ಶುಕ್ರವಾರ, 12-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವನ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item 1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ನೋಡ ಬನ್ನಿ ಮಾತನಾಡುವ ಮಂಜುನಾಥನ ದರುಶನ....

ಗಲ್ಫ್ ಕನ್ನಡಿಗದ  ಗೌರವ ಸ೦ಪಾದಕರಾದ ಶ್ರೀಮತಿ ಗೋಪಿಕಾ ಮಯ್ಯರಿಂದ ಡಾ. ವೀರೇ೦ದ್ರ ಹೆಗ್ಗಡೆಯವರೊ೦ದಿಗೆ ವಿಶೇಷ ಸ೦ದರ್ಶನ   

800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳವೆಂದರೆ ಇಂದು ಜಗ್ಗನೆ ನೆನಪಾಗುವುದು ವೀರೇಂದ್ರ ಹೆಗ್ಗಡೆಯರ ಹಸನ್ಮುಖಿ ಸುಂದರ ವದನ. ಅಂತಹ ಅವಿನಾಭಾವ ಸಂಬಂಧ ಅವರಿಬ್ಬರದು. ಮಾತನಾಡುವ ಮಂಜುನಾಥನೆಂದೇ ಜನರಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ದಿನಚರಿಯ ಪುಟದ ಒಂದು ನೋಟ ..............

ಬಲ್ಲಿರೇನಯ್ಯ? ಮೂಕವಿಸ್ಮಿತನಾಗುವುದು ಅಂದರೇನೇಂದುಕೊಂಡಿರಿ?

ಅನುಭವಿಸಿದ್ದೀರೇನು? ಇಲ್ಲವಾದರೆ ಇದೀಗ ಹೊರಡಿ ಧರ್ಮಸ್ಥಳಕ್ಕೆ.

ನಿಜ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವ, ಕಾರ್ಯವ್ಯಾಪ್ತಿ, ಕಾರ್ಯಕ್ಷಮತೆ, ದಕ್ಷತೆ, ಸಮತೂಕದ ನಡೆನುಡಿ, ಆಡಂಬರದ ಪ್ರದರ್ಶನವಿಲ್ಲದ ಸರಳ, ಮಮತಾಮಯಿ, ಸ್ವಚ್ಛ ಶುದ್ಧ ಸ್ಫಟಿಕದಂತಿರುವ ಹೆಗ್ಗಡೆಯವರನ್ನು ನೋಡುವಾಗ ಎಂತೆಂತವರೂ ಮೂಕವಿಸ್ಮಿತರಾಗುತ್ತರೆ.

ಸುಮಾರು 800ವರ್ಷಗಳ ಹಿನ್ನೆಲೆಯಿರುವ ಧರ್ಮಸ್ಥಳದಲ್ಲಿ ಅನುಶಾಸನದಂತೆ ಅನ್ನದಾನ ನಡೆಯುತಿತ್ತು. ನ್ಯಾಯದಾನ, ಶಿಕ್ಷಣದಾನ, ಔಷಧ ದಾನ ಹೆಗ್ಗಡೆಯವರ ಹಿರಿಯರಿಂದ ಪ್ರಾರಂಭವಾಯಿತು. ಅಂಥಹ ಮಹಾನುಭಾವ ಹಿರಿಯರಿಂದ ಪ್ರೇರಣೆ ಪಡೆದು ಅದೇ ಮಾರ್ಗದಲ್ಲಿ ಖಾವಂದ ವೀರೇಂದ್ರ ಹೆಗ್ಗಡೆಯವರು ಬೆಳೆದ ರೀತಿ ಅನನ್ಯವಾದದ್ದು. ಕರ್ನಾಟಕದಾದ್ಯಂತ ಹಬ್ಬಿದ ರೀತಿ ಅನಾದೄಶ್ಯವಾದದ್ದು. ನಿಂತ ನೆಲೆಯಲ್ಲಿ ಗ್ರಾಮಾಭಿವೄದ್ಧಿಯ ಯೋಜನೆ ಕೈಗೊಂಡು ಪ್ರಜೆಗಳಿಗೆ ಸ್ವಾವಲಂಬನೆ ಯನ್ನು ಕಲಿಸಿ ಆರ್ಥಿಕ ಪ್ರಗತಿ ಪಥದಲ್ಲಿ ಕೊಂಡೊಯ್ದದ್ದಲ್ಲದೆ ಇದೀಗ ಉತ್ತರ ಕರ್ನಾಟಕ ದಲ್ಲಿಯೂ ಹಬ್ಬಿ ಅಲ್ಲಿಯ ಪ್ರಜೆಗಳಿಗೂ ಸ್ವಾವಲಂಬನೆ ಮತ್ತು ಸ್ವೋದ್ಯೋಗ ಅವಕಾಶ ಗಳನ್ನು ಕಲ್ಪಿಸಿ ಕೊಡುತ್ತಿದ್ದಾರೆ.

ಧರ್ಮಸ್ಥಳದ ನ್ಯಾಯದಾನ ಎಲ್ಲರಿಗೂ ತಿಳಿದದ್ದೇ. ಅದರಲ್ಲುಈ ಮಾತನಾಡುವ ಮಂಜುನಾಥನ ನ್ಯಾಯದಾನಕ್ಕೆ ಜನ ಸಾಲುಗಟ್ಟಿ ನಿಲ್ಲುವುದು ನೋಡುವಾಗ ಮೈ ಜುಂ ಅನ್ನುತ್ತದೆ. ಮಾತು ತೀರ್ಮಾನ, ಸಾರ್ವಜನಿಕ ಅಹವಾಲುಗಳಿರುವ ಸೋಮವಾರ ವಂತೂ ಜನಸಾಗರವೇ ಹರಿದು ಬರುತ್ತದೆ ಈ ಮಂಜುನಾಥನೆಡೆ.

ಕೇವಲ ಮೆಡಿಕಲ್ ಮತ್ತು ಇಂಜಿನೀಯರಿಂಗ್ ಗಳು ಮಾತ್ರವೇ ಶಿಕ್ಷಣವಲ್ಲ, ಕಾನೂನು, ಮ್ಯಾನೇಜ್-ಮೆಂಟ್, ಆಯುರ್ವೇದ ಶಿಕ್ಷಣಗಳೂ ಶಿಕ್ಷಣವೇ ಎಂದು ತೋರಿಸಿದ್ದಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಂದು ಆಯುರ್ವೇದಕ್ಕಂತೂ ಪುನರ್ಜನ್ಮ ಲಭಿಸಿದೆ ಎಂದರೆ ಉತ್ಪ್ರೇಕ್ಷೆಯಾಗದು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಎಂ.ಬಿ.ಏ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳೆಂದು ಪರಿಗಣಿಸಲ್ಪಡುತ್ತವೆ.

ಡಾ. ವೀರೇಂದ್ರ ಹೆಗ್ಗಡೆಯವರ ಕೈಂಕರ್ಯಗಳಿಗೆ ಸಂದ ಗೌರವಗಳು ಸಮ್ಮಾನಗಳು ಅದೆಷ್ಟೋ!!! ಇಂತಹ ವರ್ಚಸ್ಸಿನ, ಲೋಕ ಕಲ್ಯಾಣ ಮಾಡುವ ವ್ಯಕ್ತಿ ತಮ್ಮ ಪಕ್ಷಕ್ಕೆ ಬರಲಿ ಎಂದು ಪ್ರಯತ್ನಿಸಿದ ರಾಜಕೀಯ ಪಕ್ಷಗಳದೆಷ್ಟೋ!!! ಆದರೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೊಗಳಿಕೆಗೆ ಉಬ್ಬದೆ, ತೆಗಳಿಕೆಗೆ ಕುಗ್ಗದೆ ತನ್ನ ಕೈಂಕರ್ಯವನ್ನು ಇನೂ ಎಲ್ಲೆಡೆ ಪಸರಿಸುವ ಯೋಜನೆಯಲ್ಲಿ ವಿನೀತಭಾವದಿಂದ ಮಗ್ನರಾಗಿದ್ದಾರೆ.

ಇಂತಿಪ್ಪ ಧರ್ಮಾಧಿಕಾರಿಗಳಿಗೆ ಇದೀಗ ಷಷ್ಟ್ಯಬ್ಧಿ ತುಂಬಿಹುದು.

ಭಾರತೀಯ ಜ್ಯೋತಿಷ್ಯದ ಕಾಲಗಣನೆಯ ಪ್ರಕಾರ ಅರುವತ್ತು ಸಂವತ್ಸರಗಳ(ವರ್ಷಗಳ) ಒಂದು ಚಕ್ರಕ್ಕೆ ಷಷ್ಟ್ಯಬ್ಧ ಎನ್ನುತ್ತಾರೆ. ಒಂದು ಚಕ್ರ ಪೂರ್ತಿಯಾಗುವ ಸಂಕ್ರಮಣ ಕಾಲದಲ್ಲಿ ಷಷ್ಟ್ಯಬ್ಧಿಪೂರ್ತಿ ಆಚರಿಸಿ ವ್ಯಕ್ತಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಾರೆ. ಅಂತೆಯೇ ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಅರುವತ್ತು ತುಂಬಿದ ಈ ಸಂಕ್ರಮಣ ಕಾಲದಲ್ಲಿ ನಾಡಿಗೆ ನಾಡೇ ಎದ್ದು ನಿಂತು ಗೌರವ ಸಲ್ಲಿಸಿ ಅವರಿಗೆ ದೀರ್ಘಾಯಸ್ಸು ಆರೋಗ್ಯವನ್ನು ಹಾರೈಸುತ್ತಿದ್ದಾರೆ. ಜನರ ಅಭಿಮಾನದ ಮಹಾಪೂರವೇ ಆಶೀರ್ವಾದವಾಗಿ ಹರಿದು ಬರುತ್ತಿದೆ. ಮಮತೆಯ ಸಾಕಾರಮೂರ್ತಿಯಂತಿರುವ ಹೆಗ್ಗಡೆಯವರ ಮೇಲೆ ಜನತೆಯಿಟ್ಟಿರುವ ಮಮತೆಯ ಸಾಕ್ಷಾತ್ಕಾರವಾಗುತ್ತಿದೆ.

1948 ,25 ನವೆಂಬರನಂದು ಜನಿಸಿದ ವೀರೇಂದ್ರ ಹೆಗ್ಗಡೆಯವರು 21-10 1968ಕ್ಕೆ ಪಟ್ಟಾಭಿಷಿಕ್ತರಾದರು. 26-12 1972ರಲ್ಲಿ ಹೇಮಾವತಿ ಹೆಗ್ಗಡೆಯವರೊಂದಿಗೆ ವಿವಾಹವಾದ ಹೆಗ್ಗಡೆಯವರಿಗೆ ಓರ್ವ ಪುತ್ರಿ ಶ್ರದ್ಧಾ. ಇಪ್ಪತ್ತನೇ ವರ್ಷದಲ್ಲಿ ಧರ್ಮಾಧಿ ಕಾರಿಯಾಗಿ ಹೆಗ್ಗಡೆ ಪಟ್ಟಕ್ಕೇರಿದ ಖಾವಂದರ ನಲುವತ್ತು ವರ್ಷಗಳ ಸಾಧನೆ ಅನ್ಯತ್ರ ಕಾಣಲು ಸಿಗದು. ತಮಗೆ ದೊರಕಿದ ಸಂಪನ್ಮೂಲಗಳನ್ನು ಸಮಾಜಮುಖಿಯಾಗಿ ಜನಹಿತಕ್ಕಾಗಿ ಬಳಸುವ ದೂರದರ್ಶಿತ್ವ ಪ್ರಾಯಶಃ ಜನ್ಮಜಾತವಾಗಿಯೆ ಬಂದಿದೆ. ಅನ್ನದಾನ, ಶಿಕ್ಷಣ ದಾನ ಔಷಧ ದಾನ ನ್ಯಾಯದಾನವಲ್ಲದೆ ಸಾಮಾಜಿಕ ಪಿಡುಗು ಗಳಾದ ವರದಕ್ಷಿಣೆ ಹಾಗೂ ಮದ್ಯ ಪಾನ ನಿರ್ಮೂಲನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿತಂದಿದ್ದಾರೆ. ಸಾಮೂಹಿಕ ವಿವಾಹದ ಯೋಜನೆಯಲ್ಲಿ ಈವರೆಗೆ 10000ಕ್ಕೂ ಹೆಚ್ಚು ಜೋಡಿಗಳು ಸತಿಪತಿಗಳಾಗಿದ್ದಾರೆ. ರುಡ್ ಸೆಟ್ ನಂತಹ ತಾಂತ್ರಿಕ ಶಿಕ್ಷಣದಿಂದ ಅನೇಕರಿಗೆ ಸ್ವಾವಲಂಬನೆಯ ದಾರಿ ತೋರಿಸಿದ್ದಾರೆ.

ಖಾವಂದರ ಸಹೋದರರಾದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಶ್ರೀರಾಮನೊಂದಿಗೆ ಭರತ ಲಕ್ಷ್ಮಣ ಶತ್ರುಘ್ನನಂತೆ ಸದಾ ಜೊತೆಯಲ್ಲಿದ್ದು ಸಹಯೋಗ ನೀಡಿದ್ದಾರೆ. ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲದೆ ಸ್ತ್ರೀಯರಿಗಾಗಿ ಜ್ಞಾನವಿಕಾಸ, ಸಿರಿ ಮೊದಲಾದ ಯೋಜನೆಗಳನ್ನ್ಯು ಹಮ್ಮಿಕೊಂಡು ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಆದರ್ಶ ಧರ್ಮಪತ್ನಿಯಾಗಿ ರಾರಾಜಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಹೆಗ್ಗಡೆಯವರ ಪ್ರಿಯವಾದ ಹವ್ಯಾಸಗಳೆಂದರೆ ಅಪರೂಪದ ವಸ್ತುಗಳ ಸಂಗ್ರಹ, ಹಳೆಯ ಕಾರುಗಳ ಸಂಗ್ರಹ ಮತ್ತು ಛಾಯಗ್ರಹಣ. ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಕಳೆದ ನಲುವತ್ತು ವರ್ಷಗಳಿಂದ ಹೆಗ್ಗಡೆಯವರು ಆಸಕ್ತಿವಹಿಸಿ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಇನ್ನು ಹಳೇ ಕಾರುಗಳ ಸಂಗ್ರಹವಂತೂ ಲಕಲಕ ಹೊಳೆಯುತ್ತಿದೆ. ಅಲ್ಲಿಯ ಪ್ರತಿಯೊಂದು ಕಾರುಗಳನ್ನು ಸುಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕಾಪಾಡಲಾಗುತ್ತದೆ.

ಇಂತಹ ಬಹುಮುಖೀ ಪ್ರತಿಭೆಯ ಕಾರ್ಯವ್ಯಾಪ್ತಿ ಇಲ್ಲಿಗೆ ಮುಗಿಯದು. ಯಕ್ಷಗಾನ ಮೇಳವನ್ನೂ, ಯಕ್ಷಗಾನ ತರಬೇತಿ ಕೇಂದ್ರವನ್ನೂ ನಡೆಸಿ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಜನರಲ್ಲಿರುವ ಜೀರ್ಣಸ್ಥಿತಿಯ ತಾಡೋಲೆ ಗ್ರಂಥಗಳನ್ನು ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿಸಿ ಅವುಗಳನ್ನು ಹೊಸದರಂತೆ ಮಾಡಿ ಯಜಮಾನರಿಗೆ ಹಿಂತಿರುಗಿಸುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳುವ ಮೂಲಕ ಪ್ರಾಚೀನ ತಾಡೋಲೆ ಗ್ರಂಥಗಳನ್ನು ಕಾಪಿಡುವ ಕೈಂಕರ್ಯ ಪ್ರಾರಂಭಿಸಿದ್ದಾರೆ. ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಿ ಹೊಸ ಪರಂಪರೆಗೆ ಆಯಾಮ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಗೋಮಟೇಶ್ವರನನ್ನು ಸ್ಥಾಪಿಸಿ ವರ್ತಮಾನದ ಚಾವುಂಡರಾಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶತಮಾನದಲ್ಲಿ ನಡಾವಳಿಯನ್ನು ನಡೆಸಿದ ಧೀಮಂತರಿವರು.

ಬದಲಾಗುತ್ತಿರುವ ವರ್ತಮಾನದಲ್ಲಿ ಸೂಕ್ತ ಬದಲಾವಣೆಗಳನ್ನು ಗುರುತಿಸಿ ತತ್ಕ್ಷಣ ಕಾರ್ಯ ರೂಪಕ್ಕೆ ತಂದು ತಮ್ಮ ಶಿಕ್ಷಣ , ಔಷದ ಸಂಸ್ಥೆಗಳ ಉನ್ನತ ಗುಣಮಟ್ಟವನ್ನು ಪರಿಷ್ಕರಿಸಿದ್ದಾರೆ. ಉದಾಹರಣೆಗೆ ಇಂಗ್ಲೀಷ್ ಮಾಧ್ಯಮ ಶಾಲೆಯ ಔಚಿತ್ಯ ಕಂಡ ಕೂಡಲೇ ಎಸ್.ಡಿ.ಎಮ್. ಸಂಸ್ಥೆಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನೂ ಪ್ರಾರಂಬಿಸಿದ್ದಾರೆ.

ಎಂಟು ಶತಮಾನಗಳ ಭವ್ಯ ಪರಂಪರೆಯಿರುವ ಧರ್ಮಸ್ಥಳದ ಇಪ್ಪತ್ತೊಂದನೆಯ ಧರ್ಮಾಧಿಕಾರಿಗಳಾಗಿರುವ ಹೆಗ್ಗಡೆಯವರು ಶ್ರೀ ಕ್ಷೇತ್ರದ ಧಾರ್ಮಿಕ ಚಟುವಟಿಕೆಗಳ ಮೂಲಕ ವಾರ್ತಮಾನದಲ್ಲಿಯೂ ಧಾರ್ಮಿಕತೆ ಉತ್ತುಂಗದಲ್ಲಿರಲು ಕಾರಣಕರ್ತರಾಗಿ ದ್ದಾರೆ. ಮಾಮೂಲು ಮಠಾಧಿಪತಿಗಳಂತಲ್ಲದೆ, ರಾಜಕಾರಣದ ಕೆಸರು ಅಂಟಿಸಿಕೊಳ್ಳದೆ, ಶುಭ್ರ ಚಾರಿತ್ರ್ಯದ, ಶುಭ್ರವಸನರಾದ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಮೇಲಿಟ್ಟಿರುವ ಪ್ರೀತಿವಿಶ್ವಾಸದ ದ್ಯೋತಕವೇ ನಾಡಿನಾದ್ಯಂತ ನಡೆಯುತ್ತಿರುವ ಷಷ್ಟ್ಯಬ್ಧಿ ಸಮಾರಂಭ ಗಳು. ಓರ್ವ ವ್ಯಕ್ತಿಯಿಂದ ಇದೆಲ್ಲಾ ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿದರೆ ಅದಕ್ಕೆ ’ಸಾಧ್ಯಎಂಬುದನ್ನು ಹೆಗ್ಗಡೆಯವರ ದರ್ಶನದಿಂದಲೇ ತಿಳಿದುಕೊಳ್ಳಬಹುದು.

ಧರ್ಮಾಧಿಕಾರಿಗಳು ಬಹಳ ಹಾಸ್ಯಪ್ರಿಯರು. ತಮ್ಮ ಕಾರ್ಯವ್ಯಾಪ್ತಿಯ ಒತ್ತಡದ ನಡುವೆಯೂ ಅವರ ಹಾಸ್ಯಪ್ರಜ್ಞೆ ಸದಾ ಜಾಗೄತವಾಗಿರುತ್ತದೆ. ಕೆಲಸದ ಒತ್ತಡಗಳೇನಿ ದ್ದರೂ ಮನೆಮಂದಿಯೊಂದಿಗೆ ಮನೆಯವರಂತೇ ವ್ಯವಹಾರ. ಪ್ರಾಯಶಃ ಹಾಸ್ಯಪ್ರಜ್ಞೆ ಮತ್ತು ನಿರ್ಗರ್ವ ಸ್ವಭಾವದಿಂದಾಗಿಯೇ ಅನ್ಯೋನ್ಯವಾಗಿ ಸಂಸಾರ ನಡೆಯಿಸಲು ಸಾಧ್ಯವಾಯಿತು ಎಂದು ಹೇಮಾವತಿ ಹೆಗ್ಗಡೆಯವರ ಅಂಬೋಣ.

ಇಂತಿಪ್ಪ ಧರ್ಮಾಧಿಕಾರಿಗಳನ್ನು ಮುಖಾಮುಖಿ ಭೇಟಿಯಾಗುವ ಸಂದರ್ಭ ಬಂದರೆ.......?               ಬಂದೇಬಿಟ್ಟಿತು!

ಉಡುಪಿಯ ರಾಜಾಂಗಣದಲ್ಲಿ 2009 ಜನವರಿ.15ಕ್ಕೆ ಶ್ರಿ ಕೄಷ್ಣ ಮಠದ ಪರ್ಯಾಯ ಪುತ್ತಿಗೆ ಶ್ರೀಪಾದಂಗಳವರಿಂದ ಪ್ರಪ್ರಥಮ ಬಾರಿಗೆ ತುಲಾಭರದ ಸನ್ನಿವೇಶ, ತುಲಾಭಾರ ಮಾಡಿಸಿ ಶ್ರೀಪಾದಂಗಳವರಿಗೆ ಜನಮಾನಸದಲ್ಲಿ ಮಾತನಾಡುವ ಮಂಜುನಾಥನಾಗಿ ಮೆರೆಯುವ ಹೆಗ್ಗಡೆಯವರನ್ನು ಸಮ್ಮಾನಿಸಿದ ಆದರಣೀಯ ಭಾವ, ತೂಗಿಸಿಕೊಂಡ ಹೆಗ್ಗಡೆಯವರಿಗೆ ಜವಾಬ್ದಾರಿಯ ತೂಕ ಹೆಚ್ಚಾದ ಭಾವ. ಅಭಿನಂದನೆಗೈದ ಬನ್ನಂಜೆಯ ವರಿಗೆ ಮಾತುಗಳು ಬರಿಯ ಶಬ್ದವಾದಂತಹ ಅನುಭವ. ಇಂತಹದೊಂದು ಅನಿರ್ವಚ ನೀಯ ಸನ್ನಿವೇಶ ಸೄಷ್ಟಿಯಾಗಿತ್ತು. ಇವೆಲ್ಲದರ ಮಧ್ಯೆ ಬಹಳ ಪ್ರಯಾಸದಿಂದ ಒಂದು ಸೋಮವಾರದಂದು ಬೆಳಗಿನೀಂದ ಬೈಗಿನವರೆಗೆ ಅವರ ಜೊತೆಗಿದ್ದು ಕಾರ್ಯಕಲಾಪ ಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕೆ ಅನುಮತಿ ದೊರಕಿತು.

ಅಂತೆಯೇ 19ನೇ ತಾರೀಖು ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಉಡುಪಿಯಿಂದ ಗಲ್ಫ್ ಕನ್ನಡಿಗದ ಪ್ರತಿನಿಧಿಗಳು ಧರ್ಮಸ್ಥಳಕ್ಕೆ ಹೊರಟೆವು. ಹೆಗ್ಗಡೆಯವರು ಪ್ರಾತಃಕಾಲ ವಾರ್ತಾಪತ್ರಿಕೆಯನ್ನು ಓದುವುದರಿಂದ ಪ್ರಾರಂಭಿಸಿ ಪಾರ್ಶ್ವನಾಥನ ಪೂಜೆ ಮುಗಿಸಿ ಮಂಜುನಾಥನ ಪ್ರಸಾದ ಸ್ವೀಕರಿಸಿ, ಮಾತಿನ ತೀರ್ಮಾನ ಸಾರ್ವಜನಿಕರ ತುಲಾಭಾರ, ಅಹವಾಲುಗಳನ್ನು ಹತ್ತಿರದಿಂದ ಅವಲೋಕಿಸುವ ಒಂದು ಸುಯೋಗ. ನಡುನಡುವೆ ಸಂದರ್ಭ ಸಿಕ್ಕಿದಾಗಲೆಲ್ಲ ಅವರೊಡನೆ ಮಾತನಾಡುವ ಕ್ಷಣಗಳು, ಅಹಾ ನನಗಂತೂ ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ ಎನ್ನುವಂತಾಗಿತ್ತು. ಸಂದರ್ಶನಕ್ಕೆಂದು ಹೋದರೂ ಏನೆಂದು ಸಂದರ್ಶಿಸುವುದು? ಅನೇಕ ಪಕ್ಷಿಗಳಿಗೆ ಜೀವ ಜಂತುಗಳಿಗೆ ಆಶ್ರಯವೀಯುವ ವಿಶಾಲವಾದ ಆಲದ ಮರದಂತಹ ಹೆಗ್ಗಡೆಯವರ ವ್ಯಕ್ತಿತ್ವದ ಎದುರು ಕುಬ್ಜಳಾದ ಅನುಭವ. ಮಾತ್ರುಗಳೋ ಮಡಕೆಯಲ್ಲಿ ಕಲ್ಲು ಹಾಕಿ ಶಬ್ದ ಮಾಡಿಸಿದಂತ ವ್ಯರ್ಥ ಅನುಭವ. ಆದರೂ ಧೈರ್ಯ ಮಾಡಿ ಕೊನೆಗೂ ಅವರಲ್ಲಿ ಪ್ರಶ್ನೆಗಳನ್ನು ಕೇಳಿದೆ. ಉತ್ತರಗಳು ಗೊತ್ತಿರಲಿಲ್ಲವೆಂತಲ್ಲ ಅವರೊಡನೆ ಏನಾದರೂ ಮಾತನಾಡಬೇಕು ಅಂತ. ರಾಜಕೀಯದ ಬಗ್ಗೆ ಬೇಡ, ಸಾಧನೆಯ ಬಗ್ಗೆ ಬೇರೆಯವರು ಬೇಕಾದಷ್ಟು ಮಾತಾಡಿಬಿಟ್ಟಿದ್ದರಿಂದ ನನಗೆ ಅಲ್ಲಿ ಕೇಳಲು ಏನೂ ಉಳಿದಿರಲ್ಲಿಲ್ಲ.

ಮಂಜಯ್ಯ ಹೆಗ್ಡೆಯವರು ಪ್ರಾರಂಭಿಸಿದ ಸಂಸ್ಥೆಗಳಿಗೆ ಹೊಸ ಅಯಾಮ ನೀಡಿ ಸಾಂಸ್ಥಿಕ ಚೌಕಟ್ಟನ್ನು ನೀಡಿದವರು ವೀರೇಂದ್ರ ಹೆಗ್ಗಡೆಯವರು. ಕಳೆದ ನಲ್ವತ್ತು ವರ್ಷಗಳ ಸಾಧನೆಯನ್ನು ಅವಲೋಕಿಸುವಾಗ ಹೆಮ್ಮೆಯೆನಿಸುತ್ತದೆ. ಧರ್ಮಸ್ಥಳದಲ್ಲಿ ಪ್ರಾರಂಭ ಗೊಂಡ ಸಂಸ್ಥೆಗಳು ಇಂದು ರಾಜ್ಯದ ರಾಜಧಾನಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಲ್ಪ ಡುವುದು ವಿಶೇಷವೇ ಸೈ. ಮುಂದಿನ ಗುರಿ ಏನು ಅಥವಾ ಭವಿಷ್ಯದ ಬಗ್ಗೆ ತಲೆಕೆಡಿಸಿ ಕೊಳ್ಳದೆ ಇಂದಿನ ಗುರಿಯತ್ತ ನಿಸ್ಪೃಹರಾಗಿ ಸಾಗುವುದೇ ಹೆಗ್ಗಡೆಯವರ ಯಶಸ್ಸಿಗೆ ಕಾರಣ.

ಹೀಗೆ ಹೆಗ್ಗಡೆಯವರ ಸಂದರ್ಶನ ಮಾಡಿ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿ ಸೋಣ ಎಂದುಕೊಂಡಿದ್ದೆ ಆದರೆ ಅವರ ದರ್ಶನ ಮಾತ್ರದಿಂದ ನಮ್ಮನ್ನು ನಾವೆ ಗೌರವಿಸಿಕೊಂಡ ಭಾವನೆಯೊಂದಿಗೆ ಹಿಂದುರುಗಿದೆವು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಜೆ.ಪಿ.ಕಿಣಿ ಮತ್ತು ಗಲ್ಫ ಕನ್ನಡಿಗ ಬಳಗ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13

Tell a Friend

ಪ್ರತಿಸ್ಪಂದನ
jaya, siganduru
2010-02-17
thanks a good webpage
ಗಣೇಶ್ ರೈ, ಕೊಡಗು / ಶಾರ್ಜಾ
2009-08-13
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿ ತಯಾರಿಯ ಸಭೆಯನ್ನು ನಡೆಸಲು ಕೆಲವು ದಿನಗಳ ಹಿಂದೆಯಷ್ಟೆ ಆಗಮಿಸಿದ್ದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ದುಬಾಯಿಯಲ್ಲಿ ಭೇಟಿ ಮಾಡಿದ ನಮಗೆಲ್ಲರಿಗೂ ಮತ್ತೊಮ್ಮೆ ಇದೀಗ ದೂರ ದೇಶದಲ್ಲಿ ಇದ್ದುಕೊಂಡೆ ಗಲ್ಫ್ ಕನ್ನಡಿಗ ಮಾದ್ಯಮದ ಮೂಲಕ ಶ್ರೀ ಕ್ಷೇತ ಧರ್ಮಸ್ಥಳ ದರ್ಶನ ಭಾಗ್ಯ ಲಭ್ಯವಾಗಿದೆ. ಅಮೂಲ್ಯ ಚಿತ್ರಸಹಿತ ಸಂದರ್ಶನ ವರದಿಗೆ ಗೋಪಿಕಾ ಮಯ್ಯ, ಜಯಪ್ರಕಾಶ್ ಕಿಣಿ ಮತ್ತು ಗಲ್ಫ್ ಕನ್ನಡಿಗ ಬಳಗಕ್ಕೆ ಧನ್ಯವಾದಗಳು.
B.G.Lakshmikanth Beskoor, Udupi
2009-02-14
It's one of the remarkable interview article/photo album of Gulf kannadiga.com. Thanks to Mr.B.G.Mohandas , Smt.Gopika mayya
Uday Kumar, Kateel
2009-02-14
It is rather a Great opportunity for the Gulf Kannadiga team to meet up with this Phenominal personality.. It is true that Great things will not fit into words but with some fine pictures !! Many thanks for the pictorial interview .. that tells all ..
ಪ.ರಾಮಚಂದ್ರ, ರಾಸ್ ಲಫ್ಫಾನ್,ಕತಾರ್
2009-02-14
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಧರ್ಮಸ್ಥಳ. ಅಲ್ಲಿನ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಷಷ್ಟ್ಯಬ್ಧಿ ಪೂರ್ತಿಯ ಸಂಕ್ರಮಣದಲ್ಲಿ ಗಲ್ಫ್ ಕನ್ನಡಿಗರ ಪರವಾಗಿ ಗೌರವಾರ್ಪಣೆ ಸಲ್ಲಿಸಿ ವಿದೇಶದ ನಮಗೆಲ್ಲ ಧರ್ಮಸ್ಥಳದ ದರ್ಶನ ಬಾಗ್ಯವನ್ನು ಒದಗಿಸಿದ ಕೊಲ್ಲಿ ಪ್ರದೇಶದ ಕರ್ನಾಟಕದ ಪ್ರತಿಬಿಂಬ - \"ಗಲ್ಫ್ ಕನ್ನಡಿಗ\" ಬಳಗಕ್ಕೆ ಧನ್ಯವಾದಗಳು.
Kiran Manjanabailu, Udupi
2009-02-14
Very good article.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಭೂಸ್ಖಲನ: ಯಾರಿಗೆ ಬೇಕು ಈ ಲೋಕ?
»ನೀವು ಎಲ್ಲೇ ಇರಿ ಹುಸೇನ್, ಕಲೆಯ ಅರಳಿಸಿ: ಕತಾರ್ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಅವರದೇ ಸ್ವತಂತ್ರ ಬಯಕೆ
»ಪವಿತ್ರ ನದಿಗಳಲ್ಲಿ ಒ೦ದಾದ ಗ೦ಗೆಯಲ್ಲಿ ಹರಿಯುತ್ತಿದೆ ಅಪವಿತ್ರ ನೀರು
»ಯಾರಿಗೆ ನ್ಯಾಯ ಸಿಕ್ಕಿದೆ ? ಹೋರಾಟದ ಕಿಡಿ ಜ್ವಾಲೆಯಾಗಬೇಕೇನೋ!
»ಕ್ರಿಕೆಟ್ ಗೂ ಯಕ್ಷಗಾನಕ್ಕೂ ಏನು ಸಂಬಂಧ ಬಲ್ಲಿರೇನಯ್ಯ...?
»ಬೆ೦ಗಳೂರಿನಿ೦ದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ
»ಅ೦ತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಾಸಾದ ಅಭಿವ್ರದ್ದಿಯ ಹೆಜ್ಜೆಗಳು
»ವೀರಪ್ಪ ಮೊಯಿಲಿ (ವ್ಯಕ್ತಿ ವಿಚಾರ)
»ಸೌ೦ದರ್ಯ ಆರಾಧಕರ ಉಪಾಸನೆಯಾದ ಮುಳ್ಳಯ್ಯನಗಿರಿ ಬೆಟ್ಟ
»ವರುಷ ನೂರು ತುಂಬಿದ ಸಂಭ್ರಮದಲ್ಲಿ...ಎಲ್ಲರ ಪ್ರೀತಿಯ ವಡ್ಲಿ ಮಾಯ್ (ಅಜ್ಜಿ ಸಿಸ್ಟರ್)
»ಚೇರ್ಕಾಡಿ ಎಂಬ ರೈತ ಸಂತ
»ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ
»ಭಟ್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ???
»ವಿದ್ಯುತ್ತಿನ ನಾಡು ಈ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಬೀಡು
»ಕಾನೂನಿನ ಹೆಸರಿನಲ್ಲಿ ಮಕ್ಕಳಿಗೆ ಅನ್ಯಾಯ
»ಮೈಸೂರು ಪ್ರವಾಸೋದ್ಯಮಬೇಕಿದೆ ಉತ್ತೇಜನ
»ಅಭಿವ್ರದ್ದಿಯ ಹೆಸರಿನಲ್ಲಿ ತನ್ನ ಮೂಲ ಸ್ಥಾನದಿ೦ದ ಕಣ್ಮರೆಯಾಗುವಳೇ ಗಂಗಾ?
»ದೇಗುಲದಲ್ಲಿ ಸೂರ್ಯ ರಶ್ಮಿ
»ಉಡುಪಿ ಪತ್ರಿಕಾರ೦ಗ ಭೀಷ್ಮ ಎ೦ದೇ ಖ್ಯಾತರಾಗಿದ್ದ ನಿಷ್ಠುರವಾದಿ ಬನ್ನಂಜೆ ರಾಮಾಚಾರ್ಯ
»‘ಸಂಸ್ಕೃತಿ ಗ್ರಾಮ’ದ ಅಪೂರ್ವ ಮ್ಯೂಸಿಯಂ
»ಹೊಯ್ಸಳರ ಶಿಲ್ಪ ಕಲಾ ವೈಭವದ ಸ೦ಕೇತ ಅಣ್ಣಿಗೇರಿಯ ಅಮೃತೇಶ್ವರ
»ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ಸ್ಥಳಗಳು
»ಮೋಡಗಳ ಅರಮನೆಯಲ್ಲಿ ಕುಂದಾದ್ರಿ ಸ್ಪೆಷಲ್
»ಗೂಗಲ್‌ನಲ್ಲೇನು ಗುಡುಗುತ್ತಿದೆ......‘ಬಝ್’ ?
»ಚಳಿಗಾಲದಲ್ಲಿ ಕೊಡಚಾದ್ರಿಯ ಸೊಬಗನ್ನು ನೋಡಲು ಬಲು ಚೆ೦ದ
»ಬೀ ಈಟರ್ ಎಂಬ ತಿನ್ನುಬಾಕ ಹಕ್ಕಿ
»ಫೇಸ್ ಬುಕ್ ಮುಸ್ಲಿಂ ವಿರೋಧಿ?
»ಉಮೇಶ ರಾವ್ ಎಕ್ಕಾರು ಎಂಬ ಮಾತಾಡುವ ಇತಿಹಾಸ
»ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು?
»ಪರಿಸರ ಪ್ರವಾಸಿ ತಾಣ ‘ಸಹಸ್ರ ಲಿಂಗ’
»ಸಾಗರಾಳದ ಕೇಬಲ್ ಸುನಾಮಿ ಅನ್ವೇಷಕ!
»ಭಾರತದ ರಾಜಕಾರಣ ಮತ್ತು ಮುಸ್ಲಿಮರ ತುಷ್ಟೀಕರಣ!
»ಕೆರೆ ಸುತ್ತ ಹಸಿರು, ಶುಭ್ರ ಆಕಾಶದಲ್ಲಿ ಕೈ ಬೀಸಿ ಕರೆಯುವ ಬಾನಾಡಿ ಇದುವೇ ಪಕ್ಷಿಗಳ ತಾಣ ರ೦ಗನತಿಟ್ಟು
»ಚೇರ್ಕಾಡಿ ರಾಮಚಂದ್ರ ರಾಯರಿಗೆ ಸ್ವಾವಲಂಬಿ ಕೃಷಿಕ ಪ್ರಶಸ್ತಿ
»ಮಹಿಳಾ ಚಳವಳಿ - ಮಹಿಳಾ ಅಧ್ಯಯನ: ಸೇತುವೆಯಾಗುವ ಯತ್ನ...
»ಮುಸ್ಲಿ೦ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿರುವ ಕೆಲವು ದೇವಾಲಯಗಳು
»ಮುಸ್ಲಿ೦ ಪಾಷಾ ಅಯ್ಯ೦ಗಾರ್‌ನ ಹ್ರದಯ ಪುರಾಣ
»ಶಿಗ್ಗಾಂವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗಾ೦ಧೀಜಿ ಕನಸಿನ ` ಸ್ವಾವಲ೦ಬಿ ಶಿಲಾಗ್ರಾಮ' ಸ್ರಷ್ಟಿ
»ದೇವಿ ಯಾನ ಅಮೃತಪಾನ : ಇದು ಚಂಡಿಕಾಂಬ ತೀರ್ಥಧಾರಾ
»ಮ೦ಜೇಶ್ವರ ಕಾಲೇಜಿನ ಟೂರ್ ಹುಡುಗರ ಉತ್ಸಾಹದಲ್ಲಿ ನಿರ್ಮಾಣವಾದ ‘ಏರುಮಾಡ’
»ಮರಳಿಗೆ ರೂಪ ನೀಡುವ ಕಲಾವಿದ ಪಟ್ನಾಯಕ್
»ಸೇವೆಯಲ್ಲಿಯೇ ಸುಖ ಕಂಡ ಜಯಮ್ಮ
»ಬ್ರಹ್ಮಪುರ: 450 ವರ್ಷಗಳ ಇತಿಹಾಸವಿರುವ ದೇಶಮುಖ ದರ್ಬಾರ್
»ವೋಟ್ ಫಾರ್ ಕಾಸರವಳ್ಳಿ; ಘಟಾನುಘಟಿಗಳು ಹುಟ್ಟುವುದೇ ಹೀಗೆ
»ಕರ್ನಾಟಕವನ್ನೇ ಅವಲ೦ಭಿಸಿ ಅಭಿವ್ರದ್ದಿ ಹೊ೦ದುತ್ತಿರುವ ಗೋವಾದಲ್ಲಿ ಕನ್ನಡಿಗರಿಗೆ ಹೊಲಸು ಜನರೆಂಬ ಬಿರುದು!
»ತಾಂತ್ರಿಕ ಪ್ರಪಂಚದ ಮಾಂತ್ರಿಕ ಈ ಮೂರ್ತಿ
»ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ.
»ದೇವರಿಲ್ಲದ ಗುಹಾಂತರ ಗುಡಿ
»ಕರ್ನಾಟಕದ ಅತೀ ಎತ್ತರದ ಬೆಟ್ಟ ಎ೦ಬ ಖ್ಯಾತಿ ಹೊ೦ದಿದ ಮುಳ್ಳಯ್ಯನ ಗಿರಿ ಬೆಟ್ಟ
»ಗಣರಾಜ್ಯೋತ್ಸವವಾದ ಇ೦ದು ಸ್ವಾತಂತ್ರ್ಯ ಹೋರಾಟಗಾರರ ಸಾವಿರದ ಕನಸುಗಳನ್ನು ನೆನೆಸೋಣ
»ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ
»ಗಾಯಕ, ಬೋಧಕ, ವಾಗ್ಗೇಯಕಾರ, ನಟ ಹಾಗೂ ಸಂಘಟಕರಾಗಿ ಸಂಗೀತ ಕ್ಷೇತ್ರದಲ್ಲಿ ಬಹು ವಿಧ ಸೇವೆ ಸಲ್ಲಿಸುತ್ತಿರುವ ನಾದ ಕಿಂಕರ ಆರ್.ಕೆ.ಪದ್ಮನಾಭ
»ವಿದೇಶದಲ್ಲಿ ದೇಸಿ ನಾದ ನುಡಿಸಿದ ಪನ್ನಾಲಾಲ್ ಘೋಷ್
»ಫಾಲ್ಕೆ ಪುರಸ್ಕೃತ ಸಿನೆಛಾಯಾಗ್ರಾಹಕ ವಿ. ಕೆ. ಮೂರ್ತಿ
»ಮೊರೊಕ್ಕೋದ ಮರ ಹತ್ತುವ ಕುರಿಗಳು
» ಭಾರತೀಯ ಚಿತ್ರರಂಗಕ್ಕೆ ಕನ್ನಡಿಗರ ಕೊಡುಗೆ
»ಬೀದರ್ : `ವಲಿ' ದರ್ಗಾದ ಗೋಡೆಗಳ ಮೇಲೆ ಅರಳಿದ ಕಾವ್ಯ ಕಲೆ
»ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ
»ಬಹು ಜನರ ಬಾಳಿಗೆ ಬೆಳಕಾದ ನಿಷ್ಠಾವಂತ ಅಧಿಕಾರಿ ಚಂದಪ್ಪ ಪಾಟೀಲ
»ಮದರಸಾಗಳ ಸುಧಾರಣೆ ಮುಸ್ಲಿಮರಿಗೇ ಒಳ್ಳೆಯದು
»ಶಿವಗಂಗೆ: ಧರ್ಮ, ಇತಿಹಾಸ, ಸಂಸ್ಕೃತಿಗಳ ಸಂಗಮ
»ಶಿರಾಡಿ ಘಟ್ಟದ ಸುಂದರಿಯರು
»ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...
»3 ಈಡಿಯಟ್ಸ್ - ನಿಜವಾಗಿಯೂ ಇದು ಒಂದು ವಾಸ್ತವ ವ್ಯಥೆ
»ಮಾಗಡಿ ಡೇಸ್ : ಮೋಡಿ ಮಾಡುವ ಕತೆಗಳಿವೆ
»ಕರಾವಳಿಗರ ಈ ಸಾಧನೆ ಕರ್ನಾಟಕಕ್ಕೇಕೆ ಪಸರಿಸಬಾರದು?
»ದೇಹ ಪ್ರೀತಿಸಿದ ವಜ್ರದೇಹಿ : ಏಕಲವ್ಯ ಪ್ರಶಸ್ತಿ ವಿಜೇತ ದಾವಣಗೆರೆಯ ಕರಿಬಸಪ್ಪ
»ಜಲಸ್ತಂಭನದ’ ವಿದ್ಯೆಯಲ್ಲಿ ಮಹಾಭಾರತದ ದುರ್ಯೋಧನನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡಿಗ ಗಿನ್ನಿಸ್ ದಾಖಲೆಯತ್ತ
»‘ಸಿತಾರ್, ಪುಸ್ತಕಗಳೇ ನನ್ನ ಸಂಗಾತಿ...’ ಶಾ೦ತಾಬಾಯಿ
»ಬದುಕಿನ ಸತ್ಯತೆ.
»ಒಂದು ಐತಿಹಾಸಿಕ ಸ್ಮಾರಕ ಎಂಬಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮಹಾಮನೆ
»ಇ೦ದಿಗೂ ತಮ್ಮ ಆಕರ್ಷನೆಯನ್ನು ಉಳಿಸಿಕೊ೦ಡಿರುವ ಸಿಹಿಮೊಗೆಯ ಧಾರ್ಮಿಕ ತಾಣಗಳು
»ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವ ವಿಖ್ಯಾತ ಜೋಗಜಲಪಾತ
»ಬಂತು ಹೊಸವರ್ಷ 2010 : ಸಡಗರಕೆ ಗ್ರಹಣದ ಮರೆ
»ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?
»ಬೆಂಗಳೂರು - ಮಂಗಳೂರು ಹಗಲು ರೈಲು : ಬಿಂದಾಸ್ ಪ್ರಯಾಣ
»ಹಟ್ಟಿ ಚಿನ್ನದ ಗಣಿಯ ಇತಿಹಾಸ
»ಬ್ರಾಹ್ಮಣರು ಉಂಡ ಎಲೆ ಹೊತ್ತರೆ ರೋಗ ವಾಸಿ!
»ಡಾ.ಡಿ.ವೀರೇ೦ದ್ರ ಹೆಗ್ಡೆಯವರ ಚೆನ್ನುಡಿ: ಮಾನವತೆಯ ೫ ಗುಣಗಳು
»ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸತ್ಯನ್
»ದೇವಪುತ್ರ ಮಾನವ ಪ್ರೇಮಿ ಏಸುಕ್ರಿಸ್ತ
»ಶರ್ಮಿಳಾ ಚಾನು : ಮಣಿಪುರದ `ಉಕ್ಕಿನ ಮಹಿಳೆ'
»ಬೆಂಗಳೂರು-ಕಾರವಾರ ಬೇಸಗೆ ರಜಾ ರೈಲಿಗೆ ಪ್ರವಾಸಿಗರ ಸುಗ್ಗಿ !
»ಚಂದ್ರಗುತ್ತಿಯ ತ್ರಿಶೂಲ ಹರಕೆ
»ಸಾವಿರಾರು ರೈತ ಕುಟು೦ಬಗಳಿಗೆ ಆಸರೆಯಾಗಿರುವ ಸೂಳೆಕೆರೆ ಎಂಬ ‘ಸಾಗರ’
»ಪರ್ವತಾರೋಹಣ ಮಾಡುವವರಿಗೆ ಸಾವನದುರ್ಗ ಒಂದು ಅದ್ಭುತವಾದ ಸ್ಥಳ
»ಕುಖ್ಯಾತ ವೀರಪ್ಪನ್ ಸ್ರಷ್ಟಿಸಿದ ತಾಣ ಈಗ ಪ್ರವಾಸಿ ತಾಣವಾಗುತ್ತಿದೆ
»ಇಂಟರ್‌ನೆಟ್ ಜಾಲಾಡುವ ವ್ಯಸನ..
»ಆರ್ಥಿಕ ಹಿಂಜರಿತಕ್ಕೆ ಹಿಂದಡಿಯಿಡದ ಪ್ರವಾಸೋದ್ಯಮ
»ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?
»ಅಬ್ಬರಿಸಿದ ಲಿಬಾರ್ಹಾನ್ - ಮಾನ ಮುಚ್ಚಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ, ಆರ್‌ಎಸ್ಸೆಸ್ಸ್
»ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..
»ಅತಿ ನವ್ಯ ರಸಕಾವ್ಯ: ಕಾಷ್ಠಶಿಲ್ಪದ ಅತ್ಯದ್ಭುತ: ಶಿರೂರು ಮಠ
»ಲವ್ ಜಿಹಾದ್-ಹೀಗೂ ಉಂಟೇ....!? ಡಬ್ಬ ಸ್ಟೋರಿಯ ಸುತ್ತ.....!
»‘ಪ್ರತಿಭೆ’ಗೆ ಬೇಕಿದೆ ವೈದ್ಯಕೀಯ ನೆರವು
»ಅತ್ಯಂತ ವಿವಾದಾಸ್ಪದ ಮತ್ತು ಜೀವಭಯ ಎದುರಿಸುತ್ತಿರುವ ಲೇಖಕಿ ತಸ್ಲಿಮಾರ ನಿಜ ಕತೆ ಇಲ್ಲಿದೆ
»ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸರ್ವತ್ರ ಮೌನ ಸಮ್ಮತಿ
»‘ಗಂಡು ಕಲೆ’ಯಲ್ಲಿ ಮಹಿಳೆ ಅಟಾಟೋಪ
»ದೀಪದಿಂದ ದೀಪ ಹಚ್ಚಿಸಿ ಸಮಾಜ ಸೇವೆಯಲ್ಲಿ ತೊಡಗಿದ ಬೆ೦ಗಳೂರಿನ ನಿವಾಸಿ
»ಅಂಗವಿಕಲರು ವಿಕಲಚೇತನರೇ?
»ಉಡುಪಿ: ಎರಡು ತಲೆ ಹಾವಿಗೆ ಬಂತು ಸಂಚಕಾರ
»ಕೊಲ್ಲೂರಿನ ಕಾನನದಲ್ಲಿ ಕೊಡಚಾದ್ರಿಯ ಕನಸುಗಳು
»ಎಂಜಲು ಎಲೆ ಮೇಲೆ ಉರುಳು ಸೇವೆ! ಧರ್ಮದ ಹೆಸರಿನಲ್ಲಿ ಇಂತಹ ಮೌಢ್ಯವೇ?
»ಅವನತಿಯತ್ತ ಕದಂಬರ ‘ವೀರಭದ್ರ’ ದೇವಸ್ಥಾನ
»ಕರುಣಾಜನಕ ಕಥೆ ಹೇಳುವ ಪುರಾತನ ಬಾವಿ
»ಬಿಜಾಪುರ: ಕಂದಮ್ಮಗಳ ಎಸೆಯುವ ಹೀಗೊಂದು ವಿಶಿಷ್ಟ ಬಗೆಯ ಹರಕೆ!
»ನೂಯಿ ಮೋಡಿ: ಪೆಪ್ಸಿಕೋದ ಪ್ರಥಮ ಮಹಿಳಾ ಸಿಇಒ ಮ೦ಗಳೂರಿನ ಸೊಸೆ
»ಬಯಲು ಮುಗಿದಿತ್ತು, ಆಲಯ ಕರೆದಿತ್ತು...
»ಈ ಪರಿಷತ್ ಚುನಾವಣೆ ನಡೆಯೋದ್ಹೇಗೆ ಗೊತ್ತಾ?; ಈ ರಾಜಕೀಯ ರಣಕಣದ ಗಣಿತ ಲೆಕ್ಕಾಚಾರ ಇಲ್ಲಿದೆ
»ವಿಶೇಷ ಮಕ್ಕಳಿಗಾಗಿ ‘ವೀಣಾ ಅರ್ಪಣ್’
»ವಿಶ್ವದಾಖಲೆ ಯತ್ನ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಹಿ ಮತ್ತು ಸಂದೇಶ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ
»ಮುಸ್ಲಿಂ ವಸತಿ ಶಾಲೆಯ ಮುಗಿಯದ ಗೋಳು: ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೈರು; ಮುಖ್ಯ ಶಿಕ್ಷಕಿಯ ಅಮಾನತಿಗೆ ಆಗ್ರಹ
»ಬಾಬಾ ಬುಡಾನ್‌ಗಿರಿ ವಿವಾದ: ಮತ್ತೊಮ್ಮೆ ನ್ಯಾಯಾಂಗ ನಿಂದನೆ?
»ವಾಟಾಳ್ ‘ಗರುಡ’ ಹಾರುತ್ತಿದೆ
»ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..
»ಬೇರುಗಳಿಲ್ಲದ ಅರ್ಥವ್ಯವಸ್ಥೆ
»ಚಿತ್ರಬೇಟೆಗೆ ಪ್ರಶಸ್ತಿಯ ಕಿರೀಟ
»ಅಂಗವಿಕಲತೆ ಮೆಟ್ಟಿನಿಂತ ವ್ಯಂಗ್ಯಚಿತ್ರ ಕಲಾವಿದ ರಮೇಶ್
»ಮಳ್ಳ ಮಳ್ಳಿ ತರಹ ಗಡಿಯೊಳಗೆ ನುಸುಳಿ ಇನ್ನೊಂದು ದೇಶಕ್ಕೆ ನುಗ್ಗುವುದು ಮಹಾಪರಾಧ
»ನೌಕಾಪಡೆ ಮುಕುಟಕ್ಕೆ ಮಹಿಳಾ ‘ಗರಿ’
»ಪ್ರೇಮ ವಂಚನೆಯ ಕುರಿತು ಡಾ.ಜಗದೀಶ್ ಅವರೊ೦ದಿಗೆ ಸ೦ದರ್ಶನ
»ತ್ಯಾಗ-ಬಲಿದಾನಗಳ ಬಕ್ರೀದ್
»ಧಾರ್ಮಿಕ ಪ್ರವಾಸಿ ತಾಣಗಳ ನೆಲೆ ಈ ತುಮಕೂರು ಜಿಲ್ಲೆ
»ನಿಮ್ಮ ಬೇಸರ ಕಳೆದುಕೊಳ್ಳಲು, ನಿಸರ್ಗದ ಮಡಿಲಿನಲ್ಲಿ ಮಗುವಿನಂತೆ ಮೈ ಮರೆಯಲು ಬನ್ನಿ ಶಿರಲೆ ಫಾಲ್ಸ್‌ಗೇ.
»ಪರಿಸರ ಪ್ರೇಮಿಗಳಿಗೆ ಇಷ್ಟವಾಘುವ೦ತಹ ಸ್ಥಳ ಅಯ್ಯನಕೆರೆ, ಆಹಾ ಓಹೋ ಇದೇನು ನಡೆ!
»ಗ್ರಾಮೀಣ ಕಾಲೇಜಿಗೂ ಬಂತೂ ಆನ್‌ಲೈನ್ ಪರೀಕ್ಷೆ
»ಯಾಕಿಂಗಾಡ್ತಾರೋ ಈ ಹುಡುಗಿರು...
»ಉತ್ತರ ಕನ್ನಡದ ನೆರೆ-ಪೀಡಿತ ಪ್ರದೇಶಗಳನ್ನು, ಖಾಯಂ ನಿರಾಶ್ರಿತರ ಜಿಲ್ಲೆ ಎಂದು ಘೋಷಿಸಲಿ
»ಹುಲಿ, ಹುಲ್ಲು , ಇಲಿ, ಗೆದ್ದಲು, ಕೋಲ... ಇವರೊಳಗೂ ಇಂತಿಂಥ ಸಂಬಂಧವಯ್ಯ
»ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!!
»ಸಾಧನೆಯ ಹಾದಿಯಲ್ಲಿ....ಮು೦ದುವರಿದ ಮಹಿಳೆಯರು
»ಉಡುಪಿ: ಹೊಲ, ಹುಲ್ಲು, ಹುಲಿ, ಹೊಳೆಗೆ ಎಂಥ ವೈಜ್ಞಾನಿಕ ಸಂಬಂಧವಿರಬಹುದು? ಇದೂ ಒಂದು ವಿಜ್ಞಾನವಾದೀತೆ?
»ಬಂತೆ ಕನ್ನಡಕ್ಕೆ ಗಂಡಾಂತರ?: ಅಮೇರಿಕಾದ ಕನ್ನಡ ವಿದ್ವಾ೦ಸರೊಬ್ಬರ ಅಭಿಪ್ರಾಯ
»ಪ್ರವಾಸಕ್ಕೂ- ಭಕ್ತಿಗೂ- ಪೂಜೆ ಪುನಸ್ಕಾರಕ್ಕೂ ಹೇಳಿ ಮಾಡಿಸಿದ ತಾಣ ಮುಡುಕುತೊರೆ!
»ಕಾರವಾರ: ಕಪ್ಪು ಮರಳು ಇರುವ ಸಮುದ್ರ ತೀರ...
»ಪೋಗೋ ಕಿಡ್ಸ್ ಪಟ್ಟಿಯಲ್ಲಿ ಬೆ೦ಗಳೂರಿನ ಸೋಹನ್
»ಅನಾಥವಾಗಿರುವ ಉಗ್ರರ ದಾಳಿಗೆ ಬಲಿಯಾದ ಬಿ‌ಎಸ್‌ಎಫ್ ಯೋಧನ ಮಕ್ಕಳು
»ಸೇನೆಯಲ್ಲಿ ಮಹಿಳಾ ಯುಗ: ಗಡಿ ಕಾವಲಿಗೆ ನೀರೆಯರು
»ಒಮ್ಮೆ ನೋಡಬನ್ನಿ ನಮ್ಮೂರ: ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್
»ಕಾಯಕಲ್ಪಕ್ಕೆ ಕಾದಿರುವ ಕಿತ್ತೂರು ಕೋಟೆ
»ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಸೇವಕ ತೂಂಬ್ ಹಮೀದ್ ಇವರ ಮನೆಯೇ ಒ೦ದು ‘ಮ್ಯೂಸಿಯಂ’
»ತಲಕಾಡು ಜಲಧಾಮಕ್ಕೆ ಬನ್ನಿ ಮಸ್ತ್ ಮಜಾ ಮಾಡಿ...
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಮುಂಬೈ: ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ
»ಬೆಡಗಿನ ನರ್ತನ: ಮಧುರ ಗಾಯನ
»ವಂದೇಮಾತರಂ ಕೋಮುವಾದ ಗೀತೆಯೆ?
»ಯಾವ ಹಸಿವು ದೊಡ್ಡದು?
»ಕಾಲಿನಿಂದ ಚಿತ್ರ ಬಿಡಿಸುವ ‘ಜ್ಯೋತಿ’
»ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.
»ಮೂವರಿಗೊಂದು ಜಾನುವಾರು.. ಹಾಲಿನ ಕೊರತೆ.. ಗೋ ಯಾತ್ರೆ
»ಆನಂದೋಬ್ರಹ್ಮ: ಅಭಯಾರಣ್ಯದಲ್ಲಿ ಭಯವಿಲ್ಲ
»ಹುಟ್ಟುತ್ತಿದೆ ‘ಪ್ರಯೋಗಾಲಯದ ಕೂಸು’!
»ಮುಖ್ಯಮಂತ್ರಿಗಳೆ ಏಕೆ ಅಳುತ್ತೀರಿ ?
»ಬಿಜೆಪಿ ಸರಕಾರದ 'ಕ್ಲಿಯೋಪಾತ್ರ' ಶೋಭಾ!
»ಪತ್ರಕರ್ತ ಎಂಜಲು ಕಾಸಿಯ ಆಸ್ತಿ ವಿವರ...
»ಕರ್ನಾಟಕದಲ್ಲಿ ವ್ಯಾಪಕವಾಗುತ್ತಿರುವ ಶಿಶು ಮರಣ
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಪ್ರವಾಸಿಗಳ ಸ್ವರ್ಗವಾಗಿದೆ ನಮ್ಮೀ ಉಡುಪಿ ಜಿಲ್ಲೆ
»ಬಾಗಲಕೋಟೆ: ಗುಳೇದಗುಡ್ಡದಲ್ಲಿ ಜಲಪಾತದ ವೈಭವ!
»ಕರ್ಕರೆಯನ್ನು ಯಾರು ಕೊ೦ದರು?
»ವಿಶ್ವದ ಅತಿದೊಡ್ಡ ನೈಸರ್ಗಿಕ ಕಡಲದಂಡೆ
»ಸಹ್ಯಾದ್ರಿ ನೆತ್ತಿ ಮೇಲೆ ಶಿವಭಕ್ತಿ
»ಅ೦ಗವಿಕಲತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎ೦ದು ತೋರಿಸಿಕೊಟ್ಟ ಕೆಲ ವ್ಯಕ್ತಿಗಳ ಪರಿಚಯ
»ಸಾಮಾಜಿಕ ಸಬಲೀಕರಣದ ಕೊರತೆ ಇನ್ನೂ ಇದೆ
»`ಲವ್ ಜಿಹಾದ್' ವದಂತಿಗೆ ಸಾಕ್ಷಿ ಸಮೇತ ತೆರೆ ಎಳೆದ ದ.ಕ.ಜಿಲ್ಲಾ ಪೊಲೀಸರು
»ಬೈ೦ದೂರು: ಕರಾವಳಿ ಭತ್ತದ ಗದ್ದೆಯಲ್ಲಿ ಕಟಾವು ಯಂತ್ರ ಕಲರವ
»ಮಲೆನಾಡಿನಲ್ಲೊ೦ದು ಗಾಂಜಾ ಬೆಳೆ ಮಾಫಿಯಾ ಜಾಲ !
»ಒಣಗಿದ ಬೇರು,ಬೊಡ್ಡೆಗೆ ‘ಜೀವ’ ತರಿಸಿದ ಕಲಾಕಾರ
»ಕಾರವಾರ: ರೈಲು ಸೇವೆ ಬೇಕೆಂದರೆ ಹೋರಾಟ ನಡೆಸಲೇಬೇಕು !
»ಮಾಲೆಗಾ೦ವ್ ಸ್ಪೋಟದ ನ೦ತರ ಈಗ ಗೋವಾ ಸ್ಪೋಟ : ಗೋಮುಖ ವ್ಯಾಘ್ರಗಳ ನಿಜಮುಖ ಬಯಲಾಗಲಿ
»ಚುನಾವಣೆಗಳು ಜನತೆಗೆ ಕೊಟ್ಟದ್ದೇನು?
»ಮಂತ್ರಾಲಯ ಪುನರುತ್ಥಾನ ದೊಡ್ಡ ಸವಾಲು
»ಕರಾವಳಿಯಲ್ಲಿ ಮರೆಯಾಗುತ್ತಿರುವ ಸಾ೦ಪ್ರದಾಯಿಕ ದೀಪಾವಳಿ
»ಹಿ೦ದು-ಮುಸ್ಲಿ೦ ಭಾಯಿ ಭಾಯಿ
»ಓ, ಬಲೀಂದ್ರ... ‘ಪೊಲಿ’ ಕೊರ್ಲ
»ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು 'ತೀರ್ಥೋದ್ಭವ'; ನಿಶ್ಚಿತಗಳಿಗೆ ಕನ್ಯಾ ಲಗ್ನದಲ್ಲಿ ಕಾವೇರಿ ಮಾತೆಯು ಜಲರೂಪದಲ್ಲಿ ನೀಡುವ ದರ್ಶನ
»ಶ್ರೀನಿವಾಸ ಸಾಗರ ಮಹಿಮೆ
»ಗುಡ್ಡದ ಮೇಲೆ ಗೊಮ್ಮಟ: ಕಣ್ಣಲ್ಲೂ ನೀರೇನೇ...ಮಣ್ಣಲ್ಲೂ ನೀರೇನೇ...
»ಬಿ‌ಎಸ್‌ಎಫ್‌ನಲ್ಲಿ ಮಹಿಳಾ ಮನ್ವಂತರ
»ಬ೦ದಿದೆ ಸ೦ತಸ ಸಡಗರದ ದೀಪಾವಳಿ ಹಬ್ಬ
»ಸ೦ಗೀತ ಲೋಕದ ಹಿರಿಯಜ್ಜ : ಮನ್ನಾ ಡೇ
»ಗಳಿಕೆಯೊಂದಿಗೆ ಕಲಿಕೆಗೊಂದು ಸುವರ್ಣಾವಕಾಶ....
»ಹಾಲಕ್ಕಿಗಳು ಪರಿಶಿಷ್ಟ ಪಂಗಡಕ್ಕೆ-ಏಳು ಸೀಮೆಗೆ ಗೌರವ
»ಬೆಂಗಳೂರಿನ ಕೇಂದ್ರ ಕಾರಾಗೃಹದ ನೆನಪಿನಲ್ಲಿ ಸ್ವಾತಂತ್ರ ಉದ್ಯಾನವನ
»ಜನ ಕೊಟ್ಟ ದುಡ್ಡು ಲೂಟಿಯಾದೀತು ಎಚ್ಚರ!
»ಇದು ಅಸಂಸ್ಕೃತಿಯ ಅಣಕ ಮಾಡಿದಂತೆಯೇ....
»ಸಬಲೀಕರಣದ ಹಾದಿಯಲ್ಲಿ ಮಹಿಳಾ ಸಾಕ್ಷರತಾ ಕಾರ್ಯಕ್ರಮ
»ಗಾಂಧೀಜಿಗೇಕೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ?
»2012 ಡಿಸೆ೦ಬರ್ 21ರ೦ದು ರುದ್ರ ಭಯ೦ಕರವಾದ ಪ್ರಳಯ!
»ಚಂದ್ರನಲ್ಲಿ ತೀರ್ಥೋದ್ಭವ; ನಾಸಾದಲ್ಲಿ ಹರ್ಷೋದ್ಭವ
»2 ಲಕ್ಷ ಸಾರಿಗೆ ವಾಹನಗಳಿದ್ದರೂ-ಮಾಲಕರಿಗೆ ಲಾಭ ಇಲ್ಲ, ಜನರಿಗೆ ಸುಖ ಇಲ್ಲ !
»ರೈಲು ಪ್ರಯಾಣಕ್ಕೆ ಹೆಸರಾದ ದೂಧ್‌ಸಾಗರ್
»ಮಡಿಕೇರಿ ದಸರಾ ಎಷ್ಟೊಂದು ಸುಂದರ!
»ಮಡಿಕೇರಿಯ ದೊಡ್ಡಪಾರೆ ಜಲಪಾತ ನೋಡಲು ಎಷ್ಟು ಚೆ೦ದ!
»ವಿಶ್ವದೆಲ್ಲೆಡೆ ಗಾ೦ಧಿ ನೆನಪಿನಲ್ಲಿ ಅಂಚೆ ಚೀಟಿ ಬಿಡುಗಡೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri