ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ |
ಪ್ರಕಟಿಸಿದ ದಿನಾಂಕ : 2010-07-29
ಮಂಚಗಲ್ಕುಪ್ಪೆ, (ತುಮಕೂರು): ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂಬ ತಮ್ಮ ನಿರ್ಧಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅದಿರು ರಫ್ತು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಗಣಿಧಣಿಗಳಾದ ರೆಡ್ಡಿ ಬ್ರದರ್ಸ್ಗೆ ಲಾಭವೇ ಹೊರತು ರಾಜ್ಯ ಸಂಪತ್ತು ಲೂಟಿ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು ಇಲ್ಲವೇ ಮುಖ್ಯಮಂತ್ರಿ ಸ್ಥಾನದಿಂದ ತೊಲಗಬೇಕು ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಬುಧವಾರ ಇಲ್ಲಿನ ಎಚ್ಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ಒಪ್ಪಿಸುವವರೆಗೂ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಾದಯಾತ್ರೆಗೆ ಹೆದರಿ ಬಿಜೆಪಿ ಮಂದಿಗೆ ಮೂತ್ರ ಬರುವಂತಾಗಿದೆ ಗುಡುಗಿದರು.
ಯಡಿಯೂರಪ್ಪ ಕರ್ನಾಟಕ ಕಂಡ ಅತ್ಯಂತ ದುರ್ಬಲ ರಾಜಕಾರಣಿ. ಸಿಬಿಐ ತನಿಖೆಗೆ ಅಕ್ರಮ ಗಣಿಗಾರಿಕೆಯನ್ನು ಒಪ್ಪಿಸಿದರೆ ಯಡಿಯೂರಪ್ಪ ಮತ್ತವರ ಸಂಪುಟದ ಆನೇಕ ಮಂತ್ರಿಗಳು ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ (ಜೈಲಿಗೆ) ಹೋಗುವುದು ಖಚಿತ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಸಚಿವ ಶ್ರೀರಾಮುಲು ಜೈಲಿಗೆ ಹೋಗುವ ಸಾಧ್ಯತೆಗಳು ಇರುವುದರಿಂದ ಬೆಂಗಳೂರು ಜೈಲಿಗೆ ಮುಂಚಿತವಾಗಿ ಹೋಗಿ ಭೇಟಿ ಮಾಡಿ, ಅಲ್ಲಿ ವಾತಾವರಣವನ್ನು ವೀಕ್ಷಣೆ ಮಾಡಿ ಬಂದಿದ್ದಾರೆ. ಕಾಂಗ್ರೆಸ್ ಮುಖಂಡರ ಆಸ್ತಿಪಾಸ್ತಿ ಬಗ್ಗೆಯೂ ತನಿಖೆ ಮಾಡಲಿ, ಬಿಜೆಪಿ ಮಂತ್ರಿ ಮಹೋದಯರ ಆಸ್ತಿಪಾಸ್ತಿಯ ಬಗ್ಗೆ ತನಿಖೆ ನಡೆಸಲಿ. ಅಪರಾಧಿ ಸ್ಥಾನದಲ್ಲಿ ಇರುವ ಯಡಿಯೂರಪ್ಪನವರಿಗೆ ತನಿಖೆಗಳನ್ನು ಎದುರಿಸುವ ನೈತಿಕ ಸ್ಥೈರ್ಯವೇ ಇಲ್ಲ.
ಲೋಕಾಯುಕ್ತರಿಗೆ ಮುಖ್ಯಮಂತ್ರಿ, ಮಂತ್ರಿ ಮತ್ತು ಶಾಸಕರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ನೀಡದೇ, ಪ್ರಯೋಜನಕ್ಕೆ ಬಾರದ ಪರಮಾಧಿಕಾರ ನೀಡಲಾಗಿದೆ ಎಂದು ಟೀಕಿಸಿದರು.

ರಫ್ತು ನಿಷೇಧದಿಂದ ರೆಡ್ಡಿ ಬ್ರದರ್ಸ್ಗೆ ಲಾಭ: ರಾಜ್ಯದ ಕೆಲ ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ನಿಷೇಧ ಮಾಡಿರುವುದರಿಂದ ಗಣಿಧಣಿಗಳಾದ ಜನಾರ್ದನರೆಡ್ಡಿ ಮತ್ತು ಸಹೋದರರಿಗೆ ಲಾಭ. ಇದನ್ನು ಮರೆಮಾಚಲು ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದರ ಹಿಂದೆ ರಾಜ್ಯ ಸಂಪತ್ತನ್ನು ಉಳಿಸುವ ಕಾಳಜಿ ನಯಾಪೈಸೆದಷ್ಟೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳ್ಳ ವ್ಯಾಪಾರಿಗಳು: ಸಚಿವರಾದ ಕರುಣಕರೆಡ್ಡಿ, ಜನಾರ್ದನರೆಡ್ಡಿ, ಶ್ರೀರಾಮುಲು ಅವರು ಕಳ್ಳ ವ್ಯಾಪಾರಿಗಳು, ಲೂಟಿಕೋರರು. ಅವರಿಗೆ ಸತ್ಯಾಗ್ರಹ, ಹೋರಾಟ ಮಾಡಿ ಗೊತ್ತಿಲ್ಲ. ಗಾಂಧೀಜಿ, ಅಂಬೇಡ್ಕರ್ ಅವರಂತೂ ಗೊತ್ತೆ ಇಲ್ಲ. ದೇಶದ ಇತಿಹಾಸವೂ ತಿಳಿದಿಲ್ಲ. ಮೂಲತಃ ಅವರು ರಾಜಕಾರಣಿಗಳೇ ಅಲ್ಲ. ಅಂಥವರಿಗೆ ತಾವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಟೀಕೆ ಮಾಡುವ ನೈತಕತೆ ಇಲ್ಲ.
ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ಕಬ್ಬಿಣ ತಿನ್ನಲಿಕ್ಕೆ ಅಲ್ಲ. ಬಳ್ಳಾರಿ ಅಭಿವೃದ್ಧಿ ಸಹಿಸದೇ ವಿರೋಧಪಕ್ಷಗಳು ಟೀಕೆ ಮಾಡುತ್ತಿವೆ ಎಂಬುದು ನಗೆಪಾಟಲಿನ ಸಂಗತಿ. ಸರ್ಕಾರದ ಹಂಗಿ ಲ್ಲದೇ 50 ಸಾವಿರ ಮನೆಗಳನ್ನು ನೆರೆಸಂತ್ರಸ್ತರಿಗೆ ಕಟ್ಟಿಸಿ ಕೊಡಲಾಗುವುದು ಎಂದು ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿಯವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ. ಇದು ಬಳ್ಳಾರಿ ಅಭಿವೃದ್ಧಿಯೇ ? ಎಂದು ಪ್ರಶ್ನಿಸಿದರು.
ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೂ ಪಾದಯಾತ್ರೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಸಿಬಿಐಗೆ ಒಪ್ಪಿಸಿ ಬಿಜೆಪಿ ಗಿರಾಕಿಗಳು ಪಾದಯಾತ್ರೆಯನ್ನಾದರೂ ಮಾಡಲಿ, ತಿರುಪತಿ ಯಾತ್ರೆಯನ್ನಾದರೂ ಮಾಡಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದರು.
ಗಾಂಧಿ ಭಜನೆ ಮಾಡಿರಲಿಲ್ಲವೇ?
ಪಾದಯಾತ್ರೆ ವೇಳೆ ಡೊಳ್ಳು ಕುಣಿತ, ವೀರಭದ್ರೇಶ್ವರನ ಕುಣಿತ, ತಮಟೆ ಮತ್ತು ಲಾವಣಿ ಪದ ಗಳನ್ನು ಹಾಡಿದ ಬಗ್ಗೆ ಬಿಜೆಪಿ ಟೀಕಿಸಿದ ಬಗ್ಗೆ ಸಿದ್ದು ಪ್ರತಿಕ್ರಿಯಿಸಿದ್ದು ಹೀಗೆ.
ಡೊಳ್ಳು ಕುಣಿತ, ಲಾವಣಿ ಮತ್ತಿತರ ಜಾನಪದ ಪ್ರಾಕಾರಗಳು ಗ್ರಾಮೀಣ ಸಂಸ್ಕೃತಿಯ ಅವಿ ಭಾಜ್ಯ ಅಂಗ. ಪಾದಯಾತ್ರೆ ವೇಳೆ ಗ್ರಾಮೀಣ ಜನರು ನೃತ್ಯ, ಹಾಡುಗಳನ್ನು ಹಾಡಿದಾಗ, ಅವರ ಭಾವನೆಗಳಿಗೆ ಸ್ಪಂದಿಸಲು ಅವರೊಡನೆ ಹೆಜ್ಜೆ ಹಾಕಲಾಯಿತು. ಅದನ್ನು ತಪ್ಪು ಎನ್ನುವ ಬಿಜೆಪಿ ಮಂದಿಗೆ ಗ್ರಾಮೀಣ, ಕಲೆ ಮತ್ತು ಸಂಸ್ಕೃತಿ ಗೊತ್ತಿಲ್ಲ. ನಮ್ಮದು ರೆಸಾರ್ಟ್ ಸಂಸ್ಕೃತಿಯಲ್ಲ. ಜಾನಪದ ಸಂಸ್ಕೃತಿ. ಅದು ಅಶ್ಲೀಲವಲ್ಲ.
ಮಹಾತ್ಮಾಗಾಂಧೀಜಿ ಅವರು ಚಳವಳಿ ಮಾಡುತ್ತಿದ್ದ ವೇಳೆ ಭಜನೆ ಮಾಡುತ್ತಿದ್ದರು. ಅದು ಅಸಂಸ್ಕೃತಿಯೇ. ಬಿಜೆಪಿ ಮುಖಂಡರು ಗ್ರಾಮೀಣ ಸಂಸ್ಕೃತಿಯ ಬಗ್ಗೆ ಟೀಕೆ ಮಾಡುವ ಮೂಲಕ ಗ್ರಾಮೀಣ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಉತ್ಸಾಹದ ನಡಿಗೆ, ಅಡ್ಡಿಯಾಗದ ಮಳೆ



ಬೆಂಗಳೂರು, ಜು. 28: ಅಡ್ಡಿಯಾಗಬೇಕಿದ್ದ ಮಳೆ ಉತ್ಸಾಹ ತಂದಿತು, ಜಾನಪದ ಕಲಾತಂಡಗಳು ನಡಿಗೆಗೆ ಉತ್ಸಾಹ ತುಂಬಿದವು, ಧಣಿದ ಕಾರ್ಯಕರ್ತರಿಂದ ಊಟಕ್ಕೆ ಪರದಾಟ...,
ನಾಲ್ಕು ದಿನಗಳ ಹಿಂದೆ ಬಳ್ಳಾರಿಯತ್ತ ಮುಖಮಾಡಿ ಹೊರಟು 70 ಕಿ.ಮೀ. ಕ್ರಮಿಸಿ ತುಮಕೂರು ಸೇರಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಇಂದು ಹಲವು ವಿಶೇಷಗಳಿದ್ದವು. ಮಂಗಳಮುಖೀಯರು ಮೂದಲ ಬಾರಿಗೆ ಪಾದಯಾತ್ರೆಯಲ್ಲಿ ಎಂಟ್ರಿ ಪಡೆದು, ಭಾಗಿಯಾದರು. ಪಾದಯಾತ್ರೆಗೆ ಸಾಥ್ ನೀಡುವ ಜವಾಬ್ದಾರಿ ಇಂದು ಮಂಡ್ಯ ಮತ್ತು ರಾಮನಗರ ಜಿಲ್ಲಾ ಕಾಂಗ್ರೆಸ್ಗಳ ಹೆಗಲೇರಿತ್ತು . ನಿರೀಕ್ಷೆಗೂ ಮೀರಿ ಈ ಎರಡು ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.
ಬಿಜೆಪಿ ನಾಯಕರು ಹಾಗೂ ಸಚಿವರ ಮೂದಲಿಕೆಗೂ ಅಂಜದೆ, ಇಂದೂ ಕಾಂಗ್ರೆಸ್ ನಾಯಕರು ಜಾನಪದ ತಂಡಗಳೊಂದಿಗೆ ಹಾಡಿ ಕುಣಿದರು. ದೇವರ ಹೊಸಳ್ಳಿಯಲ್ಲಿ ಸಿದ್ದರಾಮಯ್ಯ ಅವರು ನಂದಿ ಧ್ವಜವನ್ನು ತಲೆಮೇಲೆ ಒತ್ತುಕೊಂಡು ಕುಣಿದರು.
ರೇನ್ಕೋಟ್ ಧರಿಸಿಯೇ ನಟಿಯೂ ಆದ ಉಮಾಶ್ರೀ ಮಾರ್ಗದುದ್ದಕ್ಕೂ ಪಾದಯಾತ್ರೆಯ 'ಸ್ಟಾರ್ ಕ್ಯಾಂಪೈನರ್' ಆಗಿದ್ದರು.
ಉತ್ಸಾಹದೊಂದಿಗೆ ದಾಬಸ್ಪೇಟೆಯಿಂದ ಯಾತ್ರೆ ಮುಂದುವರಿಸಿದ ಪಾದಯಾತ್ರೆಯೊಂದಿಗೆ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಸ್ಥಳೀಯ ಕಲಾವಿದರೊಂದಿಗೆ ಭಾಗಿಯಾದರು. ಡೊಳ್ಳು ಕುಣಿತದ ಅಬ್ಬರ ಮಳೆಯ ಅಬ್ಬರಕ್ಕೆ ಸವಾಲ್ ಹಾಕಿತ್ತು . ನಾಲ್ಕು ದಿನಗಳ ನಡಿಗೆಯ ನೋವಿನ ನಡುವೆಯೂ ತಮಟೆ ಸದ್ದಿಗೆ ನಾಯಕರ ಕಾಲು ತಾವಾಗಿಯೇ ಕುಣಿಯುತ್ತಿದ್ದವು. ಮಾರ್ಗಮಧ್ಯೆ ಸಿದ್ದರಾಮಯ್ಯ ಎರಡೆರಡು ಬಾರಿ ಷೂ ಬದಲಿಸಿದರು.
ಮಾರ್ಗಮಧ್ಯೆ ಕಾಮತ್ ಹೋಟೆಲ್ನವರು ಪಾದಯಾತ್ರಿಗಳಿಗೆ ಉಚಿತವಾಗಿ ತಿಂಡಿ, ಕಾಫಿ, ಹಣ್ಣಿನ ರಸಗಳನ್ನು ವಿತರಿಸಿದರು. ನಡಿಗೆ ಗ್ರಾಮಗಳನ್ನು ತಲುಪುತ್ತಿದ್ದಂತೆ ಮಹಿಳೆಯರು ನಾಯಕರಿಗೆ ಎದುರಾಗಿ ಆರತಿ ಎತ್ತಿದ್ದರು. ದಾಬಸ್ಪೇಟೆಯಿಂದ ಹಿರೇಹಳ್ಳಿ ವರೆಗೆ ಅಬ್ಬರದ ಮಳೆಯಲ್ಲೇ ನಡಿಗೆ ಸಾಗಿತು. ಕಾರ್ಯಕರ್ತರು ಸ್ವಲ್ಪಮಟ್ಟಿಗೆ ಚದುರಿದರೂ, ಕೋಟು ಧರಿಸಿದ ನಾಯಕರು ಮುಂದುವರಿದರು.
ಸತತ ನಾಲ್ಕನೇ ದಿನದ ನಡಿಗೆಯಿಂದ ಬಳಲಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರೂ ಕಾಲುನೋವಿನಿಂದ ಕುಂಟುತ್ತಲೇ ಸಾಗಿದರು. ಡಿ.ಕೆ. ಶಿವಕುಮಾರ್ ಕಣ್ಣುಗಳು ಕೆಂಪಗಾಗಿ ಜ್ವರದಲ್ಲಿದ್ದರು. ಆದರೆ, ಕಾರ್ಯಕರ್ತರ ಉತ್ಸಾಹ ನಾಯಕರಲ್ಲಿ ಆತ್ಮವಿತ್ವಾಸವನ್ನು ಹೆಚ್ಚಿಸಿತ್ತು .
ಇಂದು ದಿನವಿಡೀ ಮಂಗಳಮುಖೀಯರ ತಂಡ ಪಾದಯಾತ್ರೆ ಜತೆಗಿತ್ತು . ಮೋಟಮ್ಮ ಅವರು ತಮ್ಮದೇ ಮಹಿಳೆಯರ ತಂಡದೊಂದಿಗೆ ದಿಟ್ಟ ಹೆಜ್ಜೆ ಇಡುತ್ತಾ ಮುನ್ನಡೆಯುತ್ತಿದ್ದರು. ಉಮಾಶ್ರೀ ಅವರಂತೂ ಕುಣಿದು ಕುಪ್ಪಳಿಸುತ್ತಾ , ಸಾರ್ವಜನಿಕರತ್ತ ಕೈಬೀಸುತ್ತಾ ಗಮನ ಸೆಳೆಯುತ್ತಿದ್ದರು. ಪಂಚೆ, ಶರ್ಟಿಗೆ ಮೂರೆ ಹೋಗಿರುವ ಉಗ್ರಪ್ಪ ಅವರು, ಸಾಮಾನ್ಯ ಹಳ್ಳಿಗರಂತೆ ಪಂಚೆ ಮೇಲೆತ್ತಿ ಕಟ್ಟಿಕೊಂಡು ಉತ್ಸಾಹಭರಿತರಾಗಿ ಹೆಜ್ಜೆ ಹಾಕುತ್ತಿದ್ದರು.
ನಡಿಗೆಯ ಮಾರ್ಗದರ್ಶನದ ಜವಾಬ್ದಾರಿ ಹೊತ್ತಿದ್ದ ಎಚ್.ಎಂ. ರೇವಣ್ಣ ಅವರು, ಮಹಿಳೆಯರೂ ಮಳೆಯಲ್ಲೇ ನಡೆಯುತ್ತಿದ್ದಾರೆ. ಗಂಡಸರೆಲ್ಲಾ ಬನ್ನಿ ಎಂದು ಮಳೆಯಿಂದ ಪೆಟ್ರೋಲ್ ಬಂಕ್, ಅಂಗಡಿ ಮಳಿಗೆಗಳಡಿ ಆಶ್ರಯ ಪಡೆದಿದ್ದ ಜನರನ್ನು ಉತ್ತೇಜಿಸುತ್ತಿ ದ್ದರು. ಮಳೆಯಲ್ಲೇ ಯುವ ಕಾಂಗ್ರೆಸ್ಸಿಗರು ಬೈಕ್ ರಾಯಲಿಯನ್ನೂ ನಡೆಸಿದರು. ಎಚ್.ಕೆ. ಪಾಟೀಲ್, ಬಿ.ಎಲ್. ಶಂಕರ್ ಅವರಂತಹ ಕೆಲವು ನಾಯಕರು ಇಂದು ಪಾದಯಾತ್ರೆಗೆ ಗೈರುಹಾಜರಾದರು.
ಊಟಕ್ಕೆ ಪರದಾಟ:
ಪಾದಯಾತ್ರೆ ಆರಂಭದ ದಿನದಿಂದಲೂ ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿತ್ತು . ಆದರೆ, ಇಂದು ಮಧ್ಯಾಹ್ನ ಲೋಪ ವಾಯಿತು. ಮಳೆಯಲ್ಲಿ ನೆನೆದು ಹಸಿವಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರು ಸಮರ್ಪಕವಾಗಿ ಊಟ ಸಿಗದೆ ಪರದಾಡಿದರು. ನಿಗದಿಗಿಂತ ಎರಡು ತಾಸು ವಿಳಂಬವಾಗಿ ಯಾತ್ರೆ ಎಚ್ಎಂಎಸ್ ಕಾಲೇಜು ತಲುಪಿತು. ಮಾಜಿ ಶಾಸಕ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಫಿ ಅಹ್ಮದ್ ಅವರಿಗೆ ಸೇರಿದ ಈ ಕಾಲೇಜಿನಲ್ಲಿ ಊಟದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದರು.


ರೆಡ್ಡಿಗಳ ಉದ್ಧಟತನಕ್ಕೆ ಇದು ಉತ್ತರ
ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದ ರಾಮಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.
ತುಮಕೂರು: ಗಡುಸು ಧ್ವನಿ, ಒರಟು ನಡೆ, ನೇರ ನುಡಿ. ಇಂದಿನ ‘ಸೊಫೆಸ್ಟಿಕೇಷನ್’ ರಾಜಕಾರಣ ದಿಂದ ಗಾವುದ ದೂರವಿರುವ ವ್ಯಕ್ತಿತ್ವ. ಮೇಲು ನೋಟಕ್ಕೆ ಹುಂಬ ಹಳ್ಳಿಗನಂತೆ ಕಾಣುವ ಆದರೆ ಮಾತಿಗೆ ನಿಂತರೆ ಯಾವುದೇ ವಿಷಯದ ಬಗ್ಗೆ ಅಂಥೆಟಿಕ್ ಎನಿಸುವಂತೆ ಮಾತನಾಡುವ ಸಾಮ ರ್ಥ್ಯವಿರುವ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ತಕ್ಷಣ ದೊರೆಯುವ ಉತ್ತರ ಸಿದ್ದರಾಮಯ್ಯ.
ಒರಟು ರಾಜಕಾರಣಿ ಎಂದೇ ಗುರುತಿಸಲಾಗುವ ಸಿದ್ದರಾಮಯ್ಯ, ಅವರ ಆಪ್ತ ಗೆಳೆಯ ಸಿ.ಎಂ. ಇಬ್ರಾಹಿಂ ಅವರ ಪ್ರಕಾರ ಸಿದ್ದು ‘ಹೋರಿ ಟಗರು’ ಟಗರಿನ ಒರಟುತನವೇ ಅವರಿಗೆ ಆಸ್ತಿ. ಮೆಚ್ಚುವ ಜನರ ಪಾಲಿಗೆ ಅದೇ ಪ್ರಿಯ.
ಹೀಗಾಗಿಯೇ ಅವರು ಕರುನಾಡಿನ ರಾಜಕಾರಣದ ಅಂಗಳದಲ್ಲಿ ಉಳಿದಿರುವ ಕೆಲವೇ ಕ್ರೌಡ್ ಪುಲ್ಲರ್ ನಾಯಕರ ಪೈಕಿ ಅಗ್ರಗಣ್ಯ.
ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದರಾಮ ಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.
ಸಿದ್ದರಾಮಯ್ಯ ಅವರು ಜನರಿಗೆ ಏಕೆ ಇಷ್ಟವಾಗುತ್ತಾರೆ?
-ಜನರನ್ನೇ ಕೇಳಬೇಕು. ನನಗೆ ಅನಿಸುತ್ತೆ ಇದ್ದುದನ್ನು ಇದ್ದ ಹಾಗೇ ಮಾತನಾಡುತ್ತೇನೆ. ಮಾತ ನಾಡಿದಂತೆ ನಡೆದುಕೊಳ್ಳುತ್ತೇನೆ ಎಂಬ ಕಾರಣಕ್ಕೆ ಇರಬೇಕು.
63ರ ವಯಸ್ಸಿನಲ್ಲಿ 320 ಕಿ.ಮೀ. ಪಾದಯಾತ್ರೆ ಹೊರಟಿರುವಿರಿ, ಈ ಯಾತ್ರೆ ನಿಮಗೆ ಎಷ್ಟು ಮುಖ್ಯ?
-ಇದರಲ್ಲಿ ವ್ಯೆಯಕ್ತಿಕವಾಗಿ ನನಗೆ ಮುಖ್ಯವಾದುದು ಏನೂ ಇಲ್ಲ. ಆದರೆ, ಈ ರೆಡ್ಡಿಗಳು ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದು ನನಗೆ ಸಂಡೂರಿಗೆ ಹೋದಾಗ ಗೊತ್ತಾಯಿತು. ನನ್ನನ್ನು ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಕೂಡ ಬಂದು ನೋಡದಂತೆ ಮಾಡಿಬಿಟ್ಟಿದ್ದರು. ಆಗ ಪಾದಯಾತ್ರೆ ಮಾಡಬೇಕು ಅನಿಸಿತ್ತು. ಇದಾದ ಮೇಲೂ ಅವರು ನನ್ನ ಬಗ್ಗೆ ಉದ್ಧಟತನದಿಂದ ಕೆಟ್ಟದಾಗಿ ಮಾತನಾಡಿದರು. ನಂತರ ಸವಾಲು ಹಾಕಿದರು. ಹೀಗೆ ಒಂದಕ್ಕೊಂದು ಬೆಳೆಯುತ್ತಾ ಹೋಗಿ ಈ ನಿರ್ಧಾರಕ್ಕೆ ಬರುವಂತಾಯಿತೇ ಹೊರತು ವೈಯಕ್ತಿಕ ಲಾಭಕ್ಕೋಸ್ಕರ ಈ ಹೋರಾ ಟ ನಡೆಯುತ್ತಿಲ್ಲ.
ಇಷ್ಟು ದೂರದ ಯಾತ್ರೆ, ದೇಹ ಸಾಥ್ ನೀಡುತ್ತಿದೆಯೇ?
-ನಾನು ‘ಡಯಾಬಿಟಿಕ್ ಪೇಶೆಂಟ್. ಇದರಿಂದಾಗಿ ಮಾಂಸಖಂಡಗಳು ವೀಕ್ ಆಗಿರುತ್ತವೆ. ನರ ಗಳೂ ದುರ್ಬಲವಾಗಿರುತ್ತವೆ. ಅಲ್ಲದೆ, ಹಿಂದೆ ಶಾಸಕರ ದಿನಾಚರಣೆ ವೇಳೆ ಕಬ್ಬಡಿ ಆಡುವಾಗ ಕಾಲಿಗೆ ಗಾಯ ಆಗಿತ್ತು. ಅದು ತುಸುನೋವು ಕೊಡುತ್ತೆ. ಆದರೆ, ಇದರಿಂದ ನಡೆಯಲು ಅಂಥ ಸಮಸ್ಯೆಯೇನೂ ಆಗುತ್ತಿಲ್ಲ.
ಪಾದಯಾತ್ರೆಯಿಂದಾಗಿ ದಿನಕ್ಕೊಂದು ಕಡೆ ಮಲಗುತ್ತಿದ್ದೀರಿ, ಸ್ಥಳ ಬದಲಾವಣೆ ನಿದ್ರೆಗೆ ತೊಂದರೆ ಕೊಡುತ್ತಿಲ್ಲವೇ?
-ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ. ನಾನು ಯಾವುದರ ಬಗ್ಗೆಯೂ ಅಷ್ಟಾಗಿ ಚಿಂತಿ ಸುವುದಿಲ್ಲ. ಒಂದು ಬಾರಿ ನಿರ್ಧಾರ ಕೈಗೊಂಡರೆ ಅದನ್ನು ಮಾಡಿಯೇ ತೀರುತ್ತೇನೆ. ಪರಿಣಾಮ ಲಾಭವೋ ಅಥವಾ ನಷ್ಟ ತರುವುದೋ ಎಂಬುದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಈ ಮನಸ್ಥಿತಿ ಇರೋರಿಗೆ ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ.
ಪಾದಯಾತ್ರೆ ಬಗ್ಗೆ ಹೈಕಮಾಂಡ್ (ಅರ್ಥಾತ್ ಪತ್ನಿ) ಸಹಕಾರ ದೊರೆತಿದೆಯೇ?
-ನನ್ನ ರಾಜಕಾರಣದ ನಿರ್ಧಾರಗಳ ಬಗ್ಗೆ ಪತ್ನಿ ಅಥವಾ ಮಕ್ಕಳು ಯಾವತ್ತೂ ಆಕ್ಷೇಪಿಸಿಲ್ಲ. ಈ ವಿಚಾರದಲ್ಲಿ ನಾನು ತುಂಬಾ, ತುಂಬಾ ಅದೃಷ್ಟವಂತ. ಮನೆ ವಾರ್ತೆ ವಿಚಾರದಲ್ಲಿ ನನ್ನ ಹೆಂಡತಿ ಮಾತು ನಡೆಯತ್ತೆ. ಆದರೆ, ರಾಜಕೀಯವಾಗಿ ನಾನು ಏನು ಮಾಡಿದರೂ ಹೆಂಡತಿ ಮತ್ತು ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಾರೆ.
ಪಾದಯಾತ್ರೆಯಲ್ಲಿ ಬರೇ ಪುಳ್ಚಾರ್ ಮಾತ್ರ ಅಂತೆ, 16 ದಿನ ಮಾಂಸಹಾರ ಮುಟ್ಟಂಗಿಲ್ವಲ್ಲ?
-ನಾನು ಒಂದು ಕಾಲದಲ್ಲಿ ಇದ್ದಷ್ಟು ಮಾಂಸಹಾರ ಪ್ರಿಯನಾಗಿ ಇಂದು ಉಳಿದಿಲ್ಲ. ಕುರಿಮಾಂಸ ತಿನ್ನುವುದು ಬಿಟ್ಟು ಐದಾರು ವರ್ಷವಾಗಿದೆ. ಆದರೆ, ಈಗಲೂ ವಾರಕ್ಕೊಮ್ಮೆ ನಾಟಿ ಕೋಳಿ ತಿನ್ನುತ್ತೇನೆ. ಇಂತಹ ವಿಚಾರಗಳಲ್ಲಿ ನನಗೆ ಅತಿ ಎನಿಸುವಷ್ಟು ಆತ್ಮಬಲವಿದೆ. ಏನೂ ಬೇಕಾ ದರೂ ಬಿಡಬಲ್ಲೆ ಏನೂ ಬೇಕಾದರೂ ಮತ್ತೆ ಸ್ಟಾರ್ಟ್ ಮಾಡಬಲ್ಲೆ. ಇಂತಹ ಆತ್ಮಬಲ ಇದ್ದುದರಿಂ ದಲೇ ನಾನು ಸಿಗರೇಟ್ ಬಿಡಲು ಸಾಧ್ಯವಾಗಿದ್ದು.
ಹೌದಾ, ಅದನ್ನು ಹೇಗೆ ಬಿಟ್ರಿ?
-೧೯೮೭ರಲ್ಲಿ ಸಿಗರೇಟ್ ಬಿಟ್ಬಿಟ್ಟೆ. ಒಂದು ದಿನ ರಾತ್ರಿ ಒಂದಾದ ಮೇಲೆ ಒಂದರಂತೆ ಸಿಕ್ಕಾಪಟ್ಟೆ ಸಿಗರೇಟ್ ಸೇದಿದೆ. ಯಾಕೋ ಇಸ್ಸಿ ಎನಿಸಿತು. ಬಿಡಬೇಕು ಅಂತ ಗಟ್ಟಿ ನಿರ್ಧಾರ ಮಾಡಿ ಬಿಟ್ಟವನು ಇವತ್ತಿಗೂ ಮುಟ್ಟಿಲ್ಲ.
ಪಾದಯಾತ್ರೆಯಂತಹ ಹೋರಾಟದ ಮುಂಚೂಣಿಯಲ್ಲಿದ್ದವರು ಅನಂತರ ಉನ್ನತ ಸ್ಥಾನಕ್ಕೆ ಮುಟ್ಟಿದ ಉದಾಹರಣೆ ನಮ್ಮ ನಾಡಿನಲ್ಲಿದೆ. ಈ ಯಾತ್ರೆ ನಂತರ ಸಿದ್ದರಾಮ ಯ್ಯ ಯಾವ ಸ್ಥಾನಕ್ಕೆ ಮುಟ್ಟಬಹುದು?
-ಹೋರಾಟ ನನಗೆ ಹೊಸದಲ್ಲ. ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿದ್ದೆವು. ರೈತ ಸಂಘಟ ನೆ ಹೋರಾಟಗಳಲ್ಲಿ ಇದ್ದೆ. ಆದರೆ, ಈ ಪಾದಯಾತ್ರೆ ಸರ್ಕಾರ... (ಗಣಿ ಲೂಟಿ ರಾಜಕಾರಣದ ಬಗ್ಗೆ ಚಿಕ್ಕದೊಂದು ಭಾಷಣ)
ಹೋಗ್ಲಿ, ಪಾದಯಾತ್ರೆ 16 ದಿನ ಇರತ್ತೆ ಮಧ್ಯದಲ್ಲಿ ಮನೆಗೆ ಹೋಗಬೇಕು ಅನಿಸಲ್ವ?
-ಅನಿಸಿದರೂ ಹೋಗಲ್ಲ. ಪಾದಯಾತ್ರೆ ಮುಗಿಯುವವರೆಗೂ ನಾನು ಇದರಲ್ಲೇ ಇರುತ್ತೇನೆ. ನನ್ನ ಗೆಳೆಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತಮ್ಮ ಮನೆಗೆ ಉಳಿದುಕೊಳ್ಳಲು ಬನ್ನಿ ಎಂದು ಒತ್ತಾಯಿಸುತ್ತಾರೆ. ಆದರೆ, ಇಷ್ಟೊಂದು ನಮ್ಮ ಮಾತಿಗೆ ಗೌರವಕೊಟ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಬಿಟ್ಟು ಬೇರೆ ಕಡೆ ಹೋಗೋದು ಸರಿಯಲ್ಲ. ಹೀಗಾಗಿಯೇ 16 ದಿನ ಮನೆಕಡೆ ತಲೆ ಹಾಕಲ್ಲ.


ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29
|
|
| sreenivasa, India | 2010-07-29 | | ಶ್ರೀಯುತ ಯಡಿಯೂರಪ್ಪನವರೇ, ನೀವು ಎಂದೂ ಕಾಂಗ್ರೆಸ್ಸಿಗರ ಒತ್ತಾಸೆಗೆ ಮಣಿಯಬೇಡಿ. ಏನೇ ಆದರೂ ಸಿ.ಬಿ.ಐ ತನಿಖೆಗೆ ಕೊಡಬೇಡಿ. ಅವರು ಎಲ್ಲಿಯವರೆಗೆ ಪಾದಯಾತ್ರೆ ಮಾಡುತ್ತಾರೆ ಎಂದು ನೋಡಿಯೇ ಬಿಡುವ. ಜನ ಬೇಬಲ ಖಂಡಿತಾ ನಿಮಗಿದೆ. ನೀವು ಈಗ ರಾಜ್ಯದಲ್ಲಿ ಮಾಡುತ್ತಿರುವ ಬೆಳವಣಿಗೆ ಕಾರ್ಯಕ್ರಮಗಳು ಕಾಂಗ್ರೆಸ್ಸಿಗೆ ಹಿತವೆನಿಸದೆ, ಸಹಿಸಲಾಗದೆ ಹೇಗಾದರೂ ಮಾಡಿ ಬಿ.ಜೆ.ಪಿ ಸರಕಾರವನ್ನು ಉರುಳಿಸುವುದೇ ಅವರ ಉದ್ದೇಶ. ಅದಕ್ಕೆ ಎಡೆ ಮಾಡಿಕೊಡದೆ ನೀವು ರೆಡ್ಡಿ ಸಹೋದರರು ಒಂದಾಗಿ ಆಡಳಿತ ಮಾಡಿದರೆ ಜನತೆಗೆ ಖುಷಿ. |
|