ರತ್ನಾಗಿರಿ, ಜು.29: ಭಾರೀ ಮಳೆಯಿಂದಾಗಿ ಕೊಂಕಣದ ರೈಲ್ವೆ ಹಳಿಗಳು ಹಾನಿಗೊಂಡಿದ್ದು, ರೈಲು ಸಂಚಾರ ತೀವ್ರ ಬಾಧಿತವಾಗಿದೆ. ತಾಂತ್ರಿಕ ಅದ್ಭುತವೆಂದೇ ಕರೆಯಲಾಗಿರುವ ಕೊಂಕಣ ರೈಲ್ವೆಯ ಹಳಿಗಳ ಮೇಲಿನ ರೈಲುಗಳ ಓಡಾಟವನ್ನು ಕುಂಭದ್ರೋಣ ಮಳೆಯು ದೆಸೆಗೆಡಿಸಿದೆ. ಹಳಿಗಳ ಮೇಲೆ ಗುಡ್ಡಗಳು ಜರಿದು ಬಿದ್ದುದರಿಂದಾಗಿ ಕಳೆದ 10 ದಿನಗಳಿಂದ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ರದ್ದುಗೊಳಿಸಲಾಗಿದೆ.
ರತ್ನಾಗಿರಿಯಿಂದ ಸುಮಾರು 20 ಕಿ.ಮೀ. ದೂರದ ನೀವ್ಸಾರ್ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆಯ ಹಳಿಗಳು 15 ಅಡಿ ನೀರಿನಲ್ಲಿ ಮುಳುಗಡೆಯಾಗಿವೆ. ಹಳಿಗಳ ಬುನಾದಿ ನೀರುಪಾ ಲಾಗಿದೆ. ಹಳಿ ಗಳನ್ನು ನೀರ್ಗಾಲುವೆಯೊಂದರ ಮೇಲೆ ರಚಿಸಲಾಗಿರುವುದರಿಂದ ಅಧಿಕಾರಿಗಳು ಇಂತಹ ಸಾಧ್ಯತೆಯನ್ನು ನಿರೀಕ್ಷಿಸಿದ್ದರು.
2005 ರಿಂದಲೇ ಪರಿಣತರು ದುರ್ಬಲಗೊಂಡಿರುವ ಬದಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಈಗಿರುವ ರೈಲು ನಿಲ್ದಾಣದ ಮೇಲೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪಕ್ಕೆ ಇನ್ನಷ್ಟೇ ಅನುಮೋದನೆ ದೊರೆಯಬೇಕಿದೆ. ಭೂ ಕುಸಿತದ ಬೆದರಿಕೆ ಇಲ್ಲಿ ಮುಂದುವರಿಯುವ ಸಾಧ್ಯತೆ ಯನ್ನು ತಜ್ಞರು ತರ್ಕಿಸಿದ್ದಾರೆ.
ಹೆಚ್ಚಿನ ಛೇದನಗಳು ದುರ್ಬಲವಾಗಿದೆ. ಅವುಗಳು ಎತ್ತರವನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಸುರಕ್ಷಿತವಾಗಿಸುವ ಬಗ್ಗೆ ತಾವು ಯೋಚಿಸುತ್ತಿದ್ದೇವೆ. ಇದು ಕೇಂದ್ರ ಬಜೆಟ್ನಡಿಯ ಸತತ ಪ್ರಕ್ರಿಯೆಯಾಗಿರುತ್ತದೆ. ತಾವಿದುವರೆಗೆ ಅದಕ್ಕಾಗಿ ರೂ. 900 ಕೋಟಿಗಳನ್ನು ಖರ್ಚು ಮಾಡಿದ್ದೇ ವೆಂದು ಕೊಂಕಣ ರೈಲ್ವೆಯ ಪ್ರಾದೇಶಿಕ ಪ್ರಬಂಧಕ ನಾಗತ್ತ್ ಆರ್. ತಿಳಿಸಿದ್ದಾರೆ.
ಕೊಂಕಣ ರೈಲ್ವೆಯು ಕಡಿದಾದ ಕಣಿವೆಗಳಲ್ಲಿ ಹಾದು ಹೋಗುತ್ತಿದ್ದು, ವೊಮೆಂಡಿಯಲ್ಲಿ ದುರಸ್ತಿ ಕಾರ್ಯವು ನಡೆಯುತ್ತಿದೆ.
ಭೂಕುಸಿತದಿಂದ ರಕ್ಷಣೆ ಪಡೆಯಲು ರಚಿಸಲಾಗಿರುವ ತಂತಿ ಜಾಲರಿ ಹಾಗೂ ಕಾಂಕ್ರೀಟ್ ಗೋಡೆಗಳು ಅದನ್ನು ತಡೆಯಲು ಅಸಮರ್ಥವಾಗಿವೆ. ಜೆವಿಸಿಗಳು ಅವಶೇಷಗಳನ್ನು ತೆರವುಗೊ ಳಿಸುವ ಯತ್ನ ನಡೆಸಿರುವಂತೆಯೇ ಅಲ್ಲಲ್ಲಿ ಸಣ್ಣ ಪ್ರಮಾಣದ ಕುಸಿತಗಳು ಸಂಭವಿಸುತ್ತಲೇ ಇವೆ. ಎರಡು ದಿನಗಳಲ್ಲಿ ಮಾರ್ಗ ಸಿದ್ಧವಾಗುತ್ತದೆಂದು ಅಧಿಕಾರಿಗಳು ಹೇಳುತ್ತಿದ್ದರೂ, ಭೂಕುಸಿತದ ಸಮಸ್ಯೆ ಪರಿಹಾರಕ್ಕೆ ಅನೇಕ ವಾರಗಳೇ ಬೇಕಾಗಬಹುದೆಂದು ಕಾರ್ಮಿಕರು ನುಡಿಯುತ್ತಿದ್ದಾರೆ.