ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ

ಮಂಚಗಲ್‌ಕುಪ್ಪೆ, (ತುಮಕೂರು): ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ವಹಿಸಬೇಕೆಂಬ ತಮ್ಮ ನಿರ್ಧಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅದಿರು ರಫ್ತು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಗಣಿಧಣಿಗಳಾದ ರೆಡ್ಡಿ ಬ್ರದರ್ಸ್‌ಗೆ ಲಾಭವೇ ಹೊರತು ರಾಜ್ಯ ಸಂಪತ್ತು ಲೂಟಿ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳು ಸಿಬಿ‌ಐ ತನಿಖೆಗೆ ವಹಿಸಬೇಕು ಇಲ್ಲವೇ ಮುಖ್ಯಮಂತ್ರಿ ಸ್ಥಾನದಿಂದ ತೊಲಗಬೇಕು ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಬುಧವಾರ ಇಲ್ಲಿನ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆ ಒಪ್ಪಿಸುವವರೆಗೂ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಾದಯಾತ್ರೆಗೆ ಹೆದರಿ ಬಿಜೆಪಿ ಮಂದಿಗೆ ಮೂತ್ರ ಬರುವಂತಾಗಿದೆ ಗುಡುಗಿದರು.

ಯಡಿಯೂರಪ್ಪ ಕರ್ನಾಟಕ ಕಂಡ ಅತ್ಯಂತ ದುರ್ಬಲ ರಾಜಕಾರಣಿ. ಸಿಬಿ‌ಐ ತನಿಖೆಗೆ ಅಕ್ರಮ ಗಣಿಗಾರಿಕೆಯನ್ನು ಒಪ್ಪಿಸಿದರೆ ಯಡಿಯೂರಪ್ಪ ಮತ್ತವರ ಸಂಪುಟದ ಆನೇಕ ಮಂತ್ರಿಗಳು ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ (ಜೈಲಿಗೆ) ಹೋಗುವುದು ಖಚಿತ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸಚಿವ ಶ್ರೀರಾಮುಲು ಜೈಲಿಗೆ ಹೋಗುವ ಸಾಧ್ಯತೆಗಳು ಇರುವುದರಿಂದ ಬೆಂಗಳೂರು ಜೈಲಿಗೆ ಮುಂಚಿತವಾಗಿ ಹೋಗಿ ಭೇಟಿ ಮಾಡಿ, ಅಲ್ಲಿ ವಾತಾವರಣವನ್ನು ವೀಕ್ಷಣೆ ಮಾಡಿ ಬಂದಿದ್ದಾರೆ. ಕಾಂಗ್ರೆಸ್ ಮುಖಂಡರ ಆಸ್ತಿಪಾಸ್ತಿ ಬಗ್ಗೆಯೂ ತನಿಖೆ ಮಾಡಲಿ, ಬಿಜೆಪಿ ಮಂತ್ರಿ ಮಹೋದಯರ ಆಸ್ತಿಪಾಸ್ತಿಯ ಬಗ್ಗೆ ತನಿಖೆ ನಡೆಸಲಿ. ಅಪರಾಧಿ ಸ್ಥಾನದಲ್ಲಿ ಇರುವ ಯಡಿಯೂರಪ್ಪನವರಿಗೆ ತನಿಖೆಗಳನ್ನು ಎದುರಿಸುವ ನೈತಿಕ ಸ್ಥೈರ್ಯವೇ ಇಲ್ಲ.

ಲೋಕಾಯುಕ್ತರಿಗೆ ಮುಖ್ಯಮಂತ್ರಿ, ಮಂತ್ರಿ ಮತ್ತು ಶಾಸಕರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ನೀಡದೇ, ಪ್ರಯೋಜನಕ್ಕೆ ಬಾರದ ಪರಮಾಧಿಕಾರ ನೀಡಲಾಗಿದೆ ಎಂದು ಟೀಕಿಸಿದರು.

ರಫ್ತು ನಿಷೇಧದಿಂದ ರೆಡ್ಡಿ ಬ್ರದರ್ಸ್‌ಗೆ ಲಾಭ: ರಾಜ್ಯದ ಕೆಲ ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ನಿಷೇಧ ಮಾಡಿರುವುದರಿಂದ ಗಣಿಧಣಿಗಳಾದ ಜನಾರ್ದನರೆಡ್ಡಿ ಮತ್ತು ಸಹೋದರರಿಗೆ ಲಾಭ. ಇದನ್ನು ಮರೆಮಾಚಲು ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದರ ಹಿಂದೆ ರಾಜ್ಯ ಸಂಪತ್ತನ್ನು ಉಳಿಸುವ ಕಾಳಜಿ ನಯಾಪೈಸೆದಷ್ಟೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳ್ಳ ವ್ಯಾಪಾರಿಗಳು: ಸಚಿವರಾದ ಕರುಣಕರೆಡ್ಡಿ, ಜನಾರ್ದನರೆಡ್ಡಿ, ಶ್ರೀರಾಮುಲು ಅವರು ಕಳ್ಳ ವ್ಯಾಪಾರಿಗಳು, ಲೂಟಿಕೋರರು. ಅವರಿಗೆ ಸತ್ಯಾಗ್ರಹ, ಹೋರಾಟ ಮಾಡಿ ಗೊತ್ತಿಲ್ಲ. ಗಾಂಧೀಜಿ, ಅಂಬೇಡ್ಕರ್ ಅವರಂತೂ ಗೊತ್ತೆ ಇಲ್ಲ. ದೇಶದ ಇತಿಹಾಸವೂ ತಿಳಿದಿಲ್ಲ. ಮೂಲತಃ ಅವರು ರಾಜಕಾರಣಿಗಳೇ ಅಲ್ಲ. ಅಂಥವರಿಗೆ ತಾವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಟೀಕೆ ಮಾಡುವ ನೈತಕತೆ ಇಲ್ಲ.

ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ಕಬ್ಬಿಣ ತಿನ್ನಲಿಕ್ಕೆ ಅಲ್ಲ. ಬಳ್ಳಾರಿ ಅಭಿವೃದ್ಧಿ ಸಹಿಸದೇ ವಿರೋಧಪಕ್ಷಗಳು ಟೀಕೆ ಮಾಡುತ್ತಿವೆ ಎಂಬುದು ನಗೆಪಾಟಲಿನ ಸಂಗತಿ. ಸರ್ಕಾರದ ಹಂಗಿ ಲ್ಲದೇ 50  ಸಾವಿರ ಮನೆಗಳನ್ನು ನೆರೆಸಂತ್ರಸ್ತರಿಗೆ ಕಟ್ಟಿಸಿ ಕೊಡಲಾಗುವುದು ಎಂದು ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿಯವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ. ಇದು ಬಳ್ಳಾರಿ ಅಭಿವೃದ್ಧಿಯೇ ? ಎಂದು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ಒಪ್ಪಿಸುವವರೆಗೂ ಪಾದಯಾತ್ರೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಸಿಬಿ‌ಐಗೆ ಒಪ್ಪಿಸಿ ಬಿಜೆಪಿ ಗಿರಾಕಿಗಳು ಪಾದಯಾತ್ರೆಯನ್ನಾದರೂ ಮಾಡಲಿ, ತಿರುಪತಿ ಯಾತ್ರೆಯನ್ನಾದರೂ ಮಾಡಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದರು.

ಗಾಂಧಿ ಭಜನೆ ಮಾಡಿರಲಿಲ್ಲವೇ?

ಪಾದಯಾತ್ರೆ ವೇಳೆ ಡೊಳ್ಳು ಕುಣಿತ, ವೀರಭದ್ರೇಶ್ವರನ ಕುಣಿತ, ತಮಟೆ ಮತ್ತು ಲಾವಣಿ ಪದ ಗಳನ್ನು ಹಾಡಿದ ಬಗ್ಗೆ ಬಿಜೆಪಿ ಟೀಕಿಸಿದ ಬಗ್ಗೆ ಸಿದ್ದು ಪ್ರತಿಕ್ರಿಯಿಸಿದ್ದು ಹೀಗೆ.

ಡೊಳ್ಳು ಕುಣಿತ, ಲಾವಣಿ ಮತ್ತಿತರ ಜಾನಪದ ಪ್ರಾಕಾರಗಳು ಗ್ರಾಮೀಣ ಸಂಸ್ಕೃತಿಯ ಅವಿ ಭಾಜ್ಯ ಅಂಗ. ಪಾದಯಾತ್ರೆ ವೇಳೆ ಗ್ರಾಮೀಣ ಜನರು ನೃತ್ಯ, ಹಾಡುಗಳನ್ನು ಹಾಡಿದಾಗ, ಅವರ ಭಾವನೆಗಳಿಗೆ ಸ್ಪಂದಿಸಲು ಅವರೊಡನೆ ಹೆಜ್ಜೆ ಹಾಕಲಾಯಿತು. ಅದನ್ನು ತಪ್ಪು ಎನ್ನುವ ಬಿಜೆಪಿ ಮಂದಿಗೆ ಗ್ರಾಮೀಣ, ಕಲೆ ಮತ್ತು ಸಂಸ್ಕೃತಿ ಗೊತ್ತಿಲ್ಲ. ನಮ್ಮದು ರೆಸಾರ್ಟ್ ಸಂಸ್ಕೃತಿಯಲ್ಲ. ಜಾನಪದ ಸಂಸ್ಕೃತಿ. ಅದು ಅಶ್ಲೀಲವಲ್ಲ.

ಮಹಾತ್ಮಾಗಾಂಧೀಜಿ ಅವರು ಚಳವಳಿ ಮಾಡುತ್ತಿದ್ದ ವೇಳೆ ಭಜನೆ ಮಾಡುತ್ತಿದ್ದರು. ಅದು ಅಸಂಸ್ಕೃತಿಯೇ. ಬಿಜೆಪಿ ಮುಖಂಡರು ಗ್ರಾಮೀಣ ಸಂಸ್ಕೃತಿಯ ಬಗ್ಗೆ ಟೀಕೆ ಮಾಡುವ ಮೂಲಕ ಗ್ರಾಮೀಣ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಉತ್ಸಾಹದ ನಡಿಗೆ, ಅಡ್ಡಿಯಾಗದ ಮಳೆ

ಬೆಂಗಳೂರು, ಜು. 28: ಅಡ್ಡಿಯಾಗಬೇಕಿದ್ದ ಮಳೆ ಉತ್ಸಾಹ ತಂದಿತು, ಜಾನಪದ ಕಲಾತಂಡಗಳು ನಡಿಗೆಗೆ ಉತ್ಸಾಹ ತುಂಬಿದವು, ಧಣಿದ ಕಾರ್ಯಕರ್ತರಿಂದ ಊಟಕ್ಕೆ ಪರದಾಟ...,

ನಾಲ್ಕು ದಿನಗಳ ಹಿಂದೆ ಬಳ್ಳಾರಿಯತ್ತ ಮುಖಮಾಡಿ ಹೊರಟು 70 ಕಿ.ಮೀ. ಕ್ರಮಿಸಿ ತುಮಕೂರು ಸೇರಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಇಂದು ಹಲವು ವಿಶೇಷಗಳಿದ್ದವು. ಮಂಗಳಮುಖೀಯರು ಮೂದಲ ಬಾರಿಗೆ ಪಾದಯಾತ್ರೆಯಲ್ಲಿ ಎಂಟ್ರಿ ಪಡೆದು, ಭಾಗಿಯಾದರು. ಪಾದಯಾತ್ರೆಗೆ ಸಾಥ್ ನೀಡುವ ಜವಾಬ್ದಾರಿ ಇಂದು ಮಂಡ್ಯ ಮತ್ತು ರಾಮನಗರ ಜಿಲ್ಲಾ ಕಾಂಗ್ರೆಸ್­ಗಳ ಹೆಗಲೇರಿತ್ತು . ನಿರೀಕ್ಷೆಗೂ ಮೀರಿ ಈ ಎರಡು ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.

ಬಿಜೆಪಿ ನಾಯಕರು ಹಾಗೂ ಸಚಿವರ ಮೂದಲಿಕೆಗೂ ಅಂಜದೆ, ಇಂದೂ ಕಾಂಗ್ರೆಸ್ ನಾಯಕರು ಜಾನಪದ ತಂಡಗಳೊಂದಿಗೆ ಹಾಡಿ ಕುಣಿದರು. ದೇವರ ಹೊಸಳ್ಳಿಯಲ್ಲಿ ಸಿದ್ದರಾಮಯ್ಯ ಅವರು ನಂದಿ ಧ್ವಜವನ್ನು ತಲೆಮೇಲೆ ಒತ್ತುಕೊಂಡು ಕುಣಿದರು.

ರೇನ್ಕೋಟ್ ಧರಿಸಿಯೇ ನಟಿಯೂ ಆದ ಉಮಾಶ್ರೀ ಮಾರ್ಗದುದ್ದಕ್ಕೂ ಪಾದಯಾತ್ರೆಯ 'ಸ್ಟಾರ್ ಕ್ಯಾಂಪೈನರ್' ಆಗಿದ್ದರು.

ಉತ್ಸಾಹದೊಂದಿಗೆ ದಾಬಸ್ಪೇಟೆಯಿಂದ ಯಾತ್ರೆ ಮುಂದುವರಿಸಿದ ಪಾದಯಾತ್ರೆಯೊಂದಿಗೆ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಸ್ಥಳೀಯ ಕಲಾವಿದರೊಂದಿಗೆ ಭಾಗಿಯಾದರು. ಡೊಳ್ಳು ಕುಣಿತದ ಅಬ್ಬರ ಮಳೆಯ ಅಬ್ಬರಕ್ಕೆ ಸವಾಲ್ ಹಾಕಿತ್ತು . ನಾಲ್ಕು ದಿನಗಳ ನಡಿಗೆಯ ನೋವಿನ ನಡುವೆಯೂ ತಮಟೆ ಸದ್ದಿಗೆ ನಾಯಕರ ಕಾಲು ತಾವಾಗಿಯೇ ಕುಣಿಯುತ್ತಿದ್ದವು. ಮಾರ್ಗಮಧ್ಯೆ ಸಿದ್ದರಾಮಯ್ಯ ಎರಡೆರಡು ಬಾರಿ ಷೂ ಬದಲಿಸಿದರು.

ಮಾರ್ಗಮಧ್ಯೆ ಕಾಮತ್ ಹೋಟೆಲ್­ನವರು ಪಾದಯಾತ್ರಿಗಳಿಗೆ ಉಚಿತವಾಗಿ ತಿಂಡಿ, ಕಾಫಿ, ಹಣ್ಣಿನ ರಸಗಳನ್ನು ವಿತರಿಸಿದರು. ನಡಿಗೆ ಗ್ರಾಮಗಳನ್ನು ತಲುಪುತ್ತಿದ್ದಂತೆ ಮಹಿಳೆಯರು ನಾಯಕರಿಗೆ ಎದುರಾಗಿ ಆರತಿ ಎತ್ತಿದ್ದರು. ದಾಬಸ್ಪೇಟೆಯಿಂದ ಹಿರೇಹಳ್ಳಿ ವರೆಗೆ ಅಬ್ಬರದ ಮಳೆಯಲ್ಲೇ ನಡಿಗೆ ಸಾಗಿತು. ಕಾರ್ಯಕರ್ತರು ಸ್ವಲ್ಪಮಟ್ಟಿಗೆ ಚದುರಿದರೂ, ಕೋಟು ಧರಿಸಿದ ನಾಯಕರು ಮುಂದುವರಿದರು.

ಸತತ ನಾಲ್ಕನೇ ದಿನದ ನಡಿಗೆಯಿಂದ ಬಳಲಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರೂ ಕಾಲುನೋವಿನಿಂದ ಕುಂಟುತ್ತಲೇ ಸಾಗಿದರು. ಡಿ.ಕೆ. ಶಿವಕುಮಾರ್ ಕಣ್ಣುಗಳು ಕೆಂಪಗಾಗಿ ಜ್ವರದಲ್ಲಿದ್ದರು. ಆದರೆ, ಕಾರ್ಯಕರ್ತರ ಉತ್ಸಾಹ ನಾಯಕರಲ್ಲಿ ಆತ್ಮವಿತ್ವಾಸವನ್ನು ಹೆಚ್ಚಿಸಿತ್ತು .

ಇಂದು ದಿನವಿಡೀ ಮಂಗಳಮುಖೀಯರ ತಂಡ ಪಾದಯಾತ್ರೆ ಜತೆಗಿತ್ತು . ಮೋಟಮ್ಮ ಅವರು ತಮ್ಮದೇ ಮಹಿಳೆಯರ ತಂಡದೊಂದಿಗೆ ದಿಟ್ಟ ಹೆಜ್ಜೆ ಇಡುತ್ತಾ ಮುನ್ನಡೆಯುತ್ತಿದ್ದರು. ಉಮಾಶ್ರೀ ಅವರಂತೂ ಕುಣಿದು ಕುಪ್ಪಳಿಸುತ್ತಾ , ಸಾರ್ವಜನಿಕರತ್ತ ಕೈಬೀಸುತ್ತಾ ಗಮನ ಸೆಳೆಯುತ್ತಿದ್ದರು. ಪಂಚೆ, ಶರ್ಟಿಗೆ ಮೂರೆ ಹೋಗಿರುವ ಉಗ್ರಪ್ಪ ಅವರು, ಸಾಮಾನ್ಯ ಹಳ್ಳಿಗರಂತೆ ಪಂಚೆ ಮೇಲೆತ್ತಿ ಕಟ್ಟಿಕೊಂಡು ಉತ್ಸಾಹಭರಿತರಾಗಿ ಹೆಜ್ಜೆ ಹಾಕುತ್ತಿದ್ದರು.

ನಡಿಗೆಯ ಮಾರ್ಗದರ್ಶನದ ಜವಾಬ್ದಾರಿ ಹೊತ್ತಿದ್ದ ಎಚ್.ಎಂ. ರೇವಣ್ಣ ಅವರು, ಮಹಿಳೆಯರೂ ಮಳೆಯಲ್ಲೇ ನಡೆಯುತ್ತಿದ್ದಾರೆ. ಗಂಡಸರೆಲ್ಲಾ ಬನ್ನಿ ಎಂದು ಮಳೆಯಿಂದ ಪೆಟ್ರೋಲ್ ಬಂಕ್, ಅಂಗಡಿ ಮಳಿಗೆಗಳಡಿ ಆಶ್ರಯ ಪಡೆದಿದ್ದ ಜನರನ್ನು ಉತ್ತೇಜಿಸುತ್ತಿ ದ್ದರು. ಮಳೆಯಲ್ಲೇ ಯುವ ಕಾಂಗ್ರೆಸ್ಸಿಗರು ಬೈಕ್ ರಾಯಲಿಯನ್ನೂ ನಡೆಸಿದರು. ಎಚ್.ಕೆ. ಪಾಟೀಲ್, ಬಿ.ಎಲ್. ಶಂಕರ್ ಅವರಂತಹ ಕೆಲವು ನಾಯಕರು ಇಂದು ಪಾದಯಾತ್ರೆಗೆ ಗೈರುಹಾಜರಾದರು.

ಊಟಕ್ಕೆ ಪರದಾಟ:

ಪಾದಯಾತ್ರೆ ಆರಂಭದ ದಿನದಿಂದಲೂ ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿತ್ತು . ಆದರೆ, ಇಂದು ಮಧ್ಯಾಹ್ನ ಲೋಪ ವಾಯಿತು. ಮಳೆಯಲ್ಲಿ ನೆನೆದು ಹಸಿವಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರು ಸಮರ್ಪಕವಾಗಿ ಊಟ ಸಿಗದೆ ಪರದಾಡಿದರು. ನಿಗದಿಗಿಂತ ಎರಡು ತಾಸು ವಿಳಂಬವಾಗಿ ಯಾತ್ರೆ ಎಚ್ಎಂಎಸ್ ಕಾಲೇಜು ತಲುಪಿತು. ಮಾಜಿ ಶಾಸಕ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಫಿ ಅಹ್ಮದ್ ಅವರಿಗೆ ಸೇರಿದ ಈ ಕಾಲೇಜಿನಲ್ಲಿ ಊಟದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದರು.

ರೆಡ್ಡಿಗಳ ಉದ್ಧಟತನಕ್ಕೆ ಇದು ಉತ್ತರ

ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದ ರಾಮಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.

ತುಮಕೂರು: ಗಡುಸು ಧ್ವನಿ, ಒರಟು ನಡೆ, ನೇರ ನುಡಿ. ಇಂದಿನ ‘ಸೊಫೆಸ್ಟಿಕೇಷನ್’ ರಾಜಕಾರಣ ದಿಂದ ಗಾವುದ ದೂರವಿರುವ ವ್ಯಕ್ತಿತ್ವ. ಮೇಲು ನೋಟಕ್ಕೆ ಹುಂಬ ಹಳ್ಳಿಗನಂತೆ ಕಾಣುವ ಆದರೆ ಮಾತಿಗೆ ನಿಂತರೆ ಯಾವುದೇ ವಿಷಯದ ಬಗ್ಗೆ ಅಂಥೆಟಿಕ್ ಎನಿಸುವಂತೆ ಮಾತನಾಡುವ ಸಾಮ ರ್ಥ್ಯವಿರುವ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ತಕ್ಷಣ ದೊರೆಯುವ ಉತ್ತರ ಸಿದ್ದರಾಮಯ್ಯ.

ಒರಟು ರಾಜಕಾರಣಿ ಎಂದೇ ಗುರುತಿಸಲಾಗುವ ಸಿದ್ದರಾಮಯ್ಯ, ಅವರ ಆಪ್ತ ಗೆಳೆಯ ಸಿ.ಎಂ. ಇಬ್ರಾಹಿಂ ಅವರ ಪ್ರಕಾರ ಸಿದ್ದು ‘ಹೋರಿ ಟಗರು’ ಟಗರಿನ ಒರಟುತನವೇ ಅವರಿಗೆ ಆಸ್ತಿ. ಮೆಚ್ಚುವ ಜನರ ಪಾಲಿಗೆ ಅದೇ ಪ್ರಿಯ.

ಹೀಗಾಗಿಯೇ ಅವರು ಕರುನಾಡಿನ ರಾಜಕಾರಣದ ಅಂಗಳದಲ್ಲಿ ಉಳಿದಿರುವ ಕೆಲವೇ ಕ್ರೌಡ್ ಪುಲ್ಲರ್ ನಾಯಕರ ಪೈಕಿ ಅಗ್ರಗಣ್ಯ.

ರೆಡ್ಡಿ ಸಹೋದರರ ಸವಾಲಿಗೆ ತೊಡೆತಟ್ಟಿ ಕಾಂಗ್ರೆಸ್ ಪದಾತಿದಳವನ್ನು ಬೆಂಗಳೂರಿನಿಂದ ಬಳ್ಳಾರಿಗೆ ಮುನ್ನಡೆಸುತ್ತಿರುವ ಮಹಾದಂಡನಾಯಕ ಸಿದ್ದರಾಮಯ್ಯ ಪಾದ ಬೆಳೆಸುತ್ತಿರುವೆಡೆ ಯೆಲ್ಲ ಮುತ್ತುತ್ತಿರುವ ಜನಜಂಗುಳಿಯೇ ಈ ಮಾತಿಗೆ ಸಾಕ್ಷಿ. ಇಂಥ ವಿಭಿನ್ನ ವ್ಯಕ್ತಿತ್ವದ ಸಿದ್ದರಾಮ ಯ್ಯ ಅವರೊಂದಿಗಿನ ಆಪ್ತ ಹಾಗೂ ಖಾಸಗಿ ವಿಚಾರಗಳ ಕುಶಲೋಪರಿಯಿದು.

ಸಿದ್ದರಾಮಯ್ಯ ಅವರು ಜನರಿಗೆ ಏಕೆ ಇಷ್ಟವಾಗುತ್ತಾರೆ?

-ಜನರನ್ನೇ ಕೇಳಬೇಕು. ನನಗೆ ಅನಿಸುತ್ತೆ ಇದ್ದುದನ್ನು ಇದ್ದ ಹಾಗೇ ಮಾತನಾಡುತ್ತೇನೆ. ಮಾತ ನಾಡಿದಂತೆ ನಡೆದುಕೊಳ್ಳುತ್ತೇನೆ ಎಂಬ ಕಾರಣಕ್ಕೆ ಇರಬೇಕು.

63ರ ವಯಸ್ಸಿನಲ್ಲಿ 320 ಕಿ.ಮೀ. ಪಾದಯಾತ್ರೆ ಹೊರಟಿರುವಿರಿ, ಈ ಯಾತ್ರೆ ನಿಮಗೆ ಎಷ್ಟು ಮುಖ್ಯ?

-ಇದರಲ್ಲಿ ವ್ಯೆಯಕ್ತಿಕವಾಗಿ ನನಗೆ ಮುಖ್ಯವಾದುದು ಏನೂ ಇಲ್ಲ. ಆದರೆ, ಈ ರೆಡ್ಡಿಗಳು ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದು ನನಗೆ ಸಂಡೂರಿಗೆ ಹೋದಾಗ ಗೊತ್ತಾಯಿತು. ನನ್ನನ್ನು ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಕೂಡ ಬಂದು ನೋಡದಂತೆ ಮಾಡಿಬಿಟ್ಟಿದ್ದರು. ಆಗ ಪಾದಯಾತ್ರೆ ಮಾಡಬೇಕು ಅನಿಸಿತ್ತು. ಇದಾದ ಮೇಲೂ ಅವರು ನನ್ನ ಬಗ್ಗೆ ಉದ್ಧಟತನದಿಂದ ಕೆಟ್ಟದಾಗಿ ಮಾತನಾಡಿದರು. ನಂತರ ಸವಾಲು ಹಾಕಿದರು. ಹೀಗೆ ಒಂದಕ್ಕೊಂದು ಬೆಳೆಯುತ್ತಾ ಹೋಗಿ ಈ ನಿರ್ಧಾರಕ್ಕೆ ಬರುವಂತಾಯಿತೇ ಹೊರತು ವೈಯಕ್ತಿಕ ಲಾಭಕ್ಕೋಸ್ಕರ ಈ ಹೋರಾ ಟ ನಡೆಯುತ್ತಿಲ್ಲ.

ಇಷ್ಟು ದೂರದ ಯಾತ್ರೆ, ದೇಹ ಸಾಥ್ ನೀಡುತ್ತಿದೆಯೇ?

-ನಾನು ‘ಡಯಾಬಿಟಿಕ್ ಪೇಶೆಂಟ್. ಇದರಿಂದಾಗಿ ಮಾಂಸಖಂಡಗಳು ವೀಕ್ ಆಗಿರುತ್ತವೆ. ನರ ಗಳೂ ದುರ್ಬಲವಾಗಿರುತ್ತವೆ. ಅಲ್ಲದೆ, ಹಿಂದೆ ಶಾಸಕರ ದಿನಾಚರಣೆ ವೇಳೆ ಕಬ್ಬಡಿ ಆಡುವಾಗ ಕಾಲಿಗೆ ಗಾಯ ಆಗಿತ್ತು. ಅದು ತುಸುನೋವು ಕೊಡುತ್ತೆ. ಆದರೆ, ಇದರಿಂದ ನಡೆಯಲು ಅಂಥ ಸಮಸ್ಯೆಯೇನೂ ಆಗುತ್ತಿಲ್ಲ.

ಪಾದಯಾತ್ರೆಯಿಂದಾಗಿ ದಿನಕ್ಕೊಂದು ಕಡೆ ಮಲಗುತ್ತಿದ್ದೀರಿ, ಸ್ಥಳ ಬದಲಾವಣೆ ನಿದ್ರೆಗೆ ತೊಂದರೆ ಕೊಡುತ್ತಿಲ್ಲವೇ?

-ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ. ನಾನು ಯಾವುದರ ಬಗ್ಗೆಯೂ ಅಷ್ಟಾಗಿ ಚಿಂತಿ ಸುವುದಿಲ್ಲ. ಒಂದು ಬಾರಿ ನಿರ್ಧಾರ ಕೈಗೊಂಡರೆ ಅದನ್ನು ಮಾಡಿಯೇ ತೀರುತ್ತೇನೆ. ಪರಿಣಾಮ ಲಾಭವೋ ಅಥವಾ ನಷ್ಟ ತರುವುದೋ ಎಂಬುದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಈ ಮನಸ್ಥಿತಿ ಇರೋರಿಗೆ ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ.

ಪಾದಯಾತ್ರೆ ಬಗ್ಗೆ ಹೈಕಮಾಂಡ್ (ಅರ್ಥಾತ್ ಪತ್ನಿ) ಸಹಕಾರ ದೊರೆತಿದೆಯೇ?

-ನನ್ನ ರಾಜಕಾರಣದ ನಿರ್ಧಾರಗಳ ಬಗ್ಗೆ ಪತ್ನಿ ಅಥವಾ ಮಕ್ಕಳು ಯಾವತ್ತೂ ಆಕ್ಷೇಪಿಸಿಲ್ಲ. ಈ ವಿಚಾರದಲ್ಲಿ ನಾನು ತುಂಬಾ, ತುಂಬಾ ಅದೃಷ್ಟವಂತ. ಮನೆ ವಾರ್ತೆ ವಿಚಾರದಲ್ಲಿ ನನ್ನ ಹೆಂಡತಿ ಮಾತು ನಡೆಯತ್ತೆ. ಆದರೆ, ರಾಜಕೀಯವಾಗಿ ನಾನು ಏನು ಮಾಡಿದರೂ ಹೆಂಡತಿ ಮತ್ತು ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಾರೆ.

ಪಾದಯಾತ್ರೆಯಲ್ಲಿ ಬರೇ ಪುಳ್‌ಚಾರ್ ಮಾತ್ರ ಅಂತೆ, 16 ದಿನ ಮಾಂಸಹಾರ ಮುಟ್ಟಂಗಿಲ್ವಲ್ಲ?

-ನಾನು ಒಂದು ಕಾಲದಲ್ಲಿ ಇದ್ದಷ್ಟು ಮಾಂಸಹಾರ ಪ್ರಿಯನಾಗಿ ಇಂದು ಉಳಿದಿಲ್ಲ. ಕುರಿಮಾಂಸ ತಿನ್ನುವುದು ಬಿಟ್ಟು ಐದಾರು ವರ್ಷವಾಗಿದೆ. ಆದರೆ, ಈಗಲೂ ವಾರಕ್ಕೊಮ್ಮೆ ನಾಟಿ ಕೋಳಿ ತಿನ್ನುತ್ತೇನೆ. ಇಂತಹ ವಿಚಾರಗಳಲ್ಲಿ ನನಗೆ ಅತಿ ಎನಿಸುವಷ್ಟು ಆತ್ಮಬಲವಿದೆ. ಏನೂ ಬೇಕಾ ದರೂ ಬಿಡಬಲ್ಲೆ ಏನೂ ಬೇಕಾದರೂ ಮತ್ತೆ ಸ್ಟಾರ್ಟ್ ಮಾಡಬಲ್ಲೆ. ಇಂತಹ ಆತ್ಮಬಲ ಇದ್ದುದರಿಂ ದಲೇ ನಾನು ಸಿಗರೇಟ್ ಬಿಡಲು ಸಾಧ್ಯವಾಗಿದ್ದು.

ಹೌದಾ, ಅದನ್ನು ಹೇಗೆ ಬಿಟ್ರಿ?

-೧೯೮೭ರಲ್ಲಿ ಸಿಗರೇಟ್ ಬಿಟ್ಬಿಟ್ಟೆ. ಒಂದು ದಿನ ರಾತ್ರಿ ಒಂದಾದ ಮೇಲೆ ಒಂದರಂತೆ ಸಿಕ್ಕಾಪಟ್ಟೆ ಸಿಗರೇಟ್ ಸೇದಿದೆ. ಯಾಕೋ ಇಸ್ಸಿ ಎನಿಸಿತು. ಬಿಡಬೇಕು ಅಂತ ಗಟ್ಟಿ ನಿರ್ಧಾರ ಮಾಡಿ ಬಿಟ್ಟವನು ಇವತ್ತಿಗೂ ಮುಟ್ಟಿಲ್ಲ.

ಪಾದಯಾತ್ರೆಯಂತಹ ಹೋರಾಟದ ಮುಂಚೂಣಿಯಲ್ಲಿದ್ದವರು ಅನಂತರ ಉನ್ನತ ಸ್ಥಾನಕ್ಕೆ ಮುಟ್ಟಿದ ಉದಾಹರಣೆ ನಮ್ಮ ನಾಡಿನಲ್ಲಿದೆ. ಈ ಯಾತ್ರೆ ನಂತರ ಸಿದ್ದರಾಮ ಯ್ಯ ಯಾವ ಸ್ಥಾನಕ್ಕೆ ಮುಟ್ಟಬಹುದು?

-ಹೋರಾಟ ನನಗೆ ಹೊಸದಲ್ಲ. ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿದ್ದೆವು. ರೈತ ಸಂಘಟ ನೆ ಹೋರಾಟಗಳಲ್ಲಿ ಇದ್ದೆ. ಆದರೆ, ಈ ಪಾದಯಾತ್ರೆ ಸರ್ಕಾರ... (ಗಣಿ ಲೂಟಿ ರಾಜಕಾರಣದ ಬಗ್ಗೆ ಚಿಕ್ಕದೊಂದು ಭಾಷಣ)

ಹೋಗ್ಲಿ, ಪಾದಯಾತ್ರೆ 16 ದಿನ ಇರತ್ತೆ ಮಧ್ಯದಲ್ಲಿ ಮನೆಗೆ ಹೋಗಬೇಕು ಅನಿಸಲ್ವ?

-ಅನಿಸಿದರೂ ಹೋಗಲ್ಲ. ಪಾದಯಾತ್ರೆ ಮುಗಿಯುವವರೆಗೂ ನಾನು ಇದರಲ್ಲೇ ಇರುತ್ತೇನೆ. ನನ್ನ ಗೆಳೆಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತಮ್ಮ ಮನೆಗೆ ಉಳಿದುಕೊಳ್ಳಲು ಬನ್ನಿ ಎಂದು ಒತ್ತಾಯಿಸುತ್ತಾರೆ. ಆದರೆ, ಇಷ್ಟೊಂದು ನಮ್ಮ ಮಾತಿಗೆ ಗೌರವಕೊಟ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಬಿಟ್ಟು ಬೇರೆ ಕಡೆ ಹೋಗೋದು ಸರಿಯಲ್ಲ. ಹೀಗಾಗಿಯೇ 16 ದಿನ ಮನೆಕಡೆ ತಲೆ ಹಾಕಲ್ಲ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29

Tell a Friend
ಇತರ ಸಂಭಂದಪಟ್ಟ ವರದಿಗಳು
»ಕಾಂಗ್ರೆಸ್ ಹೇಳಿದಂತೆ ಕುಣಿಯಲು ಆಗಲ್ಲ: ಯಡಿಯೂರಪ್ಪ
»ಬೆ೦ಗಳೂರು: ಕಾ೦ಗ್ರೆಸ್ ನ ಪಾದಯಾತ್ರೆಯ ಪ್ರತಿಯಾತ್ರೆಯಾಗಿ ಇಡೀ ರಾಜ್ಯ ಸುತ್ತಲು ಬಿ‌ಎಸ್‌ವೈ ಚಿಂತನೆ
»ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
»ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
»ಬಳ್ಳಾರಿ: ಅಸಮಾಧಾನ: ಸಚಿವ ಸ್ಥಾನಕ್ಕೆ ಶ್ರೀರಾಮುಲು ರಾಜೀನಾಮೆ?
»ಪಾದಯಾತ್ರೆ: ಡಾಬಸ್‌ಪೇಟೆಯ ಅರಳಿಕಟ್ಟೆಯಲ್ಲಿ ಪ೦ಚಾಯ್ತಿ : ಜನಾದೇಶಕ್ಕೆ ಬನ್ನಿ: ಯಡಿಯೂರಪ್ಪಗೆ ಸಿದ್ದು ಪಂಥಾಹ್ವಾನ
»‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
»ಕ್ರಮ ಸಲ್ಲ: ರೆಡ್ಡಿ ಸಹೋದರು ಹೈಕೋರ್ಟ್‌ಗೆ - ಚುನಾವಣಾ ಆಯೋಗಕ್ಕೆ ಆದೇಶಿಸಲು ಮನವಿ
»ಅಕ್ರಮ ಗಣಿಗಾರಿಕೆ: ಕಬ್ಬಿಣ ಅದಿರು ರಪ್ತು ಪರ್ಮಿಟ್­ಗೂ ಕತ್ತರಿ; ಬುಧವಾರ ಮಹತ್ವದ ಆದೇಶ
»ಬೇಗೂರು: ಪಾದಯಾತ್ರೆಗೆ ಅಭೂತಪೂರ್ವ ಜನ ಬೆ೦ಬಲ: ಎರಡೇ ದಿನಗಳಲ್ಲಿ ಸರ್ಕಾರದ ಬಗ್ಗೆ ತೀವ್ರ ಅಸಮಧಾನ: ಕೇಳುಗರಿಗೆ ರ೦ಜನೆಯನ್ನು ನೀಡೀದ ಸಿದ್ದು ಅವರ ವೀರಗಾಸೆ, ಸುಬ್ಬಾ ಭಟ್ಟರ ಹಾಸ್ಯ
»ನೆಲಮ೦ಗಲ: ಅದಿರು ಕಣ್ಮರೆ: ಸಿ‌ಎಂ ಕೈ: ಬಿ‌ಎಸ್‌ವೈ, ರೆಡ್ಡಿಗಳೇ ನೇಣುಗಂಬ ಏರಲು ಸಿದ್ಧರಾಗಿ: ಸಿದ್ದು
»ಕಾಂಗ್ರೆಸ್ ಪಾದಯಾತ್ರೆ ವಿಫಲ: ಮೊದ್ಲು ಕಬ್ಬಿಣ ಅದಿರು ರಫ್ತು ನಿಷೇಧಿಸ್ಲಿ: ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: - ಎಚ್‌ಡಿಕೆ
»ಟಾರ್ಗೆಟ್ ಬಳ್ಳಾರಿ ಪಾದಯಾತ್ರೆ ಎರಡನೇ ದಿನಕ್ಕೆ: ಬಿಸಿಲ ಝಳ-ಉತ್ಸಾಹಿ ಕಾರ್ಯಕರ್ತರು, ಬಸವಳಿದ ನೇತಾರರು; ಸಿದ್ದರಾಮಯ್ಯಗೆ ಕಾಲುನೋವು, ಡಿಕೆಶಿಗೆ ಜ್ವರ : ಇವರ ಕಚ್ಚಾಟದಲ್ಲಿ ಹುತಾತ್ಮರನ್ನು ಮರೆತು ಬಿಟ್ಟರೇ?
»ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ; ಕುಸಿದು ಬಿದ್ದ ಕಾರ್ಯಕರ್ತ ಸಾವು | ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ; ಕಾಂಗ್ರೆಸಿಗರ ಅಂತಿಮ ಯಾತ್ರೆ: ರೆಡ್ಡಿ
»ಮದ್ದೂರು: ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ರಕ್ಷಣೆ; ವಿರೋಧ ಪಕ್ಷಗಳ ಗದ್ದಲದ ನಡುವೆ ಅಭಿವೃದ್ಧಿ ಕಾರ್ಯ: ಪೊಲೀಸ್ ಇಲಾಖೆಗೆ ಹೆಚ್ಚುವರಿಯಾಗಿ 253 ಕೋಟಿ ಬಿಡುಗಡೆ: ವಿ.ಎಸ್.ಆಚಾರ್ಯ
»ಬೆ೦ಗಳೂರು: ರಾಜ್ಯದಲ್ಲಿ ಯಾತ್ರಾಯುಗ: ಈಗ ಕಾಂಗ್ರೆಸ್ ನಡಿಗೆ ; ಬೆನ್ನಲ್ಲೇ ಕಮಲ ಮೇಳ : ಜತೆಗೆ ಜೆಡಿ‌ಎಸ್ ಆಂದೋಲನ : ಕೈ ‘ನಾಡ ರಕ್ಷಣಾ ನಡಿಗೆ’ ಇಂದು ಆರಂಭ
»ಪಾದಯಾತ್ರೆಗೆ ಸಿಎಂ ನಕಾರ; ರೆಡ್ಡಿ ಬ್ರದರ್ಸ್ ಗರಂ
»

ಪ್ರತಿಸ್ಪಂದನ
sreenivasa, India
2010-07-29
ಶ್ರೀಯುತ ಯಡಿಯೂರಪ್ಪನವರೇ, ನೀವು ಎಂದೂ ಕಾಂಗ್ರೆಸ್ಸಿಗರ ಒತ್ತಾಸೆಗೆ ಮಣಿಯಬೇಡಿ. ಏನೇ ಆದರೂ ಸಿ.ಬಿ.ಐ ತನಿಖೆಗೆ ಕೊಡಬೇಡಿ. ಅವರು ಎಲ್ಲಿಯವರೆಗೆ ಪಾದಯಾತ್ರೆ ಮಾಡುತ್ತಾರೆ ಎಂದು ನೋಡಿಯೇ ಬಿಡುವ. ಜನ ಬೇಬಲ ಖಂಡಿತಾ ನಿಮಗಿದೆ. ನೀವು ಈಗ ರಾಜ್ಯದಲ್ಲಿ ಮಾಡುತ್ತಿರುವ ಬೆಳವಣಿಗೆ ಕಾರ್ಯಕ್ರಮಗಳು ಕಾಂಗ್ರೆಸ್ಸಿಗೆ ಹಿತವೆನಿಸದೆ, ಸಹಿಸಲಾಗದೆ ಹೇಗಾದರೂ ಮಾಡಿ ಬಿ.ಜೆ.ಪಿ ಸರಕಾರವನ್ನು ಉರುಳಿಸುವುದೇ ಅವರ ಉದ್ದೇಶ. ಅದಕ್ಕೆ ಎಡೆ ಮಾಡಿಕೊಡದೆ ನೀವು ರೆಡ್ಡಿ ಸಹೋದರರು ಒಂದಾಗಿ ಆಡಳಿತ ಮಾಡಿದರೆ ಜನತೆಗೆ ಖುಷಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ದ್ರಾವಿಡ ಸಂಸ್ಕೃತಿಯಿಂದ ದಲಿತರನ್ನು ವಿಮುಖರನ್ನಾಗಿಸುವ ಯತ್ನ: ಪೇಜಾವರ ಸ್ವಾಮೀಜಿ ತಂತ್ರಕ್ಕೆ ದ್ರಾವಿಡ ಮಹಾಸಭಾ ಖಂಡನೆ
»ಕೇಸರಿ ಬಣ್ಣ ಯಾವುದೇ ಪಕ್ಷದ ಸಂಕೇತವಲ್ಲ: ಹಂಸರಾಜ್ ಭಾರದ್ವ್ವಾಜ್
»ಕೆಪಿಸಿಸಿ ಅಧ್ಯಕ್ಷರ ಚುನಾವಣೆ 21ಕ್ಕೆ ಮುಂದೂಡಿಕೆ
» ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಖಾಸಗಿ ಬಸ್‌ ಹೈಜಾಕ್‌: ಐವರ ಬಂಧನ
»ರಾಮಚಂದ್ರೇಗೌಡರಿಂದ ಸುಪ್ರೀಂಕೋರ್ಟ್‌ ತೀರ್ಪೂ ಉಲ್ಲಂಘನೆ !
»ಸರ್ಕಾರದ ಜತೆ ಸಂಘರ್ಷವಿಲ್ಲ ಆದರೆ ತಪ್ಪುಗಳನ್ನು ತಿದ್ದಲಷ್ಟೇ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇನೆ': ರಾಜ್ಯಪಾಲರ ಸ್ಪಷ್ಟನೆ
»ನೀತಿ ಸಂಹಿತೆ: ಕೇಂದ್ರ ಸಚಿವ ಸಲ್ಮಾನ್ ವಿರುದ್ಧ ದೂರು
»ಬೆಳಗಾವಿ: ವೈದ್ಯ ದಂಪತಿ ಆತ್ಮಹತ್ಯೆ
»ಉಗ್ರರಿಗೆ ಬಲಿಯಾದ ಕೊಡಗಿನ ಯೋಧನ ಅಂತ್ಯಕ್ರಿಯೆ
»ಬೆಂಗಳೂರಿನಲ್ಲಿ ನಾಳೆ ಈದ್.......
»ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
»ಸರಕಾರದಿಂದ ಸವಣೂರು ಪ್ರಕರಣ ಮುಚ್ಚಿಹಾಕಲು ಯತ್ನ: ಸಾಚಾರ್
»ಮಂತ್ರಿ ಸ್ಥಾನ ಬೇಕೆ ಬೇಕು: ಬೇಳೂರು ಗೋಪಾಲಕೃಷ್ಣ ಪಟ್ಟು
»ಅರಸೀಕೆರೆ : ಪರಿಶಿಷ್ಟರ ಸಭೆಗೆ ದಲಿತರಿಗಿಲ್ಲ ಆಹ್ವಾನ
»ಭೂ ಆಧಾರಿತ ಮೋಡ ಬಿತ್ತನೆಗೆ ಬ್ರೇಕ್ : ಸೌಲಭ್ಯಗಳನ್ನು ನಿರ್ಮಿಸುವಲ್ಲಿ ವಿಫಲವಾದ ಎನ್‌ಎ‌ಎಲ್ : ಮುಂದಿನ ವರ್ಷ ಈ ಯೋಜನೆ ಆರಂಭ
»ಹಾಸನ : ಸಿಬ್ಬ೦ದಿ ನೇಮಕ ವಿವಾದಕ್ಕೆ ರಾಷ್ಟ್ರೀಯ ಟಚ್ ಬರಲಿದೆ : ರಾಮಚಂದ್ರಗೌಡ ರಕ್ಷಣೆಗೆ ಜೋಷಿ?
»ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
»ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
»ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
»ಬೇಬಿ ಶಾಲಿನಿ: 13 ಭಾಷೆಗಳಲ್ಲಿ ಬರೆಯುವ ನಾಲ್ಕು ವರ್ಷದ ಪೋರಿ !
»5 ಶಾಸಕರಿಗೆ ಲೋಕಾಯುಕ್ತರ ನೋಟಿಸ್
»ಕನ್ನಮಂಗಲ ಭೂ ಹಗರಣ ಐಎಎಸ್ ಅಧಿಕಾರಿಗಳೂ ಭಾಗಿ
»ಮುಖ್ಯಮಂತ್ರಿ ನೇತೃತ್ವದ ನಿಯೋಗ ಚೀನಾಕ್ಕೆ
»ಮದನಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದಕ್ಕೆ
»ಹಣದ ಆಸೆಗೆ ಸ್ನೇಹಿತನನ್ನು ಹತ್ಯೆ ಮಾಡಿದ್ದ ಮೂವರಿಗೆ ಗಲ್ಲು ಶಿಕ್ಷೆ
»ಧಾರವಾಡ : ರೆಡ್ಡಿಗಳ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಕೇಸ್ ವಾಪಸ್: ಹೈಕೋರ್ಟ್ ಅತೃಪ್ತಿ
»ಬೆ೦ಗಳೂರು: ‘ಭ್ರಷ್ಟರ ಬಹಿಷ್ಕಾರಕ್ಕೆ ಪಣತೊಡಿ’ : ಯುವ ಜನಾಂಗಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕರೆ | ಅನ್ಯ ಕೆಲಸ ಬಿಟ್ಟು ಸಮರ್ಥ ಆಡಳಿತ ನಡೆಸಿ: ಸ‌ರ್ಕಾರಕ್ಕೆ ಸಲಹೆ
»ಚಿಕ್ಕಮಗಳೂರು : ಕುಡಿತಕ್ಕೆ ಕಾಸು ಕೊಡಲಿಲ್ಲವೆ೦ದು ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
»ತಿಪಟೂರು : ಇಲ್ಲಿ ಊರಿಗೂರೇ ವಿದ್ಯಾವಂತ ದಲಿತರು! 60 ವರ್ಷ ವಯಸ್ಸಿನ ಕೆಳಗಿನ ಯಾರೊಬ್ಬರು ಅನಕ್ಷರಸ್ಥರಿಲ್ಲ
»ಬೆ೦ಗಳೂರು : 11ರಿಂದ ಸಿ‌ಎಂ ಯಡಿಯೂರಪ್ಪ ಚೀನಾ ಪ್ರವಾಸ
»ಅರಸೀಕೆರೆ : ಮೆಕ್ಕೆಜೋಳ ವಹಿವಾಟಿನಲ್ಲೂ ರೆಡ್ಡಿ ಸೋದರರ ಕೈವಾಡ : ಅನಿಲ್ ಲಾಡ್ ಸಿಡಿಸಿದ ಹೊಸ ಬಾಂಬ್
»ಗುಲ್ಬರ್ಗ : ಚುನಾವಣ ಪ್ರಚಾರ ವೇದಿಕೆಯಲ್ಲೇ ಕುಸಿದು ಬಿದ್ದ ಬ೦ಗಾರಪ್ಪ
»ಬೆ೦ಗಳೂರು : ಗಾರ್ಡನ್ ಸಿಟಿಯಲ್ಲಿ ರಸ್ತೆ ಮಧ್ಯೆ ಛಾವಣಿ ಉದ್ಯಾನವನ
»ಬೆ೦ಗಳೂರು : ಗೋಹತ್ಯೆ ನಿಷೇಧ : ಬಿಜೆಪಿ ನಾಯಕರಿಂದ ಪ್ರಚೋದನಕಾರಿ ಹೇಳಿಕೆ: ಕಾನೂನು ಕ್ರಮಕ್ಕೆ ಉಗ್ರಪ್ಪ ಆಗ್ರಹ
»ಸಕಲೇಶಪುರ : ಭಿಕ್ಷೆ ಬೇಡಲೆಂದು ರಾಜ್ಯಕ್ಕೆ ಬಂದು ‘ಭಯೋತ್ಪಾದಕ’ನಾದ ಕಾಶ್ಮೀರಿ!
»ಗುಲ್ಬರ್ಗ/ಕಡೂರು : ಕಾವೇರುತ್ತಿರುವ ಚುನಾವಣಾ ಕಣ: ಜನನಾಯಕರಿಂದ ಭರವಸೆ, ವಾಗ್ದಾಳಿ : ಸಿ‌ಎಂ ಜಾತಿ ರಾಜಕಾರಣ: ಎಚ್‌ಡಿಕೆ
»ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
»ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್: ಪೊಲೀಸ್ ಪೇದೆಗೆ ಧರ್ಮದೇಟು!
»ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಬೆಂಗಳೂರು ಯುವತಿಯರ ರಕ್ಷಣೆ
»ಮೈಸೂರು ವೈದ್ಯಕೀಯ ಕಾಲೇಜು ಪ್ರಕರಣ: ಹಿರಿಯರ ಕಡೆಗಣನೆ: ಕಿರಿಯ ಅಭ್ಯರ್ಥಿಗಳಿಗೆ ಬಡ್ತಿ
»48 ಡಿವೈಎಸ್ಪಿಗಳು, 23 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
»ಸಿಬ್ಬ೦ದಿ ನೇಮಕದಲ್ಲಿ ಅವ್ಯವಹಾರ: ಅರ್ಜಿ ಗೋಲ್‌ಮಾಲ್: ಅರ್ಜಿ ಸಂಖ್ಯೆಗಳೇ ಏರುಪೇರು : ಇ೦ದು ಕೋರ್ಟ್ ಗೆ ಸಚಿವರ ಪ್ರಮಾಣ ಪತ್ರ
»ಬೆ೦ಗಳೂರು : ಅದಿರು ಸಾಗಣೆ: ಖೆಹರ್ ಪಂಚಾಯ್ತಿ : ಲೈಸೆನ್ಸ್‌ಗೆ 9 ದಿನ ಅವಕಾಶ?
»ಬೆಂಗಳೂರು ಸರಣಿ ಸ್ಫೋಟ ಪ್ರಕರಣ: ಮಅದನಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
»ಮೈಸೂರು : ದಲಿತರಿಗೆ ಸಾಮಾಜಿಕ ಬಹಿಷ್ಕಾರ: ಪೇಜಾವರ ಶ್ರೀ ಉಪವಾಸ
»ಬೆ೦ಗಳೂರು :ಮ೦ಗಳೂರು, ರಾಯಚೂರು ಜಿಲ್ಲೆಯಲ್ಲಿ ದಿನವಿಡಿ ತು೦ತುರು ಮಳೆ
»ಬೆ೦ಗಳೂರು : ಗಣೇಶ ಹಬ್ಬದ ಪ್ರಯುಕ್ತ ಸೆ.9 ರಿ೦ದ 12ರವರೆಗೆ 600 ವಿಶೇಷ ಬಸ್
»ಏಷ್ಯಾದ ಅತಿ ದೊಡ್ಡ ದರೋಜಿ ಕರಡಿಧಾಮಕ್ಕೆ ಕುತ್ತು : ಬಳ್ಳಾರಿಯ ಕರಡಿಧಾಮದ ಸನಿಹದಲ್ಲೇ ಭೂಷಣ್‌ಸ್ಟೀಲ್ಸ್ ಉಕ್ಕು ಕಾರ್ಖಾನೆಯ ಪ್ರಸ್ತಾಪ
»ಬೆ೦ಗಳೂರು : ಗೋಹತ್ಯೆ ನಿಷೇಧ ಮಸೂದೆಗೆ ಅಂಕಿತಕ್ಕೆ ಆಗ್ರಹಿಸಿ ಬೀದಿಗಿಳಿದ: ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ : ಗೋವು ಮಾತ್ರ ಪವಿತ್ರವಾದರೆ ಎಮ್ಮೆ-ಕೋಣಗಳೇನು ಪಾಪ ಮಾಡಿವೆ?
»ಬೆ೦ಗಳೂರು : ಚುನಾವಣೆಯನಂತರ ಬಿರುಗಾಳಿ: ಮುನ್ಸೂಚನೆ ನೀಡಿದ ರೇವಣ್ಣ
»ಕಡೂರು/ಗುಲ್ಬರ್ಗ : ರಂಗೇರಿದ ಉಪಚುನಾವಣಾ ಕಣ: ಮತದಾರರ ಓಲೈಕೆಯಲ್ಲಿ ಅಗ್ರ ನಾಯಕರು
»ವಿಧಾನಸೌಧ ಮುಂಭಾಗ ಮೆಟ್ರೋ ಹಸಿರು ನಿಶಾನೆ
»ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಕ್ಕಳ ಕಳ್ಳರು
»ಖ್ಯಾತ ವಯೋಲಿನ್‌ ವಾದಕ ಸುಬ್ರಮಣ್ಯಂ ವಿರುದ್ಧ ಲೈಂಗಿಕ ಕಿರುಕುಳ ದೂರು ಸುಳ್ಳು ?
»ಮುಖ್ಯಮಂತ್ರಿ ಆಸ್ತಿ ತನಿಖೆಯಾಗಲಿ: ರಘುಪತಿ ಸವಾಲು
»ಅಧಿಕಾರ ಗದ್ದುಗೆ ಉಳಿಸಿಕೊಂಡ ಬಿ.ಜೆ.ಪಿ.
»ಬೆ೦ಗಳೂರು : ಮುಖ್ಯಮಂತ್ರಿ ಸೇರಿ ರಾಜ್ಯದ ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದ ಜಿಹಾದ್ ಪಾಕಿಸ್ತಾನ
»ಸಾಂಕ್ರಾಮಿಕ ರೋಗ ನಿಯಂತ್ರಣ : ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ತೃಪ್ತಿ
»ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
»ಮೈಸೂರು ವೈದ್ಯಕೀಯ ಕಾಲೇಜು ನೇಮಕಾತಿ ಹಗರಣ: ಸಾಮಗ್ರಿ ಖರೀದಿಯಲ್ಲೂ ಅಕ್ರಮ
»ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆದಿ ಬಣಜಿಗಕ್ಕೆ 2 ಎ ಸೌಲಭ್ಯ : ಹೊಸ ವಿಷಯವಲ್ಲ:ಸಿ.ಎಂ
»ಆಧಾರ್ ಗೆ ಕೆಲವೇ ವಾರಗಳಲ್ಲಿ ಚಾಲನೆ
»ಅಕ್ರಮ ಗಣಿಗಾರಿಕೆ ಕಾಂಗ್ರೆಸ್‌ನವರ ಕುಮ್ಮಕ್ಕು - ಹೆಸರು ಹೇಳಿ ಇಲ್ಲವೇ ಕ್ಷಮೆ ಕೇಳಿ : ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ
»ಮಂಡ್ಯ ನಗರಸಭೆಯಲ್ಲಿ ಹೋಮ-ಹವನ!: ಅಧ್ಯಕ್ಷರಿಂದ ಮೌಢ್ಯತೆಯ ಪ್ರದರ್ಶನ : ಸಂಪ್ರದಾಯಕ್ಕೆ ನಾಂದಿ
»ಬೆಳಗಾವಿ : ಎಚ್1ಎನ್1: ಇಬ್ಬರ ಸಾವು
»ಕೋಲಾರ : ವರ್ತೂರ್ ಪ್ರಕಾಶ್, ಶ್ರೀನಿವಾಸ ಗೌಡರಿಗೂ ಕಾಂಗ್ರೆಸ್ ಸಂಬಂಧವಿಲ್ಲ: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ
»ಬೆ೦ಗಳೂರು : ಹಾಸ್ಟೆಲ್‌ನಲ್ಲಿ ಅಕ್ರಮವಾಸಿಗಳು! ಅವ್ಯವಸ್ಥೆ ಸರಿಪಡಿಸುವುದರ ವಿರುದ್ಧ ಪ್ರತಿಭಟನೆ
»ಚಿಕ್ಕಮಗಳೂರು : ಕಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ: ಬಿರುಸುಗೊಂಡ ಪ್ರಚಾರ; ಭರವಸೆಗಳ ಮಹಾಪೂರ
»ಕೆಪಿಸಿಸಿ ಗಾದಿ ಲಿಂಗಾಯಿತರಿಗೆ ನೀಡಿ; ಹೈಕಮಾಂಡ್‌ಗೆ ಲಿಂಗಾಯಿತ ಮುಖಂಡರ ಆಗ್ರಹ
»ವಿಮಾನ ನಿಲ್ದಾಣ ಶೀಘ್ರ ಆರಂಭ: ಈ ಬಾರಿ ದಸರಾ ಮಹೋತ್ಸವಕ್ಕೆ ಪ್ರವಾಸಿಗರಿಗೆ ವಿಮಾನ ಸೌಲಭ್ಯ
»ಸರ್ಕಾರ ನೇಮಕಾತಿಯನ್ನೇ ಅಸಿಂಧುಗೊಳಿಸಿದ್ದರೂ ಇನ್ನೂ ಸಚಿವರು ಸ್ಥಾನದಲ್ಲೇ ಉಳಿದಿದ್ದಾರೆಯೇ?!; ಪ್ರಮಾಣಪತ್ರ ಸಲ್ಲಿಸುವಂತೆ ಸಚಿವರಿಗೆ ಹೈಕೋರ್ಟ್ ಆದೇಶ
» ಗೋಹತ್ಯೆ ಸಹಿಸಲಾಗದು: ನಿಷೇಧ ಕಾಯ್ದೆಗೆ ಆಗ್ರಹಿಸಿ ಬಿಜೆಪಿ ಧರಣಿ; ’ಕೈ ಕಡಿದರೆ ಸಾಲದು, ತಲೆ ಕಡಿಯಬೇಕು’
»ದಸರಾಉತ್ಸವ:ಅರಮನೆ ಪ್ರವೇಶಿಸಿದ ದಸರಾ ಗಜಪಡೆ ; ಅದ್ದೂರಿ ಸ್ವಾಗತ
»ಅಕ್ರಮ ಗಣಿಗಾರಿಕೆ : ಧರಂ‌, ಕುಮಾರ್ ಬಂಧುಗಳು ಶಾಮೀಲು - ಮುಖ್ಯಮಂತ್ರಿ ಯಡಿಯೂರಪ್ಪ | ಗಂಡಸ್ತನ ಇದ್ರೆ ತಕ್ಷಣ ಜೈಲಿಗೆ ಹಾಕಿ ಇಲ್ಲವೇ ಬಹಿರಂಗ ಕ್ಷಮೆ ಯಾಚಿಸಿ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
»ಭಾರತವು ಜಗತ್ತಿನ ಸದೃಢ ರಾಷ್ಟ್ರ: ಪೋಲೆಂಡ್‌ ಪ್ರಧಾನಮಂತ್ರಿ ಡೊನೋಲ್ಡ್‌ ಟಸ್ಕ್.
»ಉಗ್ರರ ದಾಳಿಗೆ ಕೊಡಗಿನ ಯೋಧ ಬಲಿ
»ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಖಂಡಿಸಿ ನಾಳೆ ಪೇಜಾವರ ಸ್ವಾಮೀಜಿ ಉಪವಾಸ
»ಶಾಸಕ ಶ್ರೀನಿವಾಸ್‌ಗೆ ಲೋಕಾಯುಕ್ತ ನೋಟಿಸ್
»ಬೆ೦ಗಳೂರು : 8 ಮಂದಿ ಅಂತಾರಾಜ್ಯ ಕಳ್ಳರ ಬಂಧನ : 1.40 ಕೋಟಿ ರೂ.ವೌಲ್ಯದ ಚಿನ್ನಾಭರಣ ವಶ
»ಬೆ೦ಗಳೂರು : ಬಾಕಿ ಪ್ರಕರಣ ಇತ್ಯರ್ಥಕ್ಕೆ ವಿಶೇಷ ಯೋಜನೆ: ಮೂಲಭೂತವಾದಿಗಳು ಸಾಮಾಜಿಕ ನ್ಯಾಯದ ವಿರೋಧಿಗಳು: ಸಚಿವ ವೀರಪ್ಪ ಮೊಯ್ಲಿ
»ಬೆ೦ಗಳೂರು : ಕನ್ನಡ ಸಂಘ ಕಟ್ಟಿದ್ದಕ್ಕೆ ಸಿಕ್ಕಿದ್ದು ವೇತನ ಕಡಿತ ಹಾಗೂ ಅಮಾನತು
»ದೊಡ್ಡಬಳ್ಳಾಪುರ : ವರ್ಗಾವಣೆಗೆ ಕೌನ್ಸೆಲಿಂಗ್ : ಇಡೀ ದೇಶಕ್ಕೇ ಮಾದರಿಯಾದ ರಾಜ್ಯ
»ಬೆ೦ಗಳೂರು : ಇಡೀ ದೇಶದಲ್ಲೇ ಕರ್ನಾಟಕಕ್ಕೆ ಅತಿ ಹೆಚ್ಚು ಮತ್ತು ಅತಿ ಸುರಕ್ಷಿತವಾಗಿರುವ ಗಜರಾಜನ ನಂ.1 ನೆಲೆಬೀಡು ಎ೦ಬ ಗರಿ
»ಬೆ೦ಗಳೂರು : ಕೆಪಿಸಿಸಿ ಅಧ್ಯಕ್ಷತೆಗೆ ಪೈಪೋಟಿ: ಮೇಡಂ ಒಲವು ಯಾರೆಡೆ?
»ಮೈಸೂರು : ಇದೇ ಮೊದಲ ಬಾರಿ ಪದವಿ ಪೂರ್ವ ಉಪನ್ಯಾಸಕರಿಗೂ ಪ್ರಶಸ್ತಿ’
»ಗುಲ್ಬರ್ಗ/ಕಡೂರು : ಅಕ್ರಮ ಗಣಿಗಾರಿಕೆ: ಎರಡು ದಿನದೊಳಗೆ ಶ್ವೇತಪತ್ರ: ಸಿಎಂ : ರಣರಂಗವಾಗುತ್ತಿರುವ ಉಪಚುನಾವಣಾ ಕದನ: ಮತ ಬೇಟೆಗೆ ಇಳಿದ ನಾಯಕರು: ಕ್ಷೇತ್ರಗಳಲ್ಲಿ ಬೀಡು ಬಿಟ್ಟಿರುವ ಸರಕಾರ
»ಅಕ್ರಮ ಗಣಿಗಾರಿಕೆ: ರೆಡ್ಡಿ ಪತ್ನಿ ಹೆಸರಲ್ಲಿ 231 ಕೋಟಿ ರೂ. ಅದಿರು ವಹಿವಾಟು | ಕಾಂಗ್ರೆಸ್ಸಿಗರ ವಿವರ ಬಹಿರಂಗಕ್ಕೆ ಉಗ್ರಪ್ಪ ಆಗ್ರಹ
»ದಲಿತರ ದೇವಾಲಯ ಪ್ರವೇಶ ಮತ್ತು ಸಹಪಂಕ್ತಿ ಭೋಜನಕ್ಕೆ ಉತ್ತೇಜನ: ಪೇಜಾವರ ಶ್ರೀ
»ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಲು ಸಿದ್ಧ: ಡಿಕೆಶಿ
»ಬೆಂಗಳೂರಿನ ಈ ಹುಡುಗಿಗೆ ಇಪ್ಪತ್ತಲ್ಲ, 27 ಬೆರಳುಗಳು..!
»ಮಹಾತ್ಮ ಗಾಂಧಿ ರಸ್ತೆಯ ‘ನಮ್ಮ ಮೆಟ್ರೊ’ ನಿಲ್ದಾಣ...
»ಯಶಸ್ಸಿನ ಹಾದಿಯಲ್ಲಿ ಇ-ಪ್ರೊಕ್ಯೂರ್‌ಮೆಂಟ್; ರಾಜ್ಯ ಸರ್ಕಾರಕ್ಕೆ ಸುಮಾರು 4,000 ಕೋಟಿ ರೂಪಾಯಿ ಉಳಿತಾಯ
»ಹೊಸಪೇಟೆ: 56,000 ಟನ್ ಅದಿರು ವಶ
»ಬೆ೦ಗಳೂರು : ಆರೋಗ್ಯ ಹಣಪತಿ : ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು : ಕುಲಸಚಿವರ ಅಕ್ರಮ ನೇಮಕ: ಏಕಸದಸ್ಯ ನ್ಯಾಯಾಧೀಶರ ಸಮಿತಿ ತನಿಖೆಗೆ ನಿರ್ಧಾರ
»ಬೆ೦ಗಳೂರು : ಪಾನ ‘ಪ್ರಿಯ’ ಪತಿಯನ್ನೇ ಕೊಂದು ಹೂತಿಟ್ಟ ಪತ್ನಿ : 19 ದಿನದ ನಂತರ ಬೆಳಕಿಗೆ ಬ೦ದ ಕೃತ್ಯ
»ಬೆ೦ಗಳೂರು : ‘ಬಣ್ಣ’ ಮಿಶ್ರಿತ ಶಿಕ್ಷಣವನ್ನು ಮಕ್ಕಳ ಮೇಲೆ ಹೇರುವುದು ಅಪಾಯಕಾರಿ: ಶಿಕ್ಷಣ ವ್ಯವಸ್ಥೆ ಶಿಕ್ಷಕರ ಕೈಯಲ್ಲಿ ಇರಬೇಕೇ ಹೊರತು ಸಂಘಪರಿವಾರದ ಕೈಯಲ್ಲಲ್ಲ: ದೊರೆಸ್ವಾಮಿ
»ಹಾಸನ : ಅರಸೀಕೆರೆ ಈಗ ರಾಜಕೀಯ ಪ್ರಚಾರ ಕೇಂದ್ರ : ಹೆಲಿಕಾಪ್ಟರ್ ನಿ೦ದ ನೇರವಾಗಿ ಕಡೂರಿಗೆ ಇಳಿಯುವ ಬದಲು ಅರಸೀಕೆರೆಯಲ್ಲಿ ಇಳಿದು ಅಲ್ಲಿ೦ದ 36 ಮೈಲಿಗಳ ದೂರ ಕಾರಲ್ಲಿ ಪ್ರಯಾಣ
»ಗುಲ್ಬರ್ಗ/ಕಡೂರು : ಉಪಚುನಾವಣೆ : ಪ್ರಚಾರದ ಕಸರತ್ತಿನಲ್ಲಿ ರಾಜಕೀಯ ನಾಯಕರು
»ಬೆ೦ಗಳೂರು : ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮುಖ್ಯಮಂತ್ರಿಗೆ ಚು.ಆಯೋಗದ ನೋಟಿಸ್
»ಶಿವಮೊಗ್ಗ : ಮುಖ್ಯಮಂತ್ರಿಯ ತವರಲ್ಲೂ ಕೊಳೆಯುತ್ತಿದೆ ಬಡವರ ಅನ್ನ!: ಧರ್ಮಾರ್ಥ ಹಂಚಲೂ ಸಾಧ್ಯವಿಲ್ಲದಷ್ಟು ಕೊಳೆತಿರುವ ಸಾವಿರಾರು ಮೆಟ್ರಿಕ್ ಟನ್ ಧಾನ್ಯ
»ಬೋಧಕೇತರ ಸಿಬ್ಬಂದಿಯ ನೇಮಕಾತಿ ಹಗರಣ: ರಾಜೀನಾಮೆ ಪ್ರಶ್ನೆಯೇ ಇಲ್ಲ : ಸಚಿವ ರಾಮಚಂದ್ರೇಗೌಡ
»ಸಿರುಗುಪ್ಪ ಕೋರ್ಟ್‌ಗೆ ಹಾಜರಾದ ಜನಾರ್ದನರೆಡ್ಡಿ
»ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ: ತನಿಖೆ ಚುರುಕು
»ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ: ಬಿಜೆಪಿ ಆಡಳಿತಕ್ಕೆ ಅಡ್ಡಗಾಲು ಹಾಕಬೇಡಿ: ಭೈರಪ್ಪ ಉವಾಚ
»ಕಾರಣವಿಲ್ಲದೆ ಕೊಲ್ಲುತ್ತಿದ್ದ ಸೈಕೋಪಾತ್ ಸರಣಿ ಹಂತಕ ಸೆರೆ
»ಬೆ೦ಗಳೂರು : ವೈದ್ಯಕೀಯ ಕಾಲೇಜು ನೇಮಕಾತಿ ಅವ್ಯವಹಾರ: ನಾನು ಕುರಿ, ನನ್ನ ಮಗ ಕುರಿ ಮರಿ: ಸಚಿವ ರಾಮಚಂದ್ರ ಗೌಡ
»ಧಾರವಾಡ : ಬುರುಡೆ ರಹಸ್ಯ ಬಯಲು : ‘ತಲೆಬುರುಡೆಗಳಲ್ಲಿ ಮಹಿಳೆಯರದ್ದೂ ಇವೆ’
»ಅ೦ಕಹಳ್ಳಿ : ತಮಟೆ ಬಾರಿಸಲು ನಿರಾಕರಿಸಿದ ದಲಿತರು : ಎರಡು ಗುಡಿಸಲುಗಳಿಗೆ ಬೆಂಕಿ : ಸಾಮಾಜಿಕ ಬಹಿಷ್ಕಾರ
»ಕಡೂರು ಕ್ಷೇತ್ರ ದತ್ತು: ಸಿ‌ಎಂ ಘೋಷಣೆ
»ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ : ಸಚಿವ ಸ್ಥಾನ ತೊರೆಯಲು ಮುನಿಯಪ್ಪ ಮನಸ್ಸು?
»ಬೆ೦ಗಳೂರು : ಶರಣಾಗುವ ನಕ್ಸಲೀಯರಿಗೆ 2 ಲಕ್ಷ ರೂ. ಸಾಲ ಸೌಲಭ್ಯ: ಪೊಲೀಸ್ ಇಲಾಖೆ
»ಸಾಕ್ಷರತೆಯಲ್ಲಿ ಸಾಧನೆ : ರಾಜ್ಯಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿ
»ಕುಶಾಲನಗರದಲ್ಲಿ ಸಂಭ್ರಮದ ಕೈಲ್‌ಪೊದ್‌
»ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
»ಮೆಟ್ರೋ ರೀಚ್‌ 2ಕ್ಕೆ ಕೇಂದ್ರದ ಅನುಮತಿ ಇನ್ನೂ ಇಲ್ಲ
»ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ: ಬಂದರು ಅಧಿಕಾರಿ ಬಂಧನ
»ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಹಿಂದೇಟು: ಸಾರಿಗೆ ಇಲಾಖೆಯಲ್ಲಿ 'ಪ್ರಭಾವಿ' ಅಧಿಕಾರಿಗಳ ರಕ್ಷಣೆ
»2 ಸಾವಿರ ಸಂಘ-ಸಂಸ್ಥೆಗಳ ಬ್ಯಾಂಕ್‌ ವಹಿವಾಟು ತಡೆಗೆ ಆರ್‌ಬಿಐ ಕ್ರಮ
»ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್‌ಪಿ ಸವಾಲು
»ಬೆ೦ಗಳೂರು : 11 ವರ್ಷದ ಪ್ರಕೃತಿಗೆ ಅ೦ತಾರಾಷ್ಟ್ರೀಯ ‘ನಗ್ರೋಡಿ ಪ್ರಶಸ್ತಿ’
»ಬೆ೦ಗಳೂರು : ರಾಷ್ಟ್ರೀಯ ಗುರುತು ಚೀಟಿ ಕಳಪೆ: ಕೇಂದ್ರ ಸರಕಾರಕ್ಕೆ ನೋಟಿಸ್
»ಚಿಕ್ಕಮಗಳೂರು : ತಾಕತ್ತಿದ್ದರೆ ಚರ್ಚೆಗೆ ಬರಲಿ : ಜೆಡಿಎಸ್ ಆರೋಪಕ್ಕೆ ಬಿಜೆಪಿ ಸವಾಲು
»200 ವರ್ಷ ಹಿಂದೆ ಸಾಮೂಹಿಕ ಶಿರಚ್ಛೇದ ನಡೆದಿತ್ತೆ? : ಅಣ್ಣಿಗೇರಿಯ ಬುರುಡೆ ರಾಶಿ ಹಿಂದೆ ಹಲವು ಅನುಮಾನ : ಸಿಕ್ಕೆದೇಸಾಯಿ ಸಂಸ್ಥಾನದ ಕ್ರೌರ್ಯ?
»ಕೊಪ್ಪ : ಕೋರ್ಟ್‌ಗೆ ನಕ್ಸಲ್ ನಾಯಕ
»ಧಾರವಾಡ : ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ : ಬಂದರು ಅಧಿಕಾರಿ ಬಂಧನ
»ಗುಲ್ಬರ್ಗ/ಕಡೂರು : ಉಪ ಚುನಾವಣೆ: ಪ್ರಚಾರದ ಪೈಪೋಟಿ
»ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅವ್ಯವಹಾರ: ವೈದ್ಯಕೀಯ ಸಚಿವರ ಪುತ್ರ ಸಹಿತ ಹಲವರು ಭಾಗಿ
»ಬೆಂಗಳೂರು : ಸರಣಿ ಸ್ಫೋಟದ ಆರೋಪಿ ಮದನಿ ಜಾಮೀನು ಅರ್ಜಿ ಸೆ.6ಕ್ಕೆ ವಿಚಾರಣೆ
»ವಿಶ್ವ ಸಾಂಸ್ಕೃತಿಕ ಸಂಸ್ಥೆಯಲ್ಲಿ ವಿಜೃಂಭಿಸಿದ ಗಡಿನಾಡ ಬೊಂಬೆಯಾಟ
»ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
»ಉಪಜಾತಿ ನಮೂದಿಸಲು ಒತ್ತಾಯ
»ಕೆಎ­ಸ್‌­ಆ­ರ್‌­ಟಿಸಿ ಅ­ಧಿಕಾ­ರಿಯ ದಿಢೀರ್‌ ರಾಜೀ­ನಾಮೆ
»ಶುಭಾ, ಭಾವಿ ಪತಿಯ ಕೊಲೆಗೂ ಆಕೆಗೂ ಸಂಬಂಧವಿಲ್ಲ
»ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ೦ದು ನಿಗದಿಪಡಿಸಿದ ಜಾಗದಲ್ಲಿನ 49 ಮನೆಗಳ ತೆರವು
»ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ
»ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
»ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ
»ಬೆ೦ಗಳೂರು : ಅಕ್ಕ ಸಮ್ಮೇಳನ: ಅಮೆರಿಕಾಕ್ಕೆ ರೇಣುಕಾಚಾರ್ಯ ನೇತೃತ್ವದ ತಂಡ
»ಅಣ್ಣಿಗೇರಿಯ ತಲೆ ಬುರುಡೆಗಳು: 150 ವರ್ಷಗಳ ಹಿಂದಿನದ್ದು: ತಲೆಬುರುಡೆಗಳ ಡಿಎನ್‌ಎ ಪರೀಕ್ಷೆ: ಸಚಿವ ಆಚಾರ್ಯ
»ಹುಬ್ಬಳ್ಳಿ : ಶ್ರೀಮ೦ತ ಪಾಳೆಗಾರರ ಎದುರೇ ಮಹಿಳೆಯೊಬ್ಬಳ ಬೆತ್ತಲೆ ಮಾಡಿದ ಹೇಯ ಘಟನೆ : ನೊ೦ದ ಮಹಿಳೆ ಆತ್ಮಹತ್ಯೆಗೆ ಶರಣು
»ಹಾಸನ : ಒಂದೇ ಪ್ರಕರಣ, ಇಬ್ಬರು ಉನ್ನತಾಧಿಕಾರಿಗಳಿ೦ದ ತನಿಖೆ!
»ಬೆ೦ಗಳೂರು : ಬಿಬಿ‌ಎಂಪಿ ಹೆಗ್ಗಣಗಳ ಶೋಧ : ರಾಜ್ಯ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲೇ ಇದೇ ಮೊದಲು ಲೆಕ್ಕಪರಿಶೋಧನೆ
»ಮುಧೋಳ : ರು. 1ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿದ ರೈತ : ಇಡೀ ರಾಜ್ಯವೇ ಕಣ್ಣೆತ್ತಿ ನೋಡುವಂತಾ ಗಿದೆ
»ಮೈಸೂರು : ಆರೆಸ್ಸೆಸ್‌ಗೆ ಶಿಕ್ಷಣ ಕ್ಷೇತ್ರ ಅಡವಿಡಲು ಸರಕಾರ ಸಂಚು: ‘ಸಮುದಾಯ ದೀಪ’ ಯೋಜನೆ ಬಗ್ಗೆ ಕಾಂಗ್ರೆಸ್ ಅನುಮಾನ
»ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್‌ಗೆ: 13ಕ್ಕೆ ರಜೆ
»ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್‌ನಿಂದ ದಾಖಲೆ ಬಹಿರಂಗ
»ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು: ಸರ್ಕಾರಕ್ಕೆ ತರಾಟೆ | ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
»ಬೆ೦ಗಳೂರು : ರಾಜಕಾರಣದಲ್ಲಿ ಶೇ.35ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು: ಅನಂತಮೂರ್ತಿ
»ಬೆಳಗಾವಿ : ದೇಶದ ಶ್ರೀಮಂತಿಕೆಗೆ ಪವಿತ್ರವಾದ ಹಿಂದೂ ಧರ್ಮವೇ ಕಾರಣ: ಭಾಗ್ವತ್
»ಸರಕಾರದ ವಿರುದ್ಧ ಆಕ್ರೋಶ: ಧರಣಿ ನಿರತ ಮಹಿಳೆ ಮೇಲೆ ಆಸಿಡ್ ದಾಳಿ
»ಮೈಸೂರು : ಪಕ್ಷೇತರ ಸಚಿವರಿಗೆ ಕೊಕ್ ಸಾಧ್ಯತೆ ? : ಪಕ್ಷ ಸಂಘಟಿಸಬಲ್ಲ ಸಮರ್ಥರಿಗೆ ಸಂಪುಟದಲ್ಲಿ ಸ್ಥಾನ: ಈಶ್ವರಪ್ಪ
»ಮಡಿಕೇರಿಯಲ್ಲಿನ ನಿರಾಶ್ರಿತ ಟಿಬೆಟಿಯನ್ನರು : 50 ವರ್ಷ ಪೂರೈಸಿದ ಸ೦ಭ್ರಮ : ಬೇಟಿ ನೀಡಿದ ದಲೈಲಾಮಾ
»ಬೆ೦ಗಳೂರು : ಕಳ್ಳಾಟಕ್ಕೆ ನವಬಂಧ : ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ, ಗಣಕೀಕರಣ ಸಹಿತ ಬಾರ್‌ಕೋಡಿ೦ಗ್ ವ್ಯವಸ್ಥೆ
»ಬೆ೦ಗಳೂರು : ಉಪ ಚುನಾವಣೆ ಪ್ರಚಾರಕ್ಕೆ ಕಾವು: ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ
»ಬೆ೦ಗಳೂರು : ಉಗ್ರರ ಗು೦ಡಿಗೆ ಬಲಿಯಾದ ಯೋಧರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ
»ಬೆ೦ಗಳೂರು : ಹಬ್ಬದ ವಿಶೇಷ: ಸೆ. ತಿ೦ಗಳಲ್ಲಿ 100 ಹೈಟೆಕ್ ಬಸ್ ಗಳು ರಸ್ತೆಗೆ
»ನಿವೃತ್ತ ಕೆಎಎಸ್‌ ಅಧಿಕಾರಿಯ ಕೊಲೆ ಪ್ರಕರಣ: ದಂಡುಪಾಳ್ಯ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ಕಾಯಂ
»ಹಾಸನ , ಮೈಸೂರು ವೈದ್ಯ ಕಾಲೇಜು ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು ವಿವಾದ: ಮುಷ್ಕರ ಕೈಬಿಡುವಂತೆ ಸಿಬ್ಬಂದಿಗೆ ಹೈಕೋರ್ಟ್‌ ಸಲಹೆ
»ಅಶ್ಲೀಲ ಚಿತ್ರ ನೋಡುತ್ತಿದ್ದ ತಾಪಂ ಇಓ ಅಮಾನತು
»ಅಣ್ಣಿಗೇರಿ 'ತಲೆ ಬುರುಡೆ' ವೃತ್ತಾಂತ: 100ಕ್ಕೂ ಹೆಚ್ಚು ತಲೆಬುರುಡೆ ಪತ್ತೆ. ಯುದ್ಧದ ಕ್ರೌರ್ಯವೇ, ವಾಮಾಚಾರವೇ ..ಬುರುಡೆ ಇತಿಹಾಸ ಪತ್ತೆಗೆ ಹರಸಾಹಸ
»ಶಂಕಿತ ನಕ್ಸಲ್‌ ಆರೋಪಿ ವಿಜ­ಯಾ­ಬಾಯಿ ನಿರ್ಧೋಷಿ
»ಲಿಂಗ­ನ­ಮಕ್ಕಿ ಮಟ್ಟ 1800 ಅಡಿಗೆ ಏರಿಕೆ
»ಸೆ.17ಕ್ಕೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ವೇಳಾಪಟ್ಟಿ ಪ್ರಕಟ
»ಏನಿದರ ರಹಸ್ಯ?: ಅಣ್ಣಿಗೇರಿಯಲ್ಲಿ ರಾಶಿ, ರಾಶಿ ತಲೆ ಬುರುಡೆ ಪತ್ತೆ
»ಅಕ್ರಮವಾಗಿ ಸಾಗಾಣಿಕೆ ಆರೋಪದ ಹಿನ್ನೆಲೆ: ಅದಿರು ರಫ್ತು ತಡೆಗೆ 7 ಸ್ಕ್ವಾಡ್ - 24 ಗಂಟೆ ತಪಾಸಣೆ: ಸಿಎಂ
»ಯಡಿಯೂರಪ್ಪಗೆ ಗುಂಡು ನಿರೋಧಕ 'ಜಪಾನ್ ಕಾರು' ; ಈ ವಾಹನ ವೆಚ್ಚ 40ಲಕ್ಷ ರೂಪಾಯಿ.
»ಬೆ೦ಗಳೂರು : ಶಿಕ್ಷಣ ಕ್ಷೇತ್ರ: ರಾಜ್ಯದ 13 ಮ೦ದಿಗೆ ರಾಷ್ಟ್ರ ಹಾಗೂ 14 ಮ೦ದಿಗೆ ರಾಜ್ಯ ಪ್ರಶಸ್ತಿ : ಸೆ.5ರಂದು ಪ್ರಶಸ್ತಿ ಪ್ರದಾನ
»ಚಿಕ್ಕಮಗಳೂರು : ಕಡೂರು ವಿಧಾನ ಸಭಾ ಉಪಚುನಾವಣೆ: ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
»ಬಾಗಲಕೋಟೆ : ‘ಅಕ್ಕ’ ಸಮ್ಮೇಳನಕ್ಕೆ ಹೋಗಲು ವೀಸಾ ಸಿಕ್ಕಿಲ್ಲ : ಸಿಎ೦ಗೆ ಮನವಿ
»ಬೆ೦ಗಳೂರು :ವೈದ್ಯ ಕಾಲೇಜುಗಳ ಸಿಬ್ಬ೦ದಿ ನೇಮಕದಲ್ಲಿ ಅವ್ಯವಹಾರ : 3 ದಿನದಲ್ಲಿ ಮತ್ತೊಂದು ವರದಿಗೆ ಸಿ‌ಎಂ ಸೂಚನೆ
»ಬೆ೦ಗಳೂರು : ರಾಜ್ಯದಲ್ಲಿ ವಿದ್ಯುತ್ ಅಭಾವ : ನಾಳೆಯಿಂದಲೇ ವಿದ್ಯುತ್ ಖರೀದಿ : ಮುಖ್ಯಮ೦ತ್ರಿ
»ಬೆ೦ಗಳೂರು : ಡಿಸಿಎಂ ಹುದ್ದೆ ಅನಗತ್ಯ: ರೇಣುಕಾಚಾರ್ಯ
»ಗಣಿ ಪರವಾನಗಿ ತಮಾಷೆನಾ...?: ಒಂದೇ ಜಾಗ, ಹಲವರಿಗೆ ಲೈಸೆನ್ಸ್: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್
»ಮೈಸೂರು : ಮದ್ಯಪಾನ, ಮಾಂಸಾಹಾರ ತ್ಯಜಿಸಿದರೆ ದಲಿತರಿಗೆ ವೈಷ್ಣವ ದೀಕ್ಷೆ: ಪೇಜಾವರ ಶ್ರೀ
»ವರುಣನ ಅಬ್ಬರ: ನಡುಗಡ್ಡೆಯಾದ ಗುಲ್ಬರ್ಗ-ಇಬ್ಬರು ಬಲಿ :ಕೊಡಗಿನಲ್ಲಿ ಧಾರಾಕಾರ ಮಳೆ; ಭಾಗಮಂಡಲ ಜಲಾವೃತ
»ಗುಲ್ಬರ್ಗ : ನಕ್ಸಲ್ ಗುಂಡಿಗೆ ಎದೆಯೊಡ್ಡಿದ ನರೋಣ ವೀರಯೋಧ : ಗ್ರಾಮದಲ್ಲಿ ಶೋಕ : ಇ೦ದು ಅ೦ತ್ಯ ಸ೦ಸ್ಕಾರ
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ‘ಆದಾಯ ನಿರೀಕ್ಷೆಯ ಬಜೆಟ್’ ಸಿಲಿಕಾನ್‌ಸಿಟಿಯ ಅಭಿವೃದ್ಧಿಗೆ 1890 ಕೋಟಿ ರೂ.ಸಾಲ
»ಬೆ೦ಗಳೂರು : ಮಳೆ ಹಾನಿ ರು.148 ಕೋಟಿ: 8198 ಮನೆ ಜಖಂ, 1.30 ಲಕ್ಷ ಹೆಕ್ಟೇರ್ ಬೆಳೆ ನಾಶ
»ಮತಾಂತರಕ್ಕೆ ನಕಾರ: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪತಿ!
»ಪರ್ತಕರ್ತನಿಗೆ ಬಿಜೆಪಿ ಶಾಸಕನಿಂದ ಸಾರ್ವಜನಿಕವಾಗಿಯೇ ಪ್ರಾಣಬೆದರಿಕೆ
»ಅದಕ್ಷರಿಗೆ ಕೊಕ್‌ : ಉಪಚುನಾವಣೆ ನಂತರ ಸಂಪುಟಕ್ಕೆ ಸಿಎಂ ಸರ್ಜರಿ
»ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ; ಟಿಕೆಟ್‌ ದರದಲ್ಲೇ ಈ ಸೌಕರ್ಯ
»ತಪ್ಪು ಮಾಡಿಲ್ಲ: ಲೋಕಾಯುಕ್ತರಿಗೆ ಮಾಹಿತಿ ನೀಡಲು ಸಿದ್ಧ: ರಾಜ್ಯಸಭಾ ಸದಸ್ಯ ಅನಿಲ್‌ ಲಾಡ್‌
»ಮುಂದು­ವ­ರಿದ ವೈದ್ಯ ಕಾಲೇಜು ಸಿಬ್ಬಂದಿ ಪ್ರತಿ­ಭ­ಟನೆ: ಉರುಳು ಸೇವೆ, ಇಬ್ಬರು ಅಸ್ವಸ್ಥ
»ಹಿಂದುಳಿದ ವರ್ಗ ಅಭಿವೃದ್ಧಿಗೆ ಸಾವಿರ ಕೋಟಿ: ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ; ಜಾತಿ ಲೆಕ್ಕಾಚಾರದ ಕಸರತ್ತು ಶುರು
»ಶೈಕ್ಷಣಿಕ ಗುಣಮಟ್ಟ ಕುಂಠಿತ- ವೀರಪ್ಪ ಮೊಯಿಲಿ ಕಳವಳ
»ಇಂದು ಬಿಬಿಎಂಪಿ 2010-11ನೇ ಸಾಲಿನ ಬಜೆಟ್ : ರೂ. 8,000 ಕೋಟಿ ಮೀರುವ ಮೊತ್ತ!
»ಮೈಸೂರು ವಿವಿ ಅಕ್ರಮ ನೇಮಕಾತಿ ಹಗರಣ - ಮಾಜಿ ಕುಲಪತಿಗಳ ವಿರುದ್ಧ ಕ್ರಮ ಯಾಕೆ ಸಾಧ್ಯ ಇಲ್ಲ?
»ಆರ್‌ಟಿಪಿಎಸ್ 3 ಘಟಕಗಳು ಸ್ಥಗಿತ
»ಚಿಕ್ಕಬಳ್ಳಾಪುರ : ‘ದೇಶದ ಸವಾಲುಗಳ ಪರಿಹಾರಕ್ಕೆ ಧ್ಯೇಯೋದ್ದೇಶದ ದಿಟ್ಟ ಹೆಜ್ಜೆ ಅಗತ್ಯ’: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
»ಜಮ್ಮುವಿನಲ್ಲಿ ಉಗ್ರರ ನಡುವಿನ ಗು೦ಡಿನ ಚಕಮಕಿಯಲ್ಲಿ ಎದೆಯೊಡ್ಡಿದ ಹಾಸನದ ಯೋಧ ಬಲಿ
»ರಾಯಚೂರು : ಅಮ್ಮನ ಆಸರೆ ಸಿಕ್ಕರೂ ವಾಸಕ್ಕೆ ಬಿಡದ ಸರ್ಕಾರ
»ರಾಮನಗರ ಜಿಲ್ಲೆಗೊಲಿದ ಸಂಸ್ಕೃತ ವಿಶ್ವವಿದ್ಯಾಲಯ : ಮಾಗಡಿಯ ಸೂರಪ್ಪನಹಳ್ಳಿಯಲ್ಲಿ 100 ಎಕ್ರೆ ಭೂಮಿ
»ಬೆ೦ಗಳೂರು : ಲಾಡ್ ಕಂಪನಿ ಮೇಲೆ ದಾಳಿ ರಾಜಕೀಯ ಪ್ರೇರಿತ : ಬಿಜೆಪಿಯ ಗೋಹತ್ಯೆಯ ನಿಷೇಧ ರಿಯಾಲಿಗೆ ಅವಕಾಶ ಬೇಡ; ರಾಜ್ಯಪಾಲರ ಭೇಟಿ; ಸಿದ್ದರಾಮಯ್ಯ ಆಗ್ರಹ
»ಗುಲ್ಬರ್ಗ : ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ: ಸಿಎಂ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ : ಇ೦ದು ಬೆ೦ಗಳೂರಿನಲ್ಲಿ ಸಭೆ
»ಬೆ೦ಗಳೂರು : ಅಬ್ದುಲ್ ನಾಸಿರ್ ಮದನಿಗೆ ಕಾಡುತ್ತಿದೆ ಮಡದಿ ಮತ್ತು ಮಕ್ಕಳ ನೆನಪು
»ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬನ್ನಿಗೋಳದ ಅಂಧ ಕಲಾವಿದೆ ಗಂಗಮ್ಮ ತಂದೆ ಶಿವಮೂರ್ತಿ
»ಬೆಳಗಾವಿ : ಹಿಂದೂ ಧರ್ಮ ವಿಶ್ವ ಶಾ೦ತಿಗಾಗಿ ಕೆಲಸ ಮಾಡುತ್ತಿದೆ : ಮೋಹನ್ ಭಾಗವಾತ್
»ಮೈಸೂರು ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿ ನೇಮಕದಲ್ಲೂ ಅಕ್ರಮ
»ಬೆ೦ಗಳೂರು : ಅಕ್ರಮ ಗಣಿಗಾರಿಕೆ : ತೀವ್ರ ತರಾಟೆ : ಲೋಕಾಯುಕ್ತರನ್ನೇ ಅವಲಂಬಿಸೋದ್ಯಾಕೆ? ಸರ್ಕಾರ ಏನು ಮಾಡುತ್ತಿದೆ?: ಹೈಕೋರ್ಟ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri