ಮಂಗಳೂರು, ಜು.29: ಉಳ್ಳಾಲ ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಅಶ್ರಫ್ ಬಾವಾ ಕೋಡಿ ಅವಿರೋಧ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕಾಂಗ್ರೆಸ್ನ ಮುಸ್ತಫಾ ಅಬ್ದುಲ್ಲ್ಲಾ, ರತ್ನಾವತಿ, ಮುಹಮ್ಮದ್ ಮುಕ್ಕಚೇರಿ, ಫಾರೂಕ್ ಉಳ್ಳಾಲ, ಅಬ್ದುಲ್ ಸತ್ತಾರ್, ಸ್ಟೆಲ್ಲಾ ಡಿಸೋಜ, ರಝಿಯಾ ಇಬ್ರಾಹೀಂ, ಮತ್ತು ಬಿಜೆಪಿಯ ಭಗವಾನ್ ದಾಸ್ ಹಾಗೂ ಎಡಪಕ್ಷದ ಯು.ಕೆ. ಗೋಪಾಲ ಆಯ್ಕೆಯಾಗಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷತೆಗೆ ಕೆಲವು ಸದಸ್ಯರ ಮಧ್ಯೆ ಭಾರೀ ಪೈಪೋಟಿ ಇತ್ತು. ಈ ನಿಟ್ಟಿನಲ್ಲಿ ಶಾಸಕ ಯು.ಟಿ.ಖಾದರ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ ಮತ್ತಿತರ ಮುಖಂಡರು ಚರ್ಚೆ ನಡೆಸಿ ಅಂತಿಮವಾಗಿ ಅಶ್ರಫ್ ಬಾವಾ ಕೋಡಿಯವರ ಹೆಸರನ್ನು ಸ್ಥಾಯಿ ಸಮಿತಿಗೆ ಅಂತಿಮಗೊಳಿಸಿದ್ದು, ಪುರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು
ಪುರಸಭೆ ಸ್ಥಾಯಿ ಸಮಿತಿಯ ಮೊದಲ ಅಧ್ಯಕ್ಷರಾಗಿ ಬಾಸಿಲ್ ಡಿಸೋಜ, ದ್ವಿತೀಯ ಅಧ್ಯಕ್ಷರಾಗಿ ಮುಸ್ತಫಾ ಅಬ್ದುಲ್ಲಾ ಆಯ್ಕೆಯಾಗಿದ್ದರೆ, ಇದೀಗ ಅಶ್ರಫ್ ಬಾವಾ ಕೋಡಿ ಆಯ್ಕೆಯಾಗಿದ್ದಾರೆ. ಪುರಸಭೆಯಲ್ಲಿ ಉತ್ತಮ ಆಡಳಿತ ನಡೆಸುವ ಸಲುವಾಗಿ ವಿಪಕ್ಷವನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಸ್ಥಾಯಿ ಸಮಿತಿ ರಚಿಸಲಾಗಿದೆ ಎಂದು ಉಳ್ಳಾಲ ಪುರಸಭೆಯ ಅಧ್ಯಕ್ಷ ಯು.ಎ. ಇಸ್ಮಾಯೀಲ್ ಪತ್ರಿಕೆಗೆ ತಿಳಿಸಿದ್ದಾರೆ.