ಹೊಸದಿಲ್ಲಿ, ಸೆ.11: ಭಾರತ ಮತ್ತು ಪಾಕಿಸ್ತಾನದ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ತನ್ನ ಮಾತೃಭೂಮಿಯ ರಕ್ಷಣೆಗಾಗಿ ಸೆ.10ರಂದು ವೀರಮರಣವನ್ನು ಹೊಂದಿದ ಹವಾಲ್ದಾರ್ ಅಬ್ದುಲ್ ಹಮೀದ್ನನ್ನು ಆತನ ಕುಟುಂಬಿಕರ ಜತೆಗೆ ಒಂದಷ್ಟು ಜನ ಇಂದು ನೆನಪಿಸಿಕೊಳ್ಳುತ್ತಿರಬಹುದು. ಆದರೆ ದೇಶವಾಸಿಗಳು ಧೀಮಂತ ಯೋಧನೊಬ್ಬನನ್ನು ಮಾತ್ರ ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದಾರೆ.
ಇಂಡೊ-ಪಾಕ್ ಯುದ್ಧದ ವೇಳೆ ವೀರ ಯೋಧ ಅಬ್ದುಲ್ ಹಮೀದ್ ದೇಶ ರಕ್ಷಣೆಗಾಗಿ ಶತ್ರು ದೇಶದ ಹಲವಾರು ಯುದ್ಧ ಟ್ಯಾಂಕರ್ಗಳನ್ನು ಸ್ಫೋಟಿಸಿ ಧ್ವಂಸ ಮಾಡಿದ್ದ. ಆತನ ಶೌರ್ಯಕ್ಕಾಗಿ ಭಾರತೀಯ ಸೇನೆ ತನ್ನ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರವನ್ನು ನೀಡಿತ್ತು.
1966ರಲ್ಲಿ ನಡೆದ ಗಣರಾಜ್ಯೋತ್ಸವದಂದು ಆತನ ಪತ್ನಿ ರಸೂಲನ್ ಬೀಬಿ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ರಿಂದ ಸ್ವೀಕರಿಸಿದ್ದರು.
ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯ ದಮುಪುರ ಗ್ರಾಮದಲ್ಲಿ 1933ರ ಜುಲೈ 1ರಂದು ಜನಿಸಿದ್ದ ಅಬ್ದುಲ್ ಹಮೀದ್, ಭಾರತೀಯ ಸೇನೆಯ 4ನೆ ಬೆಟಾಲಿಯನ್ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು.
1965ರ ಇಂಡೊ-ಪಾಕ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ್ದರು.




























ಅಬ್ದುಲ್ ಹಮೀದ್ರವರು.. ಕಾರಂತ, ಭಟ್ಟ,ದ್ವಿವೇದಿ ತ್ರಿವೇದಿ, ಚತುರ್ವೇದಿ, ರಾವ್, ಯೆದಪದಿತ್ತಯ,ಚದಪದಿತ್ತಾಯ, ತಿಂಗಳಾಯ, ಪಂಗಲಾಯ ಅಂತ ಸರ್ನೆಮ್ ಇಟ್ಟಿದ್ದಾರೆ ಯಾ ಬುಧ್ಧಿವಂತರ ಜಾತಿಯಲ್ಲಿ ಹುಟ್ಟಿದ್ದಿದ್ದರೆ ಶಾಲಾ ಪುಸ್ತಕದಲ್ಲಿ ಇರುತ್ತಿತ್ತು.
ಅಬ್ದುಲ್ ಹಮೀದ್ ರವರನ್ನು ಅಮರವಾಗಿರಿಸಲು, ಅವರೇನು ಬಾಬರಿ ಮಸೀದಿ ಧ್ವಂಸದ ಕರಸೆವಕರಾಗಿದ್ದರಾ? ಬೆಸ್ಟ್ ಬೇಕರಿ ಹತ್ಯಾಕಾಂಡದ ರುವಾರಿಯಾಗಿದ್ದರಾ? ಮುಂಬೈ ಗಲಭೆಯ ರುವಾರಿಯಾಗಿದ್ದರಾ? ಮಾಲೆಗಾವ್, ಮೆಕ್ಕಾ ಮಸ್ಜಿದ್, ಮದ್ಗಾವ್ ಮತ್ತು ಸಂಜೋತಾ ಸ್ಪೋಟ ನಡೆಸಿದ್ದರಾ? ನೈತಿಕ ಪೋಲಿಸ್ ಗಿರಿ ಮಾಡುತ್ತಿದ್ದರಾ? ಸಮಾಜೋತ್ಸವ ಮಾಡಿ ಭಾಷಣದಲ್ಲಿ ವಿಷಕಾರುತ್ತಿದ್ದರಾ?
ಮೇಲೆ ಹೇಳಿದ ಯಾವ ಘನ ಕಾರ್ಯದಲ್ಲಿಯೂ ಈ ಹುತಾತ್ಮ ಇಲ್ಲ ಅಂದ ಮೇಲೆ ‘ಯಾರು’ ತಾನೇ ನೆನಪಿಸ್ಕೊತಾರೆ?
ಷಾನ ತೇರಿ ಕಭೀ ಕಮ್ ನ ಹೋ ಆಯಿ ವತನ್ ಮೇರೆ ವತನ್