ಕುಂದಾಪುರ, ಸೆ.17: ಅಲ್ಪಸಂಖ್ಯಾತ ಮುಸ್ಲಿಂ ಪ್ರವರ್ಗ (2ಬಿ) ಮತ್ತು ಕ್ರಿಶ್ಚನ್ ಪ್ರವರ್ಗ (3ಬಿ) ಪಂಗಡದ ವಿದ್ಯಾರ್ಥಿಗಳಿಗೆ ಈ ಹಿಂದೆ ಬೋಧನಾ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಪಾವತಿಯಲ್ಲಿ ಬದಲಾವಣೆ ಮಾಡಲಾಗಿದ್ದು ಶೈಕ್ಷಣಿಕ ವರ್ಷದ ಮಧ್ಯ ದಲ್ಲಿ ಶುಲ್ಕಗಳನ್ನು ಪಾವತಿಸಲು ಕಷ್ಟ ಸಾಧ್ಯವಾದುದರಿಂದ ಹಿಂದಿನ ವರ್ಷದ ರಿಯಾಯಿತಿ ಆದೇಶವನ್ನು ಮುಂದುವರಿಸಬೇಕು ಎಂದು ಉಡುಪಿ ಜಿಲ್ಲಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ.
ಸರಕಾರದ ಹೊಸ ಆದೇಶವನ್ನು ಖಂಡಿಸಿ ಸಂಘಟನೆ ಈಗಾಗಲೇ ಬಸರೂರಿನ ಶಾರದಾ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದೆ. ಒಂದು ವೇಳೆ ಈ ರಿಯಾಯಿತಿ ಶುಲ್ಕ ಜಾರಿಯಾಗದಿದ್ದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.




























ಬೋಧನಾ ಶುಲ್ಕ ಪಾವತಿಸಲು ಅನಾನುಕೂಲ ವಾಗುತ್ತಿರುವ ವಿದ್ಯಾರ್ಥಿಗಳ ಕೈಯ್ಯಲ್ಲಿ ಮೊಬೈಲ್ ಫೋನ್ ಇರುತ್ತದೆ.. ಯಾವುದು ಮುಖ್ಯವೆಂದು ಹೆತ್ತವರು ಕಲಿಸಬೇಕು. ಇನ್ನು ಕೂಡಾ ನಾಚಿಕೆಯಾಗುವುದಿಲ್ಲವೇ ನಿಮಗೆ ನಾವು ಅಲ್ಪಸಂಖ್ಯಾತರು, ಹಿಂದುಳಿದವರು, ಬಡವರು ಎನಿಸಿಕೊಳ್ಳಲು….?
ಸಹೋದರ ಶ್ರೀನಿವಾಸರವರೇ, ಮೊಬೈಲ್ ಅನ್ನುವುದು ಇಂದು ತಾವು ಭಾವಿಸಿದಂತೆ ಅಲ್ಪಸಂಖ್ಯಾತರದ್ದಾಗಲೀ, ಹಿಂದುಳಿದವರದ್ದಾಗಲೀ, ಬಡವರದ್ದಾಗಲೀ,
ಕುಲದಿಂದ ಕುಲಕ್ಕೆ ಕೈಮಾರಿಬಂದ ಆಸ್ತಿಯ ಪಾಲಲ್ಲ. ಬದಲಾಗಿ ಅದು ಬಹುಸಂಖ್ಯಾತರಲ್ಲಿ ಬಹು ಮಂದಿ ಇಂದಿಗೂ ನಾಚಿಕೆಯಿಲ್ಲದೆ ಮಾನ (?) ಮಾಚಲು
ಉಪಯೋಗಿಸುವ ಒಂದಡಿ ಉದ್ದದ “ಕೋಮಣ” ವೆಂಬ ಬಟ್ಟೆ ತುಂಡಿಗಿಂತಲೂ ಕಸವಾಗಿ ಕಾಣುವ ಒಂದು ಬಲು ಅಗತ್ಯದ ವಸ್ತು ಅಷ್ಟೇ.
ಇದೀಗ ಅದರ
ಅನಿವಾರ್ಯತೆ ಎಷ್ಟಿದೆಯೆಂದರೆ ಅಬಲೆಯರು ಮನೆಯಿಂದ ಹೊರಟರೆ ಎಲ್ಲಿ ಯಾವಾಗ ದೇಶಸೇವೆಯ ನಾಟಕವಾಡುವ ಪುಂಡರ ಕೈಚಪಲಕ್ಕೆ ಗುರಿಯಾಗುವರೆಂದು ಹೇಳಲಸಾಧ್ಯ. ಏನಾದರೊಂದು ಅನಾಹುತ ಸಂಭವಿಸುವುದಕ್ಕಿಂತ ಮೊದಲೇ ರಕ್ಷೆಗಾಗಿ ಹಿಂದುಳಿದವರನ್ನೋ, ಅಲ್ಪಸಂಖ್ಯಾತರನ್ನೋ, ಅಥವಾ ಬಡವರನ್ನೋ
ಕರೆಯಬಹುದಲ್ಲವೇ? ಆದ್ದರಿಂದ ಭೋದನಾ ಶುಲ್ಕವನ್ನು ಮೊಬೈಲ್ನಲ್ಲಿ ಅಳೆಯದೆ ವಿಧ್ಯಾರ್ಥಿಗಳಿಗೆ ನೆರವಾಗುವಂತಹ ಒಂದೆರಡು ಬರಹಗಳಿಂದ
ಪುಣ್ಯ ಕಟ್ಟಿಕೊಳ್ಳುವಿರಾ? …..
ಮಾನ್ಯ ಸಲಾಂ ಅವರು ಹೇಳಿರುವ ವಿಷಯ ಸರಿಯೇ, ಆದರೆ ಶಾಲೆ ಹಾಗು ಕಾಲೇಜುಗಳಲ್ಲಿ ಅದರ ಬಳಕೆ ನಿಷಿದ್ಧ ಮತ್ತು ಶ್ರೀನಿವಾಸ ಅವರು ಹೇಳಿರುವುದು ವಿದ್ಯಾರ್ಥಿಗಳು(ಅಲ್ಪ ಸಂಕ್ಯತರು ) ಮೊಬೈಲ್ ಉಪಯೋಗಿಸಬಾರದು ಅಂತಲ್ಲ, ಅವರು ತಿರುಗದುವುದಕ್ಕೆ ಮತ್ತು ಮೆಸೇಜ್ ಮಾಡುವ ಹಣದಲ್ಲಿ ಅವರಂಥ ಇಬ್ಬರು ವಿದ್ಯಾಬ್ಯಾಸ ಮಾಡಬಹುದು. ಅಲ್ಪಸಂಕ್ಯತರೆಂದು
ದುರ್ಬಳಕೆ ಮಾಡಿಕೊಳ್ಳುವವರೆ ಹೆಚ್ಚು. ನಿಜವಾಗಿರುವ ಅಲ್ಪಸಂಕ್ಯತರಿಗೆ caste ಸರ್ಟಿಫಿಕೇಟ್ ತರಲು ಈಗಿನ ದಿನದಲ್ಲಿ ಬಹಳ ಕಷ್ಟ, ಅಲ್ಲೂ ಹಣ ಕಟ್ಟಬೇಕು.
ಮಾನ್ಯರೇ ಮೊಬೈಲ್ ಮತ್ತು ವಿದ್ಯಾಭ್ಯಾಸಕ್ಕೆ ಎಲ್ಲಿಯ ಸಂಬಂದ. ಮೊಬೈಲ್ ಅಧುನಿಕ ಜಗತ್ತಿಗೆ ವಿಜ್ಞಾನದ ಕೊಡುಗೆ. ಇಂದಿನ ಆಧುನಿಕತೆಯ ಬರದಲ್ಲಿ ಇಂದು ಪ್ರತ್ಯೋಬ್ಬರ ಕೈಯಲ್ಲೂ ಮೊಬೈಲ್ ಸಾಮಾನ್ಯವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿ ಇರುವವರು, ಕೂಲಿ ಕಾರ್ಮಿಕರು , ಕಟ್ಟು ಹೊರುವವರು, ಹೀಗೆ ಮೊಬೈಲ್ ಸೇವೆಯನ್ನು ಉಪಯೋಗಿಸುತ್ತಿರುವಾಗ ಅವರೊಡನೆ ನೀವು ಮೊಬೈಲ್ಗೆ ಖರ್ಚುಮಾಡುವ ಹಣವನ್ನು ನಿಮ್ಮ ಕುಟುಂಬದ ಇತರ ಖರ್ಚಿಗೆ ಬಳಸಬಹುದಲ್ಲವೆ ಎಂದು ಹೇಳಿದರೆ ಅದು ಮೂರ್ಖತನದ ಪರಮಾವಧಿ ಅನಿಸಲ್ವೆ ???
ಮಠ ಮಂದಿರಗಳಲ್ಲಿ ಕೋಟ್ಯಾಂತರ ಆಸ್ತಿ ಮತ್ತು ಚಿನ್ನಾಭರಣಗಳ ದಾಸ್ತಾನೆ ಇದೆ, ಯಾಕೆ ಈ ನಿಮ್ಮ ಘನತೆತ್ತ ಸರಕಾರ ಜನರ ತೆರಿಗೆ ಹಣವನ್ನು ಅಲ್ಲಿಗೆ ಧಾರೆಯೆರೆಯುತ್ತಿದೆ? ಶ್ರೀನಿವಾಸರವರೆ ನಾಚಿಕೆಯಾಗುವುದಿಲ್ಲವೇ?