾಗುವ ಪ್ರಮೇಯೇ ಬರಬಹುದು. 50 ಜನಪ್ರತಿನಿಧಿಗಳು ನಿಮ್ಮ ಪಕ್ಷದಿಂದ ಆರಿಸಿ ಬರುತ್ತಾರೋ ಏಂಬುದೇ ಸಂಶಯ. |
| suhail, bangalore | 2010-02-09 | | ಯಲಾ ಈಶ್ವರಪ್ಪ. ನಿಮ್ ಹೇಳಿಕೆಯಲ್ಲಿ ಏನ್ ನಾಟಕಪ್ಪ, |
| John varges, dubai | 2010-02-09 | | It is totally Wrong. In HIndus also we can see the antinations. Do you need any evidence Mr. Ishwarappa. ? |
|