ದುಬೈ,ಸೆ.23: ಹಲವು ದಿನಗಳ ಕನಸಾಗಿತ್ತು ಇದು. ಕೊಲ್ಲಿ ನಾಡಿನ ಕನ್ನಡ ಸಂಘಟನೆಗಳ ಅವಿರತ ಮನವಿಗೆ ಸ್ಪಂದಿಸಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರ ಕೋರಿಕೆಯನ್ನು ಭಾರತ
ವಿಮಾನ ಯಾನ ಸಚಿವ ಅಜಿತ್ ಸಿಂಗ್ ಮಾನ್ಯಗೊಳಿಸಿದ್ದಾರೆ.
ದುಬೈ-ಮಂಗಳೂರು-ದುಬೈ ವಿಮಾನ ಮಾರ್ಗಗಳನ್ನು ಕೇಂದ್ರೀಯ ಮಟ್ಟದಲ್ಲಿ ಅನುಮೋದನೆಗೊಳಿಸಿ ಮಂಗಳೂರು ವಿಮಾನ ನಿಲ್ದಾಣವನ್ನು ಅಂತರ್ರಾಷ್ಟ್ರೀಯ ನಿಲ್ದಾಣವನ್ನಾಗಿ ಮಾರ್ಪಡಿಸಲು ಕೇಂದ್ರ ಸಚಿವರು ಅಧೀಕೃತವಾಗಿ ಘೋಷಿಸಿದ್ದಾರೆ. ಈ ಬಗ್ಗೆ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರು ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡಿಗರಿಗೆ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ Protector of Emigrants (POE)ಆಪೀಸ್ ನ್ನು ಹಾಗೂ ಮಂಗಳೂರು ವಿಮಾನ ನಿಲ್ದಾಣ ಕಚೇರಿಯನ್ನು ಉನ್ನತ ಮಟ್ಟಕ್ಕೇರಿಸುವ ಸೂಚನೆಯಾಗಿ ಅಧಿಕಾರಿಗಳು, ತಂತ್ರಜ್ಞಾನ ವ್ಯವಸ್ಥೆಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನೆರವೇರಿಸಲಿದೆ ಎಂದು ಅಬುಧಾಬಿಯ ಸಂಘಟಕ ಸರ್ವೋತ್ತಮ ಶೆಟ್ಟಿ ಗಲ್ಪ ಕನ್ನಡಿಗಕ್ಕೆ ಮಾಹಿತಿ ನೀಡಿದ್ದಾರೆ.
ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆಯವರು ಏಪ್ರಿಲ್ ತಾ.25 2012ರಂದು ಈ ಬಗ್ಗೆ ಕೇಂದ್ರ ವಿಮಾನ ಯಾನ ಸಚಿವ ಅಜಿತ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಪತ್ರದ ಪರಿಶೀಲನೆಯ ಫಲವಾಗಿ ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತರ್ರಾಷ್ಟ್ರೀಯ ಮಟ್ಟದ ಮನ್ನಣೆ ದೊರಕಿದೆ ಎಂದು ಅಜಿತ್ ಸಿಂಗ್ ತಿಳಿಸಿದ್ದು, ಭಾರತ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಹಾರಾಟ ನಡೆಸುವ ಎಲ್ಲಾ ಸರಕಾರಿ ಮತ್ತು ಖಾಸಾಗಿ ವಿಮಾನಗಳು ಮಂಗಳೂರಿನ ಸುಪರ್ದಿಗೆ ಬರಲಿದೆ. ಇದರಲ್ಲಿ ಜೆಟ್ ಏರ್ ವೇಸ್ ಈ ಹಿಂದೆಯೇ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಸಂಪರ್ಕ ಹೊಂದಿಕೊಳ್ಳಲು ಕೇಂದ್ರವನ್ನು ಕೇಳಿಕೊಂಡಿದೆ. ಅದು ಈಗ ಪರಿಶೀಲನೆಯಲ್ಲಿದೆ ಎಂದಿರುವ ಅಜಿತ್ ಸಿಂಗ್, ಕಿಂಗ್ ಫಿಶರ್ ವಿಮಾನ ಸಂಸ್ಥೆ ಇದುವರೆಗೆ ಅಂತ ರ್ರಾಷ್ಟ್ರೀಯ ಹಾರಾಟದ ಬಗ್ಗೆ ಮನವಿ ಸಲ್ಲಿಸಿಲ್ಲ ಎಂದು ಅವರು ಖಚಿತ ಪಡಿಸಿದ್ದಾರೆ.
ಹಲವು ವರ್ಷಗಳಿಂದ ಕೊಲ್ಲಿ ನಾಡಿನ ಕನ್ನಡಿಗರು ಅಪೇಕ್ಷಿಸಿದ್ದ ಗೌರವ ಇದೀಗ ಒಲಿದು ಬಂದಿದೆ. ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ, ಕೊಲ್ಲಿ ನಾಡಿನ ಕನ್ನಡ ಸಂಘಟನೆ ಪದಾಧಿಕಾರಿಗಳ ಅವಿರತ ಶ್ರಮಕ್ಕೆ ಸಂದ ಮನ್ನಣೆ. ಗಲ್ಪ್ ಕನ್ನಡಿಗ ಮತ್ತು ಕೊಲ್ಲಿನಾಡಿನ ಕನ್ನಡಿಗರು, ನೆಲದ ಕನ್ನಡಿಗರು ಅಭಾರಿಯಾಗಿದ್ದಾರೆ ಮತ್ತು ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.




























Requesting all the Associations in the Gulf to write a letter to Civil Aviation Minister Mr.Ajith Singh then only its possible for us to get more flights to Mangalore Airport. At the same time Mangalore Airport will get the International Status soonest possible. So please pressurise the Government as much as possible.
ತುಂಬಾ ಕೃತಜ್ಞತೆಗಳು ಶ್ರೀಯುತ ಜಯಪ್ರಕಾಶ್ ಹೆಗಡೆಯವರೇ…ನಿಮ್ಮ ಪ್ರಯತ್ನದ ಫಲವಾಗಿ ಹಲವಾರು ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದ ತುಳವರ ಕನಸು ನನಸು ಆದಂತೆ ಅನಿಸುತ್ತದೆ.ಎಷ್ಟೋ ನಮ್ಮ ಪ್ರದೇಶದ ಮಾನ್ಯ ಮಂತ್ರಿಗಳು ಹಲವಾರು ಭಾರಿ ಸುಳ್ಳು ಭರವಸೆ ಕೊಟ್ಟೂ ಅದು ಒಂದು ಕನಸು ಕನಸಾಗಿಯೇ ಉಳಿದಿತ್ತು. ಅದನ್ನು ನೀವು ನನಸಾಗಿ ಮಾಡಲು ಹೋರಾಡಿದ ನಿಮಗೆ ಮಗದೊಮ್ಮೆ ಕೃತತಜ್ಞತೆಗಳು ಸನ್ಮಾನ್ಯ ಮಂತ್ರಿಗಳೇ. ಇದರ ಜೊತೆ ಹಲವಾರು ಜನರ ಪರಿಶ್ರಮ ಕೂಡ ಅಡಕವಾಗಿದೆ. ಅವರಿಗೂ ಧನ್ಯವಾದಗಳು.
ಆದರೆ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಿಮಾನಗಳ ಓಡಾಟಕ್ಕೆ ಆಸ್ಪದವನ್ನು ಕಲ್ಪಿಸಿಕೊಡಿ.ಇಲ್ಲಿ ಯಾವ ರೀತಿಯ ಮೊನೋಪೋಲಿ ಬೇಡ.ಆಗತಾನೆ ಏರಿಂಡಿಯಾದ ಅಹಂಕಾರವನ್ನು ಮತ್ತು ಮೊನೋಪೊಲಿಯನ್ನು ಮುರಿಯಬಹುದು.ಜೈ ಹೋ ಜಯಪ್ರಕಾಶಜೀ. ನೀವು ಇನ್ನೂ ಹೆಚ್ಹಿನ ಕೆಲಸ ಮಾಡಿ ಜನರ ವಿಶ್ವಾಸವನ್ನು ಗಳಿಸಬೇಕು ಎಂಬುದಾಗಿ ನಾವೆಲ್ಲರೂ ಆ ಪರಮಾತ್ಮನಲ್ಲಿ ಪ್ರಾರ್ಥಿಸುವೆವು.
Wish scanned letter and the news headline matches!! It is under consideration! I wish Mr. Survotham Shetty’s appeal to people works out and the heading comes true! I believe Every Gulf Kannadiga hopes the (premature) news comes true!!
Great! Posting opinion in GK can not be any better with new Re Cap..
Hegdeyavarige dhanyavadagalu. Kannadigarige, modalagi staliya janarige job priority kodabeku. E vishayadali Hegdeyavara sahakara koruva.
ತುಂಬಾ ಧನ್ಯವಾದಗಳು ಜಯಪ್ರಕಾಶ್ ಹೆಗ್ಡೆ ಯವರಿಗೆ ಮತ್ತು ಸರ್ವೋತ್ತಂ ಶೆಟ್ಟಿ ಯವರಿಗೆ
ಕರ್ನಾಟಕದಲ್ಲಿ Protector of Emigrants (POE)ಆಪೀಸ್ ನ್ನು ಪ್ರಾರಂಭ ಮಾಡುವುದು ಒಂದು ಬಹಳ ದಿನಗಳ ಬೇಡಿಕೆ ಇದ್ದು ಇದನ್ನು ಸರಕಾರಕ್ಕೆ ಮನವರಿಕೆ ಮಾಡಿದ ಸರ್ವೋತ್ತಮಣ್ಣ ಮತ್ತು ಸಂಸದ ಜಯಪ್ರಕಾಶ್ ಹೆಗ್ಡೆಯವರಿಗೆ ನಮ್ಮ ಅಭಿನಂದನೆ ಮತ್ತು ದನ್ಯವಾದಗಳು. ಇದರಿಂದೆ ’immigration clearance ಗೆ ಒದಾಡುವ ಅಗತ್ಯ ಇರುವುದಿಲ್ಲ..
ದುಬೈ ಇಂದ ಮಂಗಲ್ಳೂರಿಗೆ ಇತರ ಖಾಸಗಿ ಸಂಸ್ಥೆಗಳ ಪಯಣ ಟಿಕೆಟ್ ಕ್ರಯ ಕಮ್ಮಿ ಮಾಡುವ ನಿಟ್ಟಿನಲ್ಲಿ ಸಹಾಯವಾದೀತು ಎಂದು ನಮ್ಮ ಹಂಬಲ…
ತುಂಬಾ ಧನ್ಯವಾದಗಳು ಜಯಪ್ರಕಾಶ್ ಹೆಗ್ಡೆ ಯವರಿಗೆ ಮತ್ತು ಸರ್ವೋತ್ತಂ ಶೆಟ್ಟಿ ಯವರಿಗೆ…
ಬಾರಿ ಯಡ್ದೆ ಕೆಲಸ ಅಣ್ಣ . ಸೋಲ್ಲುಮೇಲು ನಿಕ್ಲೆಗ್ಗ್ …..
ಕೇರಳದ ರಾಜ್ಯ ಸಭಾ ಸದಸ್ಯರಾದ ಪಿ ಅಹಮದ್ ಮತ್ತು ವಯಲಾರ್ ರವಿ ಅಸ್ತಂಗತರಾದರೆ ಮಾತ್ರ ಮಂಗಳೂರು ವಿಮಾನ ನಿಲ್ದಾಣ ಅಂತರ್ರಾಷ್ಟ್ರೀಯ ನಿಲ್ದಾಣವನ್ನಾಗಿ ಮಾಡಬಹುದು. ಇವರು ಜೀವದಲ್ಲಿ ಇರುವ ತನಕ ಇದು ದುಸಾಧ್ಯ. ಕಣ್ಣನೂರ್ ನಿಲ್ದಾಣವನ್ನು ಅಂತರ್ರಾಷ್ಟ್ರೀಯ ನಿಲ್ದಾಣವನ್ನಾಗಿ ಮಾಡುವ ಇವರ ಕೋರಿಕೆ ಈಡೇರುವ ವರೆಗೆ ಮಂಗಳೂರು ವಿಮಾನ ನಿಲ್ದಾಣ ಅಂತರ್ರಾಷ್ಟ್ರೀಯ ನಿಲ್ದಾಣವು ಮರಿಚಿಕೆ. ಕಾದು ನೋಡುವ
ತುಂಬ ಧನ್ಯವಾದಗಳು ಮಾನ್ಯ ಲೋಕ ಸಭಾ ಅಭ್ಯರ್ಥಿ ಶ್ರೀಮಾನ್ ಜಯಪ್ರಕಾಶ್ ಹೆಗ್ಡೆ ಹಾಗು ಅಭುದಾಬಿ ಕರ್ನಾಟಕ ಸಂಘದ ಅಧ್ಯಕ್ಯರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರಿಗೆ , ಕರಾವಳಿ ಕನ್ನಡಿಗರ ಕನಸೊಂದು ನನಸಾಯಿತು ಜೈ ಕರ್ನಾಟಕ.
ಥ್ಯಾಂಕ್ಸ್ ಮಾನ್ಯ.ಜಯಪ್ರಕಾಶ್ ಹೆಗ್ಡೆ
ನುಡಿದಂತೆ ನಡೆಯುವ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕನ ಇನ್ನೊಂದು ಹೆಸರೇ ಜಯಪ್ರಕಾಶ್ ಹೆಗ್ಡೆ……
ಜೈ ಹೋ ಜಯಪ್ರಕಾಶಜೀ.ನುಡಿದಂತೆ ನಡೆಯುವ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕ. ಕರಾವಳಿ ಕನ್ನಡಿಗರ ಕನಸೊಂದು ನನಸಾಯಿತು ಜೈ ಕರ್ನಾಟಕ.ಧನ್ಯವಾದಗಳು ಜಯಪ್ರಕಾಶ್ ಹೆಗ್ಡೆ ಯವರಿಗೆ ಮತ್ತು ಸರ್ವೋತ್ತಂ ಶೆಟ್ಟಿ ಯವರಿಗೆ
ಒಳ್ಳೆ ಸುದ್ದಿ, ಧನ್ಯವಾದಗಳು.
ದಯಾ ಮಾಡಿ ದುಬೈ – ಮ೦ಗಳೂರು ವಿಮಾನ ಸಮಯಕ್ಕೆ ಸರಿಯಾಗಿ ಹೋಗೋ ಹಾಗೆ ಮಾಡಿ, ಏರ್ ಇಂಡಿಯಾ ಎಕ್ಸ್ಪ್ರೆಸ್ ಗೆ ಟೈಮ್ ಸೆನ್ಸ್ ಇಲ್ಲ, ಕ್ಯಾರೆಲೆಸ್ಸ್.. ಕಲ್ಲಿ ವಲ್ಲಿ ಮೆನ್ಟಾಲಿಟಿ…
ತುಂಬಾ ಸಂತೋಷ…
ಥಾಂಕ್ ಯು ಜಯಪ್ರಕಾಶ್ ಹೆ…………ಗಾಡ್ ಬ್ಲೆಸ್ಸ್ ಯು