ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ನೋಡ ಬನ್ನಿ ಮಾತನಾಡುವ ಮಂಜುನಾಥನ ದರುಶನ....

ಗಲ್ಫ್ ಕನ್ನಡಿಗದ  ಗೌರವ ಸ೦ಪಾದಕರಾದ ಶ್ರೀಮತಿ ಗೋಪಿಕಾ ಮಯ್ಯರಿಂದ ಡಾ. ವೀರೇ೦ದ್ರ ಹೆಗ್ಗಡೆಯವರೊ೦ದಿಗೆ ವಿಶೇಷ ಸ೦ದರ್ಶನ   

800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳವೆಂದರೆ ಇಂದು ಜಗ್ಗನೆ ನೆನಪಾಗುವುದು ವೀರೇಂದ್ರ ಹೆಗ್ಗಡೆಯರ ಹಸನ್ಮುಖಿ ಸುಂದರ ವದನ. ಅಂತಹ ಅವಿನಾಭಾವ ಸಂಬಂಧ ಅವರಿಬ್ಬರದು. ಮಾತನಾಡುವ ಮಂಜುನಾಥನೆಂದೇ ಜನರಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ದಿನಚರಿಯ ಪುಟದ ಒಂದು ನೋಟ ..............

ಬಲ್ಲಿರೇನಯ್ಯ? ಮೂಕವಿಸ್ಮಿತನಾಗುವುದು ಅಂದರೇನೇಂದುಕೊಂಡಿರಿ?

ಅನುಭವಿಸಿದ್ದೀರೇನು? ಇಲ್ಲವಾದರೆ ಇದೀಗ ಹೊರಡಿ ಧರ್ಮಸ್ಥಳಕ್ಕೆ.

ನಿಜ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವ, ಕಾರ್ಯವ್ಯಾಪ್ತಿ, ಕಾರ್ಯಕ್ಷಮತೆ, ದಕ್ಷತೆ, ಸಮತೂಕದ ನಡೆನುಡಿ, ಆಡಂಬರದ ಪ್ರದರ್ಶನವಿಲ್ಲದ ಸರಳ, ಮಮತಾಮಯಿ, ಸ್ವಚ್ಛ ಶುದ್ಧ ಸ್ಫಟಿಕದಂತಿರುವ ಹೆಗ್ಗಡೆಯವರನ್ನು ನೋಡುವಾಗ ಎಂತೆಂತವರೂ ಮೂಕವಿಸ್ಮಿತರಾಗುತ್ತರೆ.

ಸುಮಾರು 800ವರ್ಷಗಳ ಹಿನ್ನೆಲೆಯಿರುವ ಧರ್ಮಸ್ಥಳದಲ್ಲಿ ಅನುಶಾಸನದಂತೆ ಅನ್ನದಾನ ನಡೆಯುತಿತ್ತು. ನ್ಯಾಯದಾನ, ಶಿಕ್ಷಣದಾನ, ಔಷಧ ದಾನ ಹೆಗ್ಗಡೆಯವರ ಹಿರಿಯರಿಂದ ಪ್ರಾರಂಭವಾಯಿತು. ಅಂಥಹ ಮಹಾನುಭಾವ ಹಿರಿಯರಿಂದ ಪ್ರೇರಣೆ ಪಡೆದು ಅದೇ ಮಾರ್ಗದಲ್ಲಿ ಖಾವಂದ ವೀರೇಂದ್ರ ಹೆಗ್ಗಡೆಯವರು ಬೆಳೆದ ರೀತಿ ಅನನ್ಯವಾದದ್ದು. ಕರ್ನಾಟಕದಾದ್ಯಂತ ಹಬ್ಬಿದ ರೀತಿ ಅನಾದೄಶ್ಯವಾದದ್ದು. ನಿಂತ ನೆಲೆಯಲ್ಲಿ ಗ್ರಾಮಾಭಿವೄದ್ಧಿಯ ಯೋಜನೆ ಕೈಗೊಂಡು ಪ್ರಜೆಗಳಿಗೆ ಸ್ವಾವಲಂಬನೆ ಯನ್ನು ಕಲಿಸಿ ಆರ್ಥಿಕ ಪ್ರಗತಿ ಪಥದಲ್ಲಿ ಕೊಂಡೊಯ್ದದ್ದಲ್ಲದೆ ಇದೀಗ ಉತ್ತರ ಕರ್ನಾಟಕ ದಲ್ಲಿಯೂ ಹಬ್ಬಿ ಅಲ್ಲಿಯ ಪ್ರಜೆಗಳಿಗೂ ಸ್ವಾವಲಂಬನೆ ಮತ್ತು ಸ್ವೋದ್ಯೋಗ ಅವಕಾಶ ಗಳನ್ನು ಕಲ್ಪಿಸಿ ಕೊಡುತ್ತಿದ್ದಾರೆ.

ಧರ್ಮಸ್ಥಳದ ನ್ಯಾಯದಾನ ಎಲ್ಲರಿಗೂ ತಿಳಿದದ್ದೇ. ಅದರಲ್ಲುಈ ಮಾತನಾಡುವ ಮಂಜುನಾಥನ ನ್ಯಾಯದಾನಕ್ಕೆ ಜನ ಸಾಲುಗಟ್ಟಿ ನಿಲ್ಲುವುದು ನೋಡುವಾಗ ಮೈ ಜುಂ ಅನ್ನುತ್ತದೆ. ಮಾತು ತೀರ್ಮಾನ, ಸಾರ್ವಜನಿಕ ಅಹವಾಲುಗಳಿರುವ ಸೋಮವಾರ ವಂತೂ ಜನಸಾಗರವೇ ಹರಿದು ಬರುತ್ತದೆ ಈ ಮಂಜುನಾಥನೆಡೆ.

ಕೇವಲ ಮೆಡಿಕಲ್ ಮತ್ತು ಇಂಜಿನೀಯರಿಂಗ್ ಗಳು ಮಾತ್ರವೇ ಶಿಕ್ಷಣವಲ್ಲ, ಕಾನೂನು, ಮ್ಯಾನೇಜ್-ಮೆಂಟ್, ಆಯುರ್ವೇದ ಶಿಕ್ಷಣಗಳೂ ಶಿಕ್ಷಣವೇ ಎಂದು ತೋರಿಸಿದ್ದಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಂದು ಆಯುರ್ವೇದಕ್ಕಂತೂ ಪುನರ್ಜನ್ಮ ಲಭಿಸಿದೆ ಎಂದರೆ ಉತ್ಪ್ರೇಕ್ಷೆಯಾಗದು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಎಂ.ಬಿ.ಏ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳೆಂದು ಪರಿಗಣಿಸಲ್ಪಡುತ್ತವೆ.

ಡಾ. ವೀರೇಂದ್ರ ಹೆಗ್ಗಡೆಯವರ ಕೈಂಕರ್ಯಗಳಿಗೆ ಸಂದ ಗೌರವಗಳು ಸಮ್ಮಾನಗಳು ಅದೆಷ್ಟೋ!!! ಇಂತಹ ವರ್ಚಸ್ಸಿನ, ಲೋಕ ಕಲ್ಯಾಣ ಮಾಡುವ ವ್ಯಕ್ತಿ ತಮ್ಮ ಪಕ್ಷಕ್ಕೆ ಬರಲಿ ಎಂದು ಪ್ರಯತ್ನಿಸಿದ ರಾಜಕೀಯ ಪಕ್ಷಗಳದೆಷ್ಟೋ!!! ಆದರೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೊಗಳಿಕೆಗೆ ಉಬ್ಬದೆ, ತೆಗಳಿಕೆಗೆ ಕುಗ್ಗದೆ ತನ್ನ ಕೈಂಕರ್ಯವನ್ನು ಇನೂ ಎಲ್ಲೆಡೆ ಪಸರಿಸುವ ಯೋಜನೆಯಲ್ಲಿ ವಿನೀತಭಾವದಿಂದ ಮಗ್ನರಾಗಿದ್ದಾರೆ.

ಇಂತಿಪ್ಪ ಧರ್ಮಾಧಿಕಾರಿಗಳಿಗೆ ಇದೀಗ ಷಷ್ಟ್ಯಬ್ಧಿ ತುಂಬಿಹುದು.

ಭಾರತೀಯ ಜ್ಯೋತಿಷ್ಯದ ಕಾಲಗಣನೆಯ ಪ್ರಕಾರ ಅರುವತ್ತು ಸಂವತ್ಸರಗಳ(ವರ್ಷಗಳ) ಒಂದು ಚಕ್ರಕ್ಕೆ ಷಷ್ಟ್ಯಬ್ಧ ಎನ್ನುತ್ತಾರೆ. ಒಂದು ಚಕ್ರ ಪೂರ್ತಿಯಾಗುವ ಸಂಕ್ರಮಣ ಕಾಲದಲ್ಲಿ ಷಷ್ಟ್ಯಬ್ಧಿಪೂರ್ತಿ ಆಚರಿಸಿ ವ್ಯಕ್ತಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಾರೆ. ಅಂತೆಯೇ ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಅರುವತ್ತು ತುಂಬಿದ ಈ ಸಂಕ್ರಮಣ ಕಾಲದಲ್ಲಿ ನಾಡಿಗೆ ನಾಡೇ ಎದ್ದು ನಿಂತು ಗೌರವ ಸಲ್ಲಿಸಿ ಅವರಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಿದ್ದಾರೆ. ಜನರ ಅಭಿಮಾನದ ಮಹಾಪೂರವೇ ಆಶೀರ್ವಾದವಾಗಿ ಹರಿದು ಬರುತ್ತಿದೆ. ಮಮತೆಯ ಸಾಕಾರಮೂರ್ತಿಯಂತಿರುವ ಹೆಗ್ಗಡೆಯವರ ಮೇಲೆ ಜನತೆಯಿಟ್ಟಿರುವ ಮಮತೆಯ ಸಾಕ್ಷಾತ್ಕಾರವಾಗುತ್ತಿದೆ.

1948 ,25 ನವೆಂಬರನಂದು ಜನಿಸಿದ ವೀರೇಂದ್ರ ಹೆಗ್ಗಡೆಯವರು 21-10 1968ಕ್ಕೆ ಪಟ್ಟಾಭಿಷಿಕ್ತರಾದರು. 26-12 1972ರಲ್ಲಿ ಹೇಮಾವತಿ ಹೆಗ್ಗಡೆಯವರೊಂದಿಗೆ ವಿವಾಹವಾದ ಹೆಗ್ಗಡೆಯವರಿಗೆ ಓರ್ವ ಪುತ್ರಿ ಶ್ರದ್ಧಾ. ಇಪ್ಪತ್ತನೇ ವರ್ಷದಲ್ಲಿ ಧರ್ಮಾಧಿ ಕಾರಿಯಾಗಿ ಹೆಗ್ಗಡೆ ಪಟ್ಟಕ್ಕೇರಿದ ಖಾವಂದರ ನಲುವತ್ತು ವರ್ಷಗಳ ಸಾಧನೆ ಅನ್ಯತ್ರ ಕಾಣಲು ಸಿಗದು. ತಮಗೆ ದೊರಕಿದ ಸಂಪನ್ಮೂಲಗಳನ್ನು ಸಮಾಜಮುಖಿಯಾಗಿ ಜನಹಿತಕ್ಕಾಗಿ ಬಳಸುವ ದೂರದರ್ಶಿತ್ವ ಪ್ರಾಯಶಃ ಜನ್ಮಜಾತವಾಗಿಯೆ ಬಂದಿದೆ. ಅನ್ನದಾನ, ಶಿಕ್ಷಣ ದಾನ ಔಷಧ ದಾನ ನ್ಯಾಯದಾನವಲ್ಲದೆ ಸಾಮಾಜಿಕ ಪಿಡುಗು ಗಳಾದ ವರದಕ್ಷಿಣೆ ಹಾಗೂ ಮದ್ಯ ಪಾನ ನಿರ್ಮೂಲನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿತಂದಿದ್ದಾರೆ. ಸಾಮೂಹಿಕ ವಿವಾಹದ ಯೋಜನೆಯಲ್ಲಿ ಈವರೆಗೆ 10000ಕ್ಕೂ ಹೆಚ್ಚು ಜೋಡಿಗಳು ಸತಿಪತಿಗಳಾಗಿದ್ದಾರೆ. ರುಡ್ ಸೆಟ್ ನಂತಹ ತಾಂತ್ರಿಕ ಶಿಕ್ಷಣದಿಂದ ಅನೇಕರಿಗೆ ಸ್ವಾವಲಂಬನೆಯ ದಾರಿ ತೋರಿಸಿದ್ದಾರೆ.

ಖಾವಂದರ ಸಹೋದರರಾದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಶ್ರೀರಾಮನೊಂದಿಗೆ ಭರತ ಲಕ್ಷ್ಮಣ ಶತ್ರುಘ್ನನಂತೆ ಸದಾ ಜೊತೆಯಲ್ಲಿದ್ದು ಸಹಯೋಗ ನೀಡಿದ್ದಾರೆ. ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲದೆ ಸ್ತ್ರೀಯರಿಗಾಗಿ ಜ್ಞಾನವಿಕಾಸ, ಸಿರಿ ಮೊದಲಾದ ಯೋಜನೆಗಳನ್ನ್ಯು ಹಮ್ಮಿಕೊಂಡು ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಆದರ್ಶ ಧರ್ಮಪತ್ನಿಯಾಗಿ ರಾರಾಜಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಹೆಗ್ಗಡೆಯವರ ಪ್ರಿಯವಾದ ಹವ್ಯಾಸಗಳೆಂದರೆ ಅಪರೂಪದ ವಸ್ತುಗಳ ಸಂಗ್ರಹ, ಹಳೆಯ ಕಾರುಗಳ ಸಂಗ್ರಹ ಮತ್ತು ಛಾಯಗ್ರಹಣ. ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಕಳೆದ ನಲುವತ್ತು ವರ್ಷಗಳಿಂದ ಹೆಗ್ಗಡೆಯವರು ಆಸಕ್ತಿವಹಿಸಿ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಇನ್ನು ಹಳೇ ಕಾರುಗಳ ಸಂಗ್ರಹವಂತೂ ಲಕಲಕ ಹೊಳೆಯುತ್ತಿದೆ. ಅಲ್ಲಿಯ ಪ್ರತಿಯೊಂದು ಕಾರುಗಳನ್ನು ಸುಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕಾಪಾಡಲಾಗುತ್ತದೆ.

ಇಂತಹ ಬಹುಮುಖೀ ಪ್ರತಿಭೆಯ ಕಾರ್ಯವ್ಯಾಪ್ತಿ ಇಲ್ಲಿಗೆ ಮುಗಿಯದು. ಯಕ್ಷಗಾನ ಮೇಳವನ್ನೂ, ಯಕ್ಷಗಾನ ತರಬೇತಿ ಕೇಂದ್ರವನ್ನೂ ನಡೆಸಿ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಜನರಲ್ಲಿರುವ ಜೀರ್ಣಸ್ಥಿತಿಯ ತಾಡೋಲೆ ಗ್ರಂಥಗಳನ್ನು ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿಸಿ ಅವುಗಳನ್ನು ಹೊಸದರಂತೆ ಮಾಡಿ ಯಜಮಾನರಿಗೆ ಹಿಂತಿರುಗಿಸುವ ಹೊಸ ಯೋಜನೆ ಯನ್ನು ಹಮ್ಮಿಕೊಳ್ಳುವ ಮೂಲಕ ಪ್ರಾಚೀನ ತಾಡೋಲೆ ಗ್ರಂಥಗಳನ್ನು ಕಾಪಿಡುವ ಕೈಂಕರ್ಯ ಪ್ರಾರಂಭಿಸಿದ್ದಾರೆ. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಿ ಹೊಸ ಪರಂಪರೆಗೆ ಆಯಾಮ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಗೋಮಟೇಶ್ವರನನ್ನು ಸ್ಥಾಪಿಸಿ ವರ್ತಮಾನದ ಚಾವುಂಡರಾಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶತಮಾನದಲ್ಲಿ ನಡಾವಳಿಯನ್ನು ನಡೆಸಿದ ಧೀಮಂತರಿವರು.

ಬದಲಾಗುತ್ತಿರುವ ವರ್ತಮಾನದಲ್ಲಿ ಸೂಕ್ತ ಬದಲಾವಣೆಗಳನ್ನು ಗುರುತಿಸಿ ತತ್ಕ್ಷಣ ಕಾರ್ಯ ರೂಪಕ್ಕೆ ತಂದು ತಮ್ಮ ಶಿಕ್ಷಣ , ಔಷದ ಸಂಸ್ಥೆಗಳ ಉನ್ನತ ಗುಣಮಟ್ಟವನ್ನು ಪರಿಷ್ಕರಿಸಿದ್ದಾರೆ. ಉದಾಹರಣೆಗೆ ಇಂಗ್ಲೀಷ್ ಮಾಧ್ಯಮ ಶಾಲೆಯ ಔಚಿತ್ಯ ಕಂಡ ಕೂಡಲೇ ಎಸ್.ಡಿ.ಎಮ್. ಸಂಸ್ಥೆಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನೂ ಪ್ರಾರಂಬಿಸಿದ್ದಾರೆ.

ಎಂಟು ಶತಮಾನಗಳ ಭವ್ಯ ಪರಂಪರೆಯಿರುವ ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳಾಗಿರುವ ಹೆಗ್ಗಡೆಯವರು ಶ್ರೀ ಕ್ಷೇತ್ರದ ಧಾರ್ಮಿಕ ಚಟುವಟಿಕೆಗಳ ಮೂಲಕ ವಾರ್ತಮಾನದಲ್ಲಿಯೂ ಧಾರ್ಮಿಕತೆ ಉತ್ತುಂಗದಲ್ಲಿರಲು ಕಾರಣಕರ್ತರಾಗಿ ದ್ದಾರೆ. ಮಾಮೂಲು ಮಠಾಧಿಪತಿಗಳಂತಲ್ಲದೆ, ರಾಜಕಾರಣದ ಕೆಸರು ಅಂಟಿಸಿಕೊಳ್ಳದೆ, ಶುಭ್ರ ಚಾರಿತ್ರ್ಯದ, ಶುಭ್ರವಸನರಾದ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಮೇಲಿಟ್ಟಿರುವ ಪ್ರೀತಿವಿಶ್ವಾಸದ ದ್ಯೋತಕವೇ ನಾಡಿನಾದ್ಯಂತ ನಡೆಯುತ್ತಿರುವ ಷಷ್ಟ್ಯಬ್ಧಿ ಸಮಾರಂಭ ಗಳು. ಓರ್ವ ವ್ಯಕ್ತಿಯಿಂದ ಇದೆಲ್ಲಾ ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿದರೆ ಅದಕ್ಕೆ ’ಸಾಧ್ಯ’ ಎಂಬುದನ್ನು ಹೆಗ್ಗಡೆಯವರ ದರ್ಶನದಿಂದಲೇ ತಿಳಿದುಕೊಳ್ಳಬಹುದು.

ಧರ್ಮಾಧಿಕಾರಿಗಳು ಬಹಳ ಹಾಸ್ಯಪ್ರಿಯರು. ತಮ್ಮ ಕಾರ್ಯವ್ಯಾಪ್ತಿಯ ಒತ್ತಡದ ನಡುವೆಯೂ ಅವರ ಹಾಸ್ಯಪ್ರಜ್ಞೆ ಸದಾ ಜಾಗೄತವಾಗಿರುತ್ತದೆ. ಕೆಲಸದ ಒತ್ತಡಗಳೇನಿ ದ್ದರೂ ಮನೆಮಂದಿಯೊಂದಿಗೆ ಮನೆಯವರಂತೇ ವ್ಯವಹಾರ. ಪ್ರಾಯಶಃ ಹಾಸ್ಯಪ್ರಜ್ಞೆ ಮತ್ತು ನಿರ್ಗರ್ವ ಸ್ವಭಾವದಿಂದಾಗಿಯೇ ಅನ್ಯೋನ್ಯವಾಗಿ ಸಂಸಾರ ನಡೆಯಿಸಲು ಸಾಧ್ಯವಾಯಿತು ಎಂದು ಹೇಮಾವತಿ ಹೆಗ್ಗಡೆಯವರ ಅಂಬೋಣ.

ಇಂತಿಪ್ಪ ಧರ್ಮಾಧಿಕಾರಿಗಳನ್ನು ಮುಖಾಮುಖಿ ಭೇಟಿಯಾಗುವ ಸಂದರ್ಭ ಬಂದರೆ.......?    ಬಂದೇಬಿಟ್ಟಿತು!

ಉಡುಪಿಯ ರಾಜಾಂಗಣದಲ್ಲಿ 2009ರ ಜನವರಿ.15ಕ್ಕೆ ಶ್ರಿ ಕೄಷ್ಣ ಮಠದ ಪರ್ಯಾಯ ಪುತ್ತಿಗೆ ಶ್ರೀಪಾದಂಗಳವರಿಂದ ಪ್ರಪ್ರಥಮ ಬಾರಿಗೆ ತುಲಾಭರದ ಸನ್ನಿವೇಶ, ತುಲಾಭಾರ ಮಾಡಿಸಿ ಶ್ರೀಪಾದಂಗಳವರಿಗೆ ಜನಮಾನಸದಲ್ಲಿ ಮಾತನಾಡುವ ಮಂಜುನಾಥನಾಗಿ ಮೆರೆಯುವ ಹೆಗ್ಗಡೆಯವರನ್ನು ಸಮ್ಮಾನಿಸಿದ ಆದರಣೀಯ ಭಾವ, ತೂಗಿಸಿಕೊಂಡ ಹೆಗ್ಗಡೆಯವರಿಗೆ ಜವಾಬ್ದಾರಿಯ ತೂಕ ಹೆಚ್ಚಾದ ಭಾವ. ಅಭಿನಂದನೆಗೈದ ಬನ್ನಂಜೆಯ ವರಿಗೆ ಮಾತುಗಳು ಬರಿಯ ಶಬ್ದವಾದಂತಹ ಅನುಭವ. ಇಂತಹದೊಂದು ಅನಿರ್ವಚ ನೀಯ ಸನ್ನಿವೇಶ ಸೄಷ್ಟಿಯಾಗಿತ್ತು. ಇವೆಲ್ಲದರ ಮಧ್ಯೆ ಬಹಳ ಪ್ರಯಾಸದಿಂದ ಒಂದು ಸೋಮವಾರ ದಂದು ಬೆಳಗಿನೀಂದ ಬೈಗಿನವರೆಗೆ ಅವರ ಜೊತೆಗಿದ್ದು ಕಾರ್ಯಕಲಾಪ ಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕೆ ಅನುಮತಿ ದೊರಕಿತು.

ಅಂತೆಯೇ 19ನೇ ತಾರೀಖು ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಉಡುಪಿಯಿಂದ ಗಲ್ಫ್ ಕನ್ನಡಿಗದ ಪ್ರತಿನಿಧಿಗಳು ಧರ್ಮಸ್ಥಳಕ್ಕೆ ಹೊರಟೆವು. ಹೆಗ್ಗಡೆಯವರು ಪ್ರಾತಃಕಾಲ ವಾರ್ತಾಪತ್ರಿಕೆಯನ್ನು ಓದುವುದರಿಂದ ಪ್ರಾರಂಭಿಸಿ ಪಾರ್ಶ್ವನಾಥನ ಪೂಜೆ ಮುಗಿಸಿ ಮಂಜುನಾಥನ ಪ್ರಸಾದ ಸ್ವೀಕರಿಸಿ, ಮಾತಿನ ತೀರ್ಮಾನ ಸಾರ್ವಜನಿಕರ ತುಲಾಭಾರ, ಅಹವಾಲುಗಳನ್ನು ಹತ್ತಿರದಿಂದ ಅವಲೋಕಿಸುವ ಒಂದು ಸುಯೋಗ. ನಡುನಡುವೆ ಸಂದರ್ಭ ಸಿಕ್ಕಿದಾಗಲೆಲ್ಲ ಅವರೊಡನೆ ಮಾತನಾಡುವ ಕ್ಷಣಗಳು, ಅಹಾ ನನಗಂತೂ ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ ಎನ್ನುವಂತಾಗಿತ್ತು.

ಸಂದರ್ಶನಕ್ಕೆಂದು ಹೋದರೂ ಏನೆಂದು ಸಂದರ್ಶಿಸುವುದು? ಅನೇಕ ಪಕ್ಷಿಗಳಿಗೆ ಜೀವ ಜಂತುಗಳಿಗೆ ಆಶ್ರಯವೀಯುವ ವಿಶಾಲವಾದ ಆಲದ ಮರದಂತಹ ಹೆಗ್ಗಡೆಯವರ ವ್ಯಕ್ತಿತ್ವದ ಎದುರು ಕುಬ್ಜಳಾದ ಅನುಭವ. ಮಾತ್ರುಗಳೋ ಮಡಕೆಯಲ್ಲಿ ಕಲ್ಲು ಹಾಕಿ ಶಬ್ದ ಮಾಡಿಸಿದಂತ ವ್ಯರ್ಥ ಅನುಭವ. ಆದರೂ ಧೈರ್ಯ ಮಾಡಿ ಕೊನೆಗೂ ಅವರಲ್ಲಿ ಪ್ರಶ್ನೆಗಳನ್ನು ಕೇಳಿದೆ. ಉತ್ತರಗಳು ಗೊತ್ತಿರಲಿಲ್ಲವೆಂತಲ್ಲ ಅವರೊಡನೆ ಏನಾದರೂ ಮಾತನಾಡಬೇಕು ಅಂತ. ರಾಜಕೀಯದ ಬಗ್ಗೆ ಬೇಡ, ಸಾಧನೆಯ ಬಗ್ಗೆ ಬೇರೆ ಯವರು ಬೇಕಾದಷ್ಟು ಮಾತಾಡಿಬಿಟ್ಟಿದ್ದರಿಂದ ನನಗೆ ಅಲ್ಲಿ ಕೇಳಲು ಏನೂ ಉಳಿದಿರಲ್ಲಿಲ್ಲ.

ಮಂಜಯ್ಯ ಹೆಗ್ಡೆಯವರು ಪ್ರಾರಂಭಿಸಿದ ಸಂಸ್ಥೆಗಳಿಗೆ ಹೊಸ ಅಯಾಮ ನೀಡಿ ಸಾಂಸ್ಥಿಕ ಚೌಕಟ್ಟನ್ನು ನೀಡಿದವರು ವೀರೇಂದ್ರ ಹೆಗ್ಗಡೆಯವರು. ಕಳೆದ ನಲ್ವತ್ತು ವರ್ಷಗಳ ಸಾಧನೆಯನ್ನು ಅವಲೋಕಿಸುವಾಗ ಹೆಮ್ಮೆಯೆನಿಸುತ್ತದೆ. ಧರ್ಮಸ್ಥಳದಲ್ಲಿ ಪ್ರಾರಂಭ ಗೊಂಡ ಸಂಸ್ಥೆಗಳು ಇಂದು ರಾಜ್ಯದ ರಾಜಧಾನಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಲ್ಪ ಡುವುದು ವಿಶೇಷವೇ ಸೈ. ಮುಂದಿನ ಗುರಿ ಏನು ಅಥವಾ ಭವಿಷ್ಯದ ಬಗ್ಗೆ ತಲೆಕೆಡಿಸಿ ಕೊಳ್ಳದೆ ಇಂದಿನ ಗುರಿಯತ್ತ ನಿಸ್ಪೃಹರಾಗಿ ಸಾಗುವುದೇ ಹೆಗ್ಗಡೆಯವರ ಯಶಸ್ಸಿಗೆ ಕಾರಣ.

ಹೀಗೆ ಹೆಗ್ಗಡೆಯವರ ಸಂದರ್ಶನ ಮಾಡಿ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿ ಸೋಣ ಎಂದುಕೊಂಡಿದ್ದೆ ಆದರೆ ಅವರ ದರ್ಶನ ಮಾತ್ರದಿಂದ ನಮ್ಮನ್ನು ನಾವೆ ಗೌರವಿಸಿಕೊಂಡ ಭಾವನೆಯೊಂದಿಗೆ ಹಿಂದುರುಗಿದೆವು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಜೆ.ಪಿ.ಕಿಣಿ ಮತ್ತು ಗಲ್ಫ ಕನ್ನಡಿಗ ಬಳಗ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13

Tell a Friend

ಪ್ರತಿಸ್ಪಂದನ
hemacharya, Mangalore
2010-04-06
One of the best article on this legendary personality. I wish to reproduce this interview in our 'Daijiworld Weekly' english journal, the only weekly from Managalore. please confirm your approval.
jaya, siganduru
2010-02-17
thanks a good webpage
ಗಣೇಶ್ ರೈ, ಕೊಡಗು / ಶಾರ್ಜಾ
2009-08-13
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿ ತಯಾರಿಯ ಸಭೆಯನ್ನು ನಡೆಸಲು ಕೆಲವು ದಿನಗಳ ಹಿಂದೆಯಷ್ಟೆ ಆಗಮಿಸಿದ್ದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ದುಬಾಯಿಯಲ್ಲಿ ಭೇಟಿ ಮಾಡಿದ ನಮಗೆಲ್ಲರಿಗೂ ಮತ್ತೊಮ್ಮೆ ಇದೀಗ ದೂರ ದೇಶದಲ್ಲಿ ಇದ್ದುಕೊಂಡೆ ಗಲ್ಫ್ ಕನ್ನಡಿಗ ಮಾದ್ಯಮದ ಮೂಲಕ ಶ್ರೀ ಕ್ಷೇತ ಧರ್ಮಸ್ಥಳ ದರ್ಶನ ಭಾಗ್ಯ ಲಭ್ಯವಾಗಿದೆ. ಅಮೂಲ್ಯ ಚಿತ್ರಸಹಿತ ಸಂದರ್ಶನ ವರದಿಗೆ ಗೋಪಿಕಾ ಮಯ್ಯ, ಜಯಪ್ರಕಾಶ್ ಕಿಣಿ ಮತ್ತು ಗಲ್ಫ್ ಕನ್ನಡಿಗ ಬಳಗಕ್ಕೆ ಧನ್ಯವಾದಗಳು.
B.G.Lakshmikanth Beskoor, Udupi
2009-02-14
It's one of the remarkable interview article/photo album of Gulf kannadiga.com. Thanks to Mr.B.G.Mohandas , Smt.Gopika mayya
Uday Kumar, Kateel
2009-02-14
It is rather a Great opportunity for the Gulf Kannadiga team to meet up with this Phenominal personality.. It is true that Great things will not fit into words but with some fine pictures !! Many thanks for the pictorial interview .. that tells all ..
ಪ.ರಾಮಚಂದ್ರ, ರಾಸ್ ಲಫ್ಫಾನ್,ಕತಾರ್
2009-02-14
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಧರ್ಮಸ್ಥಳ. ಅಲ್ಲಿನ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿಸಿ ವಿದೇಶದ ನಮಗೆಲ್ಲ ಧರ್ಮಸ್ಥಳದ ದರ್ಶನ ಬಾಗ್ಯವನ್ನು ಒದಗಿಸಿದ ಕೊಲ್ಲಿ ಪ್ರದೇಶದ ಕರ್ನಾಟಕದ ಪ್ರತಿಬಿಂಬ - \"ಗಲ್ಫ್ ಕನ್ನಡಿಗ\" ಬಳಗಕ್ಕೆ ಧನ್ಯವಾದಗಳು.
Kiran Manjanabailu, Udupi
2009-02-14
Very good article.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ದ.ಕ, ಉಡುಪಿಯಲ್ಲಿ ಜನಪ್ರೀಯಾಗಿದ್ದ ಕರಾವಳಿಯ ಪತ್ರೊಡೆಯನ್ನು ಮನೇಲಿ ಮಾಡಿ ತಿನ್ನಿ ರುಚಿಯಾಗಿರುತ್ತದೆ
»ಹೋರಾಟಕ್ಕೆ ಸಿದ್ಧ ಲಾಲೂ ಯಾದವ್
»ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ?
»ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು
»ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ
»ಮರಳುಗಾಡಿನಲ್ಲಿ ರಂಜಾನ್ ಆಚರಣೆ
»ವಿಸ್ಮಯ ಜಗದ ರಾಜಕುಮಾರಿ ಇಂದುಶ್ರೀ
»ಮಧುರ ಬಾಂಧವ್ಯ, ಭಾತೃತ್ವದ ರಾಷ್ಟ್ರೀಯತೆಯ ಸಂಕೇತ ರಕ್ಷಾ ಬಂಧನ
»ಮಣಿಪಾಲ: ಅಭಿವ್ರದ್ದಿ ಹೊ೦ದಿ ಇ೦ದು ಪ್ರವಾಸೋದ್ಯಮ ತಾಣವಾಗುತ್ತಿರುವ ಮಣ್ಣಪಳ್ಳ ಕೆರೆ
»ಬಯಲಿಗೆ ನೀರು, ಘಟ್ಟದಲ್ಲಿ ‘ವರಿ’: ಹಾಸನದ ಎತ್ತಿನಹೊಳೆ ತಿರುವು ಏನು? ಎತ್ತ?
»ಆದಿಲ್‌ಶಾಹಿ ಅರಸರ ಬೇಸಿಗೆ ಅರಮನೆ
»ಸಚಿವರ ಅನಾಗರಿಕ ವರ್ತನೆ : ಪದಾಧಿಕಾರಿಗಳಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ
»ಜನತಾ ಪರಿವಾರದ ರಾಜಕೀಯದಲ್ಲಿ ಬೇಗನೆ ಮೇಲೇರಿ ಬೆಳೆದು ನಿಂತ ಸಿದ್ದರಾಮಯ್ಯ
»ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ
»ಜನ್ಮಸಿದ್ಧ ಹಕ್ಕುಗಳಿಂದ ವಂಚಿತರಾದ 2 ಕೋಟಿ ದಲಿತ ಕ್ರೈಸ್ತರು : ಈ ಸಲವಾದರೂ ಕೇಂದ್ರ ಸರಕಾರವು ‘ದಲಿತ ಕ್ರೈಸ್ತರ ಮೀಸಲಾತಿ’ ವಿಷಯವನ್ನು ಕೈಗೆತ್ತಿಕೊಳ್ಳುವುದೇ ?
»ಅಜ್ಜನ ಮನೆಯ ನೆನಪುಗಳು
»ಅವರಿಗೆ ಬುರ್ಖಾ, ಇವರಿಗೆ ಸೀರೆ; ಯಾವುದು ಸರಿ?
»ಉತ್ತಮ ಆರೋಗ್ಯಕ್ಕಾಗಿ ರಂಜಾನ್ ಉಪವಾಸ: ಜಗತ್ತಿನಾದ್ಯ೦ತ ಇಸ್ಲಾ೦ ಧರ್ಮಿಯರಿ೦ದ ಇ೦ದಿನಿ೦ದ ಒ೦ದು ತಿ೦ಗಳಕಾಲ ಉಪವಾಸ ವ್ರತ ಆರ೦ಭ
»ಕೊಡಗಿನಲ್ಲಿ ಮು೦ಗಾರು ಮಳೆ ಹಬ್ಬ
»ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ.
»ಎವರೆಸ್ಟ್‌ನಲ್ಲಿ ಟ್ರಾಫಿಕ್ ಜಾಮ್...! ಏನಿದು ಟ್ರಾಫಿಕ್ ಜಾಮ್ ?
»ವಿವಿಧ ಆರೋಪಗಳನ್ನು ಎದುರಿಸುತ್ತಾ ಕಷ್ಟ ಕಾಲದಲ್ಲೂ ಆಡಳಿತ ನಡೆಸುತ್ತಿದ್ದ ಕಥಿಕ ಉಮರ್ ಅಬ್ದುಲ್ಲಾ
»ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದು ಜೀವನ ಸಾರ್ಥಕ ಮಾಡಿಕೊ೦ಡ ಭಾರತದ 4 ಸೂಪರ್ ಸೇಲ್ಸ್‌ಮನ್‌ಗಳು
»ಸಾಗರದಾಳದಲ್ಲಿ 1,200 ಹೊಸ ಅತಿಥಿಗಳು
»ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾ೦ತಿಯನ್ನು೦ಟುಮಾಡಿದ ಮಣಿಪಾಲದಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ಮಣ್ಣಪಳ್ಳ ಜಲಪಾತ
»ಹೆಚ್ಚುತ್ತಿದೆ ಚಾಲಕರ ಮೊಬೈಲ್ ಟಾಕ್...
»ಭಾರತ ಮತ್ತು ಥಾಮಸ್ ರೋ, ಕ್ಯಾಮರಾನ್
»ಹೋರಾಟಗಳ ಕಲಿ ಚಂದ್ರಬಾಬು ನಾಯ್ಡು
»ಅಪರಾಧ ಜಗತ್ತಿನ ರೋಚಕ ವ್ಯಕ್ತಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
»ಏಷ್ಯಾ ಖ೦ಡದಲ್ಲೇ ಅಪರೂಪದ ತಾಣ ಮಧುಗಿರಿಯ ಏಕಶಿಲಾ ಬೆಟ್ಟ
»ಕು೦ದಾಪುರದಲ್ಲಿನ ತಮ್ಮಯ್ಯ ದೇವಾಡಿಗರ ಸಿಗಡಿ ಸಾಕಣೆ
»ಸುಪ್ರಿಮ್ ಕೋರ್ಟ್ ನೀಡಿದ ತಡ ರಾತ್ರಿಯವರೆಗೂ ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು :ಇದು ದುಡಿಮೆಯೋ? ಶೋಷಣೆಯೋ?
»ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ
»ಬಂದೂಕಿನ ಮುಂದೆ ಅಸಹಾಯಕ ಸ್ನೇಹ .....
»‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು
»ಸೈ೦ಥಿಯಾ ರೇಲ್ವೆ ಅಪಘಾತ :ರಾಜಕೀಯ ಕೆಸರೆರಚಾಟ: ಜನರ ವಿರುದ್ಧ ಪಿತೂರಿ
»ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್
»ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
»ಸವಾಲಾಗಿ ಕೆಣಕುತ್ತಿರುವ ದುರ್ದಮ್ಯ ಗಣಿ ಮಾಫಿಯಾ
»ಇದೆಂತಹ ಶಾಂತಿ! ಇದೆಂತಹ ಪ್ರಜಾಸತ್ತೆ!!
»ಜಗತ್ತು ಕಂಡ ಭಯಾನಕ ದುರಂತಗಳು
»ಬೆಳಗಾವಿ ಜನರಿಗೆ ಬೇಕಿರುವುದು ನೆಮ್ಮದಿ ಮಾತ್ರ!
»ಕಲಘಟಗಿ ಅರಣ್ಯದಲ್ಲಿ... ಮತ್ತೊಂದು ಕೂಡಲ ಸಂಗಮ
»ಉಡುಪಿಯಲ್ಲೊ೦ದು ಬೈಕ್ ಮಾಲಿಕರ ಸ೦ಘ: ಹಳೆ ಗಾಡಿ ಓಡು ಮತ್ತೆ
»ಇನ್ನು ಮು೦ದೆ ಕಾರಿಗೂ ಬರಲಿದೆ ಬ್ಲ್ಯಾಕ್ ಬಾಕ್ಸ್ ...!
»ಬರುವ ವರ್ಷದಿ೦ದ ಐಎಎಸ್ ಪರೀಕ್ಷಾ ವಿಧಾನ ಸಿ.ಎಸ್.ಎ.ಟಿ. ಆಗಿ ಬದಲಾವಣೆಯಾಗುವ ಸಾಧ್ಯತೆ
»ಕಂಡದ್ದು ಕಾಡಿದ್ದು : ಒಮಾನಿನ ‘ಆಲ್ ಈಸ್ ವೆಲ್’ ಪತ್ರಿಕೋದ್ಯಮ!
»ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿ ಸುಸ್ತಾದ ಶರದ್ ಪವಾರ್ : ನಿವೃತ್ತಿ ಯಾವಾಗ?
»ಮತ್ತೆ ತಲೆಯೆತ್ತಿದ ವಿಷವೃಕ್ಷ: ಇಲಿಗಳೆಂದು ಹುತ್ತವನ್ನು ಅಗೆದರೆ, ಅಲ್ಲಿ ಸಿಕ್ಕಿದ್ದು ಕಾಳ ಸರ್ಪಗಳು: ಬೆಚ್ಚಿಬಿದ್ದ ಕಾನೂನು
»`ಜಿಹಾದ್' ಎಂದರೇನು?
»ಚಾರಣ ಪ್ರಿಯರಿಗೆ ಒ೦ದು ಉತ್ತಮವಾದ ಸ್ಥಳ ಸ್ಕಂದಗಿರಿ
»ಕಾಳಗದಲ್ಲಿ ಹೋರಾಡಿ ಮಡಿದ ವೀರ ಯೋಧರ ವೀರಗಲ್ಲುಗಳು ಇ೦ದು ‘ಇತಿಹಾಸ’ ಸೇರಿವೆ
»ಶರಾವತಿ ಶಾಪಗ್ರಸ್ತರು! ಯೋಜನೆಯಿ೦ದಾಗಿ ಮನೆ ಮಠ ಕಳೆದುಕೊ೦ಡ ಜನತೆಗೆ ಸಿಕ್ಕಿದೆ ಪರಿಹಾರ ಕಳೆದುಕೊಡಿದ್ದಾರೆ ನೆಮ್ಮದಿ
»ಜಿಲ್ಲೆಗೊ೦ದು ವಿಶ್ವವಿದ್ಯಾನಿಲಯ ಇದು ಸರ್ಕಾರ ಮಾತು: ಕನಿಷ್ಟ ಸೌಲಭ್ಯವೂ ಇಲ್ಲದ ತುಮಕೂರಿನ ವಿಶ್ವವಿದ್ಯಾಲಯ!
»ಲೋಕಾಯುಕ್ತರಿಗೆ ಸಂಘಪರಿವಾರದ ಸಖ್ಯ ಮುಖ್ಯವಾಯಿತೇ?
»ಲೋಕಾಯುಕ್ತ ಎಂಬ ಹಾವಿಗೆ ಹಲ್ಲು ಬರುವುದೇ...?
»ಅತ್ಯಾಚಾರಕ್ಕೆ ಪರಿಹಾರವುಂಟೆ?
»ಅಝಾದ್ ಅಲಿಯಾಸ್ ಚೆರುಕುರಿ ರಾಜಕುಮಾರ ಎಂಬ ಮೇಧಾವಿಯೊಬ್ಬನ ಸಾವಿನ ಸುತ್ತ
»ಅಸಮಾನ ನ್ಯಾಯ: ಒ೦ದು ಕಣ್ಣಿಗೆ ಬೆಣ್ಣೆ ಇನ್ನೊ೦ದು ಕಣ್ಣಿಗೆ ಸುಣ್ಣ: ಗಲ್ಫ್ ಆಫ್ ಮೆಕ್ಸಿಕೋ ತೈಲ ಸ್ಫೋಟ ಹಾಗೂ ಭೋಪಾಲ್ ದುರಂತ...
»ಜೀವನ ಎಂಬ ಬಾಳು ಹೂವಿನಂತೆ ಅರಳಲಿ
»ನಿರ೦ತರವಾಗಿ ನಡೆಯುತ್ತಿರುವ ತೈಲ ಸೋರಿಕೆ: ಸಮುದ್ರ ಜೀವಿಗಳಿಗೆ ಸಂಕಟ
»ಕಲಿಕೆಗೊಂದು ಸ್ವರ್ಗವಾಗಿರುವ ಊಟಿಯ ಸುಂದರ ಶಾಲೆ
»‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
»ವರ್ಷಗಟ್ಟಲೆ ಊಟವನ್ನೇ ಮಾಡದ 'ಬುದ್ಧ' ಮತ್ತೆ ಬಂದಿದ್ದಾನೆ!
»ಬೇಲೆಕೇರಿ ಅದಿರಿನ ಅವಾಂತರ
»ಅತ್ಯಂತ ಅಪಾಯಕಾರಿ ವಲಯ? ಪಶ್ಚಿಮದತ್ತ ನೋಡಿ
»ಯಾವ ಸಾಧನೆಗಾಗಿ ಈ ಸಮಾವೇಶ?
»ಭೋಪಾಲ ದುರಂತ: ಜನತೆಯ ಹಣದಲ್ಲಿ ಕಾಂಗ್ರೆಸ್ ತೇಪೆ
»ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...
»ಹೊನ್ನಾವರ: ರಾಜಕಾರಣಿ, ಅಧಿಕಾರಿಗಳ ಮು೦ದೆ ಸತ್ಯ ಹೇಳಿ ಕೆಟ್ಟವರು ಅನ್ನಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಮಾಧ್ಯಮದ ಹೊರತಾಗಿ!
»ದೇಶದ ಅಸಾಮಾನ್ಯ ವಕೀಲರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸುಗಳನ್ನೇ ನಡೆಸುವ ಮುಂಬೈನ ರಾಮ್ ಜೇಠ್ಮಲಾನಿ
»ತುಳು ಭಾಷೆ ಮತ್ತು ಲಿಪಿ
»ಉಗ್ರನಿಂದ ಹೈದ್ರಾಬಾದ್ ನಡುಗುತ್ತಿತ್ತೇ? ಯಾರಿವನು ರಾಷ್ಟ್ರದ್ರೋಹಿ?
»ಇಂದಿರಾ ರಾಜಕೀಯ ದಿಕ್ಕು ಬದಲಿಸಿದ ತೀರ್ಪು
»ಕಡಲ್ಕೊರೆತ ಉದ್ಯಮವಾಗದಿರಲಿ: ಮೊದಲು ಭ್ರಷ್ಟರಿಗೆ ತಡೆಗೋಡೆ ಕಟ್ಟಿ ಅಮೇಲೆ ಕಡಲ್ಕೊರೆತಕ್ಕೆ ತಡೆಗೋಡೆ ಕಟ್ಟೋಣ
»ಬಿದಿರನ್ನು ಫ್ಯಾಷನ್ ಲೋಕಕ್ಕೆ ತಂದ ಭಟ್ಟರು
»ನೆನಪು ಹಳೆಯದಾದರೇನು, ಮರೆವು ನವನವೀನ!
»ಸೂಪರ್ ಕಂಪ್ಯೂಟರ್: ಅಗ್ರಶ್ರೇಣಿಯಲ್ಲಿ ಜಾರುತ್ತಿದೆ ಭಾರತ!
»ನ್ಯಾಯಕ್ಕೆ ಶಿಕ್ಷೆ: ಒ೦ದಿಬ್ಬರನ್ನು ಕೊ೦ದರೆ ಅಪರಾಧ ಆದರೆ ಸಾಮೂಹಿಕ ಹತ್ಯಾಕಾ೦ಡ ನಡೆಸಿದರೆ ಅಪರಾಧವಲ್ಲ ಎ೦ದು ಸಾಬೀತುಪಡಿಸಿದೆ ಭೋಪಾಲ್ ದುರ೦ತ ಪ್ರಕರಣ
»ನೆಲೆ ಕಳೆದುಕೊಳ್ಳುತ್ತಿವೆ ಹಿಂದುತ್ವ ಫ್ಯಾಕ್ಟರಿ ಆರೆಸ್ಸೆಸ್ ಶಾಖೆಗಳು!
»ಮಂಗಳ ಮಹಿಮಾ: 40 ವರ್ಷದ ರಹಸ್ಯ ಬಯಲು
»ಸಾವಿನ ಕದ ತಟ್ಟಿದವರಿಗೆ ಸೂರಿ ಎಂಬ ಆಸರೆ: ಉಡುಪಿ ಜಿಲ್ಲೆ ಕಾಪುವಿನಲ್ಲಿ ಹೀಗೊಬ್ಬ ನಿಸ್ವಾರ್ಥಿ ಆಪದ್ಬಾಂಧವ :ದುರ್ಘಟನೆ, ಸಾವು ಸಂಭವಿಸಿದಾಗ ನೆರವಾಗುವ ಸುರೇಶ್ ಶೆಟ್ಟಿ
»ಆಕರ್ಷಕ, ರಮ್ಯ ರಮಣೀಯ ತಾಣ ‘ಕುಂದಾದ್ರಿ’
»ಕಾಲೇಜು ಸೇರುವ ಹೊತ್ತು... ನಾಲ್ಕು ಕಿವಿಮಾತು
»ಪ್ರತಿಯೊಬ್ಬ ಭಾರತೀಯ ತಿಳಿಯಬೇಕಾದ ಸಂಗತಿ
»ಕತ್ತೆ ಕಾಣದ ಜಿಲ್ಲೆ
»ಕನ್ನಡಿತಿ-ನನ್ನ ಹೆಸರು ಕನ್ನಿಕಾ ಚಟರ್ಜಿ
»ಮ೦ಗಳೂರು: ಎಲ್ಲಿಯೇ ಇದ್ದರೂ ಸಾಧನೆಯ ಶಿಖರಕ್ಕೇರಬಹುದು ಎನ್ನುವುದಕ್ಕೆ ಜೀವ೦ತ ಸಾಕ್ಷಿಯಗಿದ್ದರೆ ಸಾಕ್ಷರ ಸಂತ ಹುಸೇನ
»ಅಪರೂಪದ ವಿಶಿಷ್ಟ ಕಲಾವಿದ ಕಾಶಿ
»ಸೋತು ಗೆದ್ದ ಯುದ್ಧ ವೀರ- ಬ್ರಿಗೇಡಿಯರ್ ದೇವೀಂದರ್ ಸಿಂಗ್
»‘ಗಲ್ಫ್’ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕದವರಿಲ್ಲ: ಕೊಲ್ಲಿಯ ಗಾಳಕ್ಕೆ ಸಿಕ್ಕ ಮೀನು
»‘ಜ್ಞಾನದೇಗುಲ’ದಲ್ಲಿ ಮಾಹಿತಿಯ ಮಹಾಪೂರ
»‘ಆಟೊ ಪೈಲಟ್’ ಅವಲಂಬನೆ ಸರಿಯೇ?
»ಎರಡು ವರ್ಷಗಳ ಸಾಧನೆ: ಟೀಮ್ ಸೋತ್ರೂ ಸಿ‌ಎಂ ಮ್ಯಾನ್ ಆಫ್ ದಿ ಮ್ಯಾಚ್: ರಾಜ್ಯ ಸರ್ಕಾರದ ಸಾಧನೆ ಅಂಕ 10ರಲ್ಲಿ 5.6
»ರಾಜಕಾರಣಿಗಳು, ಐ‌ಎ‌ಎಸ್‌ಗಳು ವಿಮಾನ ಹಾರಿಸಲಾರರು
»ಕೊಲ್ಲಿಯಿಂದೊಂದು ವಿಷಾದ ವಾಕ್ಯ.....
»ಬರದಿರಿ ನಮ್ಮ ದೇಶಕ್ಕೆ
»ದೂರದೃಷ್ಟಿ ಇದ್ದು, ರಾಜಕೀಯ ದೊ೦ಬರಾಟ ಬಿಟ್ಟು ಒಗ್ಗಟ್ಟಾಗಿ ದುಡಿದರೆ ಬೆಂಗಳೂರನ್ನು ಸಿಂಗಪುರ ಮಾಡಬಹುದು
»ಆ ಮೊಬೈಲ್ ಫೋನೊಂದು ಸ್ವಿಚ್ ಆಫ್ ಮಾಡು !!!!!
»ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..
»ಸೂರ್ಯಂಗೇ ಡಿಕ್ಕಿ!: ತಾಪದ ಮನೆಗೆ ಪ್ರವೇಶಿಸಿದ ಗ್ರೇಸಿಂಗ್
»ಕನ್ನಡಿಗೆ ಹೆದರುವುದು ಯಾಕೆ?
»ಪ್ರಜ್ಞಾವಂತರೇಕೆ ಮತಗಟ್ಟೆಗಳಿಂದ ದೂರ?
»ಮಂಗಳೂರು : ಕಾಳು ಮೆಣಸಿನಲ್ಲಿ ಶೀಘ್ರ ಸೊರಗು ರೋಗ - ರೋಗದ ಸಮಗ್ರ ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು:
»ಜನ ಜಾಗ್ರತಿ ಮೂಡಿಸಲು 65 ವರ್ಷದ ಉಮಾಪತಿಯವರ ಸಕ್ಕತ್ ಸೈಕಲ್ ಸವಾರಿ
»ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?
»ಬಯಲಿಗೆ ಬಂದ ಶ್ರೀರಾಮಸೇನೆಯ ಕರಾಳ ಮುಖ
»ಉನ್ನತ ಹುದ್ದೆಗಳನ್ನು ಅಲ೦ಕರಿಸಿದ ಸಾಧಕ ಅಂಬಲಪಾಡಿ ಕೃಷ್ಣರಾವ್
»ಬಸ್ರೂರು: ನೈಸರ್ಗಿಕ ಸೊಬಗಿನ ತಾಣ ಜೋಗಿ ಗುಂಡಿ
»(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
»ಶನಿಗ್ರಹದ ಚಂದ್ರಲೋಕ: ಶನಿಯನ್ನು ಸುತ್ತುತ್ತವೆ 62 ಉಪಗ್ರಹಗಳು
»ಎಚ್ಚರಿಕೆ! ವಿಮಾನದಲ್ಲಿ ಉರ್ದು ಮಾತನಾಡಬಾರದು!!!
»ಬುರುಡೆ ಜೋಗ: ನೀವು ಹೋಗಲೇಬೇಕು ಇಲ್ಲಿಗೆ
»ಕನ್ನಡದ ದೊಡ್ಡಿಯಲ್ಲಿ ಆಂಧ್ರದ ಎಮ್ಮೆ
»ಅರೇಬಿಯಾದ ಆ ಪ್ರವಾದಿ ಚಂದ್ರಶೇಖರ್ ಮಂಡೆಕೋಲು ತಿಳಿದಂತೆ
»ಉಪ್ಪು ತಿಂದ ಶೇಖಾವತ್, ನೀರು ಕುಡಿದ ಆರೆಸ್ಸೆಸ್
»18ಕ್ಕೆ ಗಾಳಿಪಟ ಆಕಾರದಲ್ಲಿರುವ ಆಕಾಶ ನೌಕೆ ಉಡಾವಣೆ
»ನಾವೇಕೆ ಸೋಲಬೇಕು?
»ಕೊನೆಯ ಆಟಕ್ಕೆ ರೆಡಿ ‘ಮುತ್ತುವೇಲು ಕರುಣಾನಿಧಿ’
»ಸ್ವಯಂ ಗಲ್ಲಿಗೇರುತ್ತಿರುವ ಅಡಿಕೆ ಬೆಳೆಗಾರ್ರು ! ಅಂಡಮಾನ್‌ಗೆ ಅವಮಾನ ?
»ದೇವರಿಲ್ಲ: ಇ೦ದು ತಾಯ೦ದಿರ ದಿನಾಚರಣೆ: ಎಲ್ಲಾ ತಾಯ೦ದಿರಿಗೂ ‘ಹ್ಯಾಪಿ ಮದರ್ಸ್ ಡೇ...
»ಕಸಬ್‌ಗೆ ಗಲ್ಲು: ತೀರ್ಪು ಮಾತ್ರ, ಶಿಕ್ಷೆ ಯಾವಾಗ?
»ಇದು ಶಿಲಾಯುಗದ ಗ್ರಾಮವೇ?
»ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!
»ವಿನಾಕಾರಣ ಚಾರಣಕ್ಕೆ ತೆರಳಿ
»ಸೊಬಗಿನ ಶೃಂಗೇರಿ, ಬಚ್ಚಿಟ್ಟ ಐಸಿರಿ
»ಕರಾವಳಿಯ ಈ ರೈತನ ವ್ಯಥೆ ನೀಡುತ್ತಿರುವ ಕರಾಳ ಸೂಚನೆಯಾದರೂ ಏನು?
»ಆತ ಏನೂ ತಿನ್ನಲ್ಲ, ನೀರೂ ಕುಡಿಯಲ್ಲ, ಮೂತ್ರನೂ ಮಾಡಲ್ಲ!
»ಶಿವಮೊಗ್ಗ ಹಿಂಸಾಚಾರ -ಒಂದು ಸತ್ಯಶೋಧನೆ
»ಸಚಿವರಿ೦ದ ಶೀಲಭ೦ಗದ ಪ್ರಯತ್ನ: ರಾಜ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ
»ಕಡಲತಡಿಯಲ್ಲಿ ಸಿಡಿಲಿನ ಪ್ರತಾಪ : ಇದಕ್ಕೆ ಪರಿಹಾರ?
»ನಮ್ಮ ಭಾರತದ ಕಾನೂನು ವ್ಯವಸ್ಥೆ
»ಅಂತಾರಾಷ್ಟ್ರೀಯ ಗಮನದತ್ತ ‘ಬೇಕಲ ಬೀಚ್ ಪಾರ್ಕ್’
»ಪಡುವಣ ಕಡಲು, ನಿಸರ್ಗದ ಮಡಿಲು ಈ ದಕ್ಷಿಣ ಕನ್ನಡ ಜಿಲ್ಲೆ
»ಭೀಮಗಡವನ್ನು ಬಾವಲಿಗಳ ಸ೦ರಕ್ಷಣೆಗಾಗಿ ರಕ್ಷಿತಾರಣ್ಯ ಎಂದು ಘೋಷಣೆ
»ಆವಾಗ ಹೆಣ್ಣಿನಿ೦ದಲೇ ರಾಮಾಯಣ, ಮಹಾಭಾರತ ನಡೆದವು ಈಗ ನಡೆದ ಐಪಿಎಲ್ ವಿವಾದ ಸಹ ಹಣ್ಣೆನಿ೦ದಲೇ ಆರ೦ಭ
»ಐದು ನದಿ, ಐದು ಅಣೆಕಟ್ಟುಗಳಿರುವಲ್ಲಿ ತಲಾ 45 ಲೀಟರ್ ನೀರು ರೇಶನ್!
»ಈಗ ಬಾರೀ ವಿವಾದದ ಸುಳಿಯಲ್ಲಿರುವ ಗ್ರಹಮ೦ತ್ರಿ ವಿ.ಎಸ್. ಆಚಾರ್ಯ
»ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?
»ದಿಲ್ಲಿ ದೊರೆಗಳ ಕಿವಿಗೆ ತಲುಪಲಿ ರೈಲ್ವೇ ಹಕ್ಕುಗಳ ಕೂಗು
»ಗುಲ್ಬರ್ಗಾ ಸ್ವಾಮೀಜಿಗೆ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ!
»ಆಹಾರ ಕಲಬೆರಕೆ ಅಪರಾಧಕ್ಕೆ ಶಿಕ್ಷೆ ವಿಧಿಸಲು ನಾಲ್ಕು ವರ್ಷ ಬೇಕಾಯಿತಾ?
»ಧುಮ್ಮಿಕ್ಕುವ ನಯಾಗರ : ಉಂಚಳ್ಳಿ ಜಲಪಾತ
»ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ
»ನಿರಂತರ ಚಟುವಟಿಕೆ ಆರ್. ಅಶೋಕ್
»ಗೋ ಹತ್ಯೆ ಬಗ್ಗೆ ಸಾವರ್ಕರ್ ಉವಾಚ
»ಪ್ರಪಂಚ ಬದಲಾಗಿದೆ, ಅಲ್ಲವೇ ದಾದಾ?
»ಕೂಡಲ ಸ೦ಗಮದ ಪಕ್ಕದಲ್ಲಿರುವ ಚಿಕ್ಕ ಸಂಗಮ ನೋಡಿರಯ್ಯಾ!
»ಆಯೋಗ ಯಾಕೆ ಬೇಕಿತ್ತು?
»‘ಸೌರ’ ವಿಮಾನದ ಕನಸು ನನಸು ಬೆರ್ಟ್ರಾಂಡ್ ಪಿಕಾರ್ಡ್ ಹಾಗೂ ಆಂಡ್ರೆ ಬೋರ್ಶ್‌ಬರ್ಗ್ ಅವರ ಏಳು ವರ್ಷಗಳ ದೀರ್ಘ ತಪಸ್ಸಿಗೆ ದೊರಕಿದ ಯಶಸ್ಸು
»ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 : ಮಂತ್ರಕ್ಕಿಂತ ಉಗುಳೇ ಜಾಸ್ತಿ
»ಕಲೆಯ ಸಾಧಕ ಮೌನ ಗಾರುಡಿಗ ಬ೦ಟ ಜನಾ೦ಗದ ಈ ಕೆಂಚನೂರ ಶಂಕರ
»ಜಲಿಯನ್‌ವಾಲಾ ಬಾಗ್ ಗುಂಡಿನ ಸದ್ದಿಗೆ 91 ವರ್ಷ
»ಸೂರ್ಯನಗರಿಯಲ್ಲಿ ಬುದ್ಧನ ಸಾಮೀಪ್ಯ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಅವರೇ ಇವರು ದಂಡಕಾರಣ್ಯದ ದಂಡನಾಯಕರು | ತೆರೆಯಿತು ದಂಡಕಾರಣ್ಯದ ಚರಿತ್ರೆಯ ಪುಟ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಕಾಡೆಂಬ ನಾಡಲ್ಲಿ... ದೀದಿಯ ನಿರೀಕ್ಷೆಯಲ್ಲಿ... (ಅರುಂಧತಿ ರಾಯ್ ಲೇಖನ-2)
»ಶಿಲಾ ಬಾಲಕಿಯ೦ತೆ ಕಾಣುತ್ತಾಳೆ ಈ ಬೆಲ್ಕಲ್ ತೀರ್ಥ
»ಇತಿಹಾಸ ನಿರ್ಮಿಸಿದ ಬ್ಯಾರೀ ಸಮ್ಮೇಳನ: ಸಮುದಾಯ ಸಬಲೀಕರಣಾದತ್ತ ಸ್ತ್ರೀಯ ಚಿತ್ತ: ವರದಕ್ಷಿಣೆಗಳ೦ತಹ ಅನಿಷ್ಟಗಳನ್ನು ಹೋಗಲಾಡಿಸಲು ಸ್ತ್ರೀ ಸಮೂಹ ಕಟಿಬದ್ದರಾಗಬೇಕು
»ದಾಂತೆವಾಡ ಅರಣ್ಯದತ್ತ ಮುಖ ಮಾಡಿ... ( ಅರುಂಧತಿ ರಾಯ್ ಲೇಖನ)
»ಎಲೆ ಮರೆಯ ಕೋಗಿಲೆ ಶ೦ಕರ್
»ಬಾರೀ ಸುದ್ದಿಯಲ್ಲಿರುವ ವಿಶ್ವದ ಅತ್ಯ೦ತ ದೊಡ್ಡ ಸರ್ಚ್ ಇ೦ಜಿನ್ ಹೊ೦ದಿರುವ ಗೂಗಲ್
»ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ?
»ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.
»ಮೈಕ್ರೋ ವಿಶ್ವದ ವಿಸ್ಮಯದ ದೃಶ್ಯ
»`ಮುಲ್ಕಿ'ಯ ಮೂಲ ಎಲ್ಲಿದೆ?
»ನರೇಂದ್ರ ಮೋದಿಯ ಬಗ್ಗೆ ಒ೦ದಿಷ್ಟು ವಿಚಾರ
»ಮರುಭೂಮಿಯ ಎಲೆಮರೆಕಾಯಿ
»ವಿಶ್ವದಲ್ಲೇ ಅತಿದೊಡ್ಡ ತೆಂಗಿನ ಜನನ ದ್ರವ್ಯ ಶೇಖರಣೆ ಕೇಂದ್ರ ಎಂಬ ಮನ್ನಣೆ ಪಡೆದ ಕಾಸರಗೋಡಿನ ಸಿಪಿಸಿಆರ್‌ಐ
»‘ಇ-ತ್ಯಾಜ್ಯ’ ಬೆಟ್ಟವಾಗಿ ಬೆಳೆದೀತು ಎಚ್ಚರ!
»ಆಮೆರಕ್ಷಕ ಈ ಮರವಂತೆ ಅಜ್ಜ
»ಮಾ೦ದಲಪಟ್ಟಿಯನ್ನು ಪ್ರವಾಸದ ಪಟ್ಟಿಗೆ ಸೇರಿಸಿ
»ಎಸ್.ಎಂ. ಕೃಷ್ಣ: ಅನಿರೀಕ್ಷಿತ ಹೊಣೆ
»ಹಿಂದುಳಿದ ಮುಸ್ಲಿಮರಿಗೆ ಮೀಸಲು
»ವಿಶ್ವದ ಏಕಮಾತ್ರ ಅಮರಜೀವಿ
»ಕರಾವಳಿ: ಬೆಚ್ಚಿ ಬೀಳಿಸುವ ರಸ್ತೆ ದುರವಸ್ಥೆ
»ಮಾಯಾವತೀ.....ಯ ಹೊಸ ಆಯಾಮದ ರಾಜಕೀಯ
»ರಾಜ್ಯಸಭೆಯ ಮಾಜಿ ಸದಸ್ಯ ಎಫ್.ಎಂ. ಖಾನ್ ಅವರ ಆಸಕ್ತಿ ಮತ್ತು ಅಭಿರುಚಿಯ ಸಂಕೇತವೇ ಅಪೂರ್ವವಾದ ಈ ಪುಷ್ಪ ಕಾಶಿ
»ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಜೈನ್‌‘ಡ್ರೋಣ್’ ತ೦ಡ
»ಸುಸ್ಥಿರ, ಸುಭದ್ರ ಬೆಂಗಳೂರಿಗೆ ಹನ್ನೆರಡು ಸೂತ್ರಗಳು
»ಭಗತ್‌ಸಿಂಗ್‌ರಿಗೆ ಕನಿಷ್ಠ ಶ್ರದ್ಧಾಂಜಲಿಯೂ ಇಲ್ಲವೇ?
»ಸಾಧನೆಯ ಹಾದಿಯಲ್ಲಿ ಸರೋದ್ ಸಖ
»ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ಬದಲಾಗಲಿದೆ ಬನ್ನೇರುಘಟ್ಟ
»ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
»ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ
»ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು
»ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ
»ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
»ಮಹಿಳಾ ಮೀಸಲಾತಿ ನಿರರ್ಥಕವೇ?
»'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು
»ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ
»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಭೂಸ್ಖಲನ: ಯಾರಿಗೆ ಬೇಕು ಈ ಲೋಕ?
»ನೀವು ಎಲ್ಲೇ ಇರಿ ಹುಸೇನ್, ಕಲೆಯ ಅರಳಿಸಿ: ಕತಾರ್ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಅವರದೇ ಸ್ವತಂತ್ರ ಬಯಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri