ನವಎಹಲಿ: ಮುಸ್ಲಿಂ ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಬ್ಯಾಂಕ್ಗಳ ನಕಾರ; ಸೂಕ್ತ ಕ್ರಮಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ನೋಟಿಸ್ |
ಪ್ರಕಟಿಸಿದ ದಿನಾಂಕ : 2010-07-30
ಹೊಸದಿಲ್ಲಿ,ಜು.29: ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳು ಅವಕಾಶ ನೀಡುವುದಿಲ್ಲವೆಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯವು, ಈ ಸಮಸ್ಯೆಗೆ ಸ್ಪಂದಿಸಲು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಗ್ರಾಹಕರು ಕನಿಷ್ಠ ಹಣವನ್ನು ಉಳಿಸಿಕೊಳ್ಳುವ ಅಗತ್ಯವೂ ಇಲ್ಲದಂತಹ ಖಾತೆಗಳನ್ನು ತೆರೆಯಲು ಅವಕಾಶ ನೀಡುವ ಕುರಿತು ಬ್ಯಾಂಕ್ಗಳಿಗೆ ಆರ್ಬಿಐ 2005ರಲ್ಲಿ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವಂತೆ ಕೋರಿ ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಆರ್.ಗೋಪಾಲನ್ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ವಿವೇಕ್ ಮೆಹ್ರೋತ್ರಾ ಪತ್ರ ಬರೆದಿದ್ದು, ಅದರ ಒಂದು ಪ್ರತಿಯನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ರಿಗೂ ಕಳುಹಿಸಿಕೊಡಲಾಗಿದೆ.
ವಿಶಾಲವಾದ ಅರ್ಥಿಕ ವ್ಯವಸ್ಥೆಯು ಎಲ್ಲ ವರ್ಗದ ಜನತೆಗೂ ತಲುಪುವಂತಾಗಲು ಬ್ಯಾಂಕ್ಗಳು ಕನಿಷ್ಠ ಬ್ಯಾಲೆನ್ಸ್ ರಹಿತ ಖಾತೆಗಳನ್ನು ಆರಂಭಿಸಬೇಕೆಂದು ಆರ್ಬಿಐ ಸುತ್ತೋಲೆ ಹೇಳುತ್ತದೆ. ಅದರಲ್ಲೂ ವಿಶೇಷವಾಗಿ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ(ಎಸ್ಎಲ್ಬಿಸಿ) ಹಾಗೂ ಜಿಲ್ಲಾ ಬ್ಯಾಂಕುಗಳ ಜಿಲ್ಲಾ ಮಟ್ಟದ ಸಮಾಲೋಚಕ ಸಮಿತಿ(ಡಿಸಿಸಿಬಿ)ಗಳ ಮೂಲಕ ಈ ಬಗ್ಗೆ ಕಾರ್ಯ ತಂತ್ರಗಳನ್ನು ರೂಪಿಸಲು ರಾಜ್ಯ ಸರಕಾರಗಳಿಗೆ ಅವಕಾಶ ನೀಡಿರುವುದರಿಂದ ಹಾಗೆ ಮಾಡದೆ ಇರುವುದಕ್ಕೆ ಯಾವುದೇ ಕಾರಣಗಳನ್ನು ನೀಡಲು ಸಾಧ್ಯವಿಲ್ಲವೆಂಬುದು ಕೇಂದ್ರ ಸರಕಾರದ ವಾದವಾಗಿದೆ.
ಎಸ್ಎಲ್ಬಿಸಿ ಹಾಗೂ ಡಿಸಿಸಿಬಿ ಸಭೆಗಳನ್ನು ತಕ್ಷಣವೇ ಕರೆದು ಈ ವಿಷಯವನ್ನು ಬಗೆಹರಿ ಸುವಂತೆ ಮೆಹ್ರೋತ್ರಾ ತಿಳಿಸಿದ್ದಾರೆ. ‘‘ಆರ್ಬಿಐ ಸುತ್ತೋಲೆ ಬಗ್ಗೆ ಬ್ಯಾಂಕ್ಗಳಿಗೆ ನೆನಪಿಸು ವಂತೆ ನಾವು ಈ ಸಮಿತಿಗಳಿಗೆ ತಾಕೀತು ಮಾಡಿದ್ದೇವೆ’’ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿ ದ್ದಾರೆ. ಖಾತೆಗಳನ್ನು ತೆರೆಯುವುದಕ್ಕೆ ಬ್ಯಾಂಕ್ಗಳು ನಿರಾಕರಿ ಸುವುದು ಅಕ್ರಮವೆಂದು ಅವರು ಹೇಳಿದರು.
ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 90 ಸಾವಿರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಸಾಧ್ಯವಾಗಲಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಚಿವಾಲಯವು ಈ ಹೆಜ್ಜೆಯನ್ನಿಟ್ಟಿದೆ. ಮೊದಲು ಈ ಬಗ್ಗೆ ಆಂಧ್ರ ಪ್ರದೇಶದ ಅಲ್ಪಸಂಖ್ಯಾತ ಆಯೋಗಕ್ಕೆ ದೂರುಗಳು ಬಂದಿದ್ದವು. ಅದು ಈ ವಿಚಾರವನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ(ಎನ್ಸಿಎಂ)ಕ್ಕೆ ವರದಿ ಮಾಡಿತ್ತು. 2009-2010ರಲ್ಲಿ ಬ್ಯಾಂಕಿಂಗ್ ವಲಯದ ಬಗ್ಗೆ ಆಯೋ ಗಕ್ಕೆ ಎರಡು ಬಾರಿ ದೂರುಗಳು ಬಂದಿದ್ದವು.
ಮುಸ್ಲಿಮರಿಗೆ ಬ್ಯಾಂಕಿಂಗ್ ಸೇವೆಗಳು ಅಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆ ಮಾಹಿತಿಗಳು ತನಗೆ ಲಭಿಸಿರುವುದನ್ನು ಆರ್ಬಿಐ ಕೂಡಾ ದೃಢಪಡಿಸಿದೆಯೆಂದು ಎನ್ಸಿಎಂ ಅಧ್ಯಕ್ಷ ಮುಹಮ್ಮ ದ್ ಶಫಿ ಖುರೈಷಿ ತಿಳಿಸಿದ್ದಾರೆ. 2008-2009ರ ಸಾಲಿನಲ್ಲಿ ಅಲ್ಪಸಂಖ್ಯಾತರ ಬಾಹುಳ್ಯದ 121 ಜಿಲ್ಲೆಗಳಲ್ಲಿ ಬ್ಯಾಂಕ್ ಖಾತೆದಾರರ ಸಂಖ್ಯೆಯಲ್ಲಿ ಕೇವಲ ನಾಲ್ಕು ಶೇಕಡ ಹೆಚ್ಚಳವಾಗಿರುವು ದನ್ನು ಆರ್ಬಿಐ ಗಮನಕ್ಕೆ ತೆಗೆದುಕೊಂಡಿದೆಯೆಂದು ವರದಿ ತಿಳಿಸಿದೆ.
2007-2008ರ ಸಾಲಿನಲ್ಲಿ ಈ ಹೆಚ್ಚಳ 83.80 ಶೇ.ಆಗಿತ್ತು. ಪಶ್ಚಿಮಬಂಗಾಳ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ಸಹಿತ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ತೆರೆದ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಪಸಂಖ್ಯಾತರು ಅಧಿಕವಾಗಿ ರುವ ಜಿಲ್ಲೆಗಳಲ್ಲಿ ಬ್ಯಾಂಕ್ಗಳು ಸಾಲ ನೀಡಿಕೆ ಕುರಿತ ಆರ್ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲ ವೆಂಬ ಬಗೆಗೂ ಆರ್ಬಿಐ ತನ್ನ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.
ಆದರೆ ಆಂಧ್ರಪ್ರದೇಶದಲ್ಲಿ 90 ಸಾವಿರ ಮುಸ್ಲಿಂ ವಿದ್ಯಾರ್ಥಿಗಳಿಗೆ ಖಾತೆಗಳನ್ನು ತೆರೆಯುವುದಕ್ಕೆ ಬ್ಯಾಂಕ್ಗಳು ನಿರಾಕರಿಸಿವೆಯೆಂಬ ಎನ್ಸಿಎಂ ವರದಿಯನ್ನು ಮೆಹ್ರೋತ್ರಾ ಪ್ರಶ್ನಿಸಿದ್ದಾರೆ. ಇಷ್ಟೊಂದು ಪ್ರಮಾಣದ ಕ್ರಿಯಾಲೋಪಗಳು ನಡೆದಿರುವುದು ಸಚಿವಾಲಯದ ಗಮನಕ್ಕೆ ಬಾರದಿ ರುವುದು ಅಸಂಭವವೆಂದು ಅವರ ಅಭಿಪ್ರಾಯ.
‘‘ ಈ ಸಂಖ್ಯೆಯು 90 ಸಾವಿರ ಆಗಿರಲಿ ಅಥವಾ 900 ಆಗಿರಲಿ ಅಥವಾ 90 ಆಗಿರಲಿ, ಖಾತೆಗಳ ನ್ನು ತೆರೆಯಲು ಬ್ಯಾಂಕ್ಗಳು ಅನುಮತಿ ನಿರಾಕರಿಸುವುದು ಗಂಭೀರವಾದ ಲೋಪವಾಗಿದೆ ಮತ್ತು ಅದನ್ನು ಬಗೆಹರಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’’ ಎಂದು ಮೆಹ್ರೋತ್ರಾ ತಿಳಿಸಿದರು.
ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 90 ಸಾವಿರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳ ಲ್ಲಿ ವಿದ್ಯಾರ್ಥಿವೇತನ ಖಾತೆಗಳನ್ನು ತೆರೆಯಲು ಸಾಧ್ಯವಾಗಿಲ್ಲ.ಪಶ್ಚಿಮಬಂಗಾಳ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ಸಹಿತ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹೊಸತಾಗಿ ತೆರೆದ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಪಸಂಖ್ಯಾತರು ಅಧಿಕವಾಗಿರುವ ಜಿಲ್ಲೆಗಳಲ್ಲಿ ಬ್ಯಾಂಕ್ಗಳು ಸಾಲ ನೀಡಿಕೆ ಕುರಿತ ಆರ್ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ಆರ್ಬಿಐ ವರದಿಯಲ್ಲಿ ಆಕ್ಷೇಪ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30
|
|
|